ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಪ್ರಾಧಿಕಾರದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಬಿಡಿಎ ಮನೆಗಳನ್ನು ನಿರ್ಮಾಣ ಮಾಡಿದ್ದು, ಅದೇ ಮಾದರಿಯಲ್ಲಿ ದೂಡಾ ವ್ಯಾಪ್ತಿಯಲ್ಲೂ ಗೃಹಗಳ ನಿರ್ಮಿಸಲು ಹೇಳಿದ್ದೇನೆ ಎಂದರು.
ಅವಳಿ ನಗರದ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಮನೆಗಳ ನಿರ್ಮಾಣ ಮಾಡಲಾಗುವುದು. ಎರಡೂ ನಗರ ಸೇರಿದಂತೆ ಇಡೀ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಮುಂದಿನ ಪ್ರಕ್ರಿಯೆ ಬಗ್ಗೆಚರ್ಚಿಸಲು ಸಭೆಯಲ್ಲಿ ಕೆಲವು ಸಲಹೆ, ಸೂಚನೆ ನೀಡಿದ್ದೇನೆ ಎಂದು ಸಚಿವ ಮಲ್ಲಿಕಾರ್ಜುನ ಹೇಳಿದರು.ವಿವಿಧ ಪ್ರದೇಶಗಳ ಆದಾರದಲ್ಲಿ ದರ ನಿಗದಿಪಡಿಸಿ, ಅಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆಗಳು, ನಿವೇಶನಗಳು, ಅಪಾರ್ಟ್ಮೆಂಟ್ಗಳ ನಿರ್ಮಾಣಕ್ಕೆ ಚರ್ಚಿಸಲಾಗಿದೆ. ದಾವಣಗೆರೆ ಉತ್ತರ, ದಕ್ಷಿಣ ಭಾಗದಲ್ಲಿ ಹೊಸ ಲೇಔಟ್ಗಳ ನಿರ್ಮಾಣವಾಗಿವೆ. ಪಾರದರ್ಶಕವಾಗಿ ಇ-ಸ್ವತ್ತು ನೀಡಬೇಕು. ಈ ಸ್ವತ್ತನ್ನು ಸಹ ಆನ್ಲೈನ್ ಮೂಲಕ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಸಾವಿರಾರು ರು. ಇದ್ದ ಭೂಮಿಯ ಬೆಲೆ ಇಂದು ಕೋಟಿ ಗಳಿಗೆ ತಲುಪಿದೆ. ನಮ್ಮ ಅವದಿಯಲ್ಲಿ ಆದ ಕೆಲಸ, ಕಾರ್ಯಗಳನ್ನು ಜನರು ಸ್ಮರಿಸುತ್ತಿದ್ದಾರೆ. ಬೆಂಗಳೂರು ಬಿಡಿಎ ಮಾದರಿಯಲ್ಲಿ ಜನರಿಗೆ ಅನುಕೂಲ ಆಗುವಂತೆ ಮನೆಗಳನ್ನು ನಿರ್ಮಿಸಲಾಗುವುದು. ದಾವಣಗೆರೆಯಲ್ಲೊಂದು ನಿವೇಶನ, ಸೂರು ಹೊಂದಬೇಕೆಂಬ ಬಡ, ಮಧ್ಯಮ ವರ್ಗದ ಜನರ ಕನಸು ಸಾಕಾರಕ್ಕೆ ತಾವು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭರವಸೆ ನೀಡಿದರು.