ಗೃಹಬಳಕೆ ಸಿಲೆಂಡರ್ ದಾಸ್ತಾನಿದ್ದು, ಸುಳ್ಳು ವದಂತಿ ಬೇಡ

KannadaprabhaNewsNetwork |  
Published : Mar 13, 2026, 02:00 AM IST
ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. | Kannada Prabha

ಸಾರಾಂಶ

ಹೆಚ್ಚು ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿದ್ದು, ಐವಿಆರ್‌ಎಸ್, ಮಿಸಡ್ ಕಾಲ್ ಮಾಡುವ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿ ಸದರಿ ಸಿಸ್ಟಮ್‌ಗಳು ಕಾರ್ಯನಿರ್ವಹಿಸುತ್ತಿಲ್ಲ.

ಧಾರವಾಡ:

ಸದ್ಯ ಸಿಲಿಂಡರ್‌ಗಳ ದಾಸ್ತಾನು ಲಭ್ಯವಿದ್ದು, ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು. ಹೆಚ್ಚುವರಿ ಸಿಲಿಂಡರ್‌ ದಾಸ್ತಾನು ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಹೆಚ್ಚು ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿದ್ದು, ಐವಿಆರ್‌ಎಸ್, ಮಿಸಡ್ ಕಾಲ್ ಮಾಡುವ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗಿ ಸದರಿ ಸಿಸ್ಟಮ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಪರ್ಯಾಯವಾಗಿ ಐಒಸಿಎಲ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಎಲ್‌ಪಿಜಿ ತೈಲ ಕಂಪನಿಗಳು ಗ್ರಾಹಕರಿಗೆ ಆರು ಬುಕ್ಕಿಂಗ್ ವಿಧಾನಗಳನ್ನು ಕಲ್ಪಿಸಿವೆ. ಗ್ರಾಹಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಸೌಲಭ್ಯ ಬಳಸಬಹುದು. ಪ್ರತಿ ಗೃಹಬಳಕೆಯ ಸಿಲೆಂಡರ್‌ನ್ನು ಬುಕ್‌ ಮಾಡಿ ಪಡೆದುಕೊಂಡ ನಂತರ ಮತ್ತೊಂದು ಗೃಹಬಳಕೆಯ ಸಿಲೆಂಡರ್ ಬೇಡಿಕೆಗಾಗಿ 25 ದಿನ ನಂತರ ಬುಕ್‌ ಮಾಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಮಸ್ಯೆಗಳಿದ್ದಲ್ಲಿ ಧಾರವಾಡ ನಗರ (ಸಹಾಯಕ ನಿರ್ದೇಶಕರು-9164603114 ಮತ್ತು ಆಹಾರ ನಿರೀಕ್ಷಕ-8296702244), ಧಾರವಾಡ ಗ್ರಾಮೀಣ (ಆಹಾರ ಶಿರಸ್ತೇದಾರ-9845202400 ಮತ್ತು ಆಹಾರ ನಿರೀಕ್ಷಕ-8310109795, 9845202400) ಹಾಗೂ ಅಳ್ನಾವರ (ಆಹಾರ ನಿರೀಕ್ಷಕ-9448221892), ಹುಬ್ಬಳ್ಳಿ ನಗರ (ಸಹಾಯಕ ನಿರ್ದೇಶಕ-9035074105 ಮತ್ತು ಆಹಾರ ನಿರೀಕ್ಷಕ-7618760734, ಹುಬ್ಬಳ್ಳಿ ಗ್ರಾಮೀಣ (ಆಹಾರ ನಿರೀಕ್ಷಕ-9482532326), ಕಲಘಟಗಿ ತಾಲೂಕು (ಆಹಾರ ನಿರೀಕ್ಷಕ-6364304842), ಕುಂದಗೋಳ ತಾಲೂಕು (ಆಹಾರ ನಿರೀಕ್ಷಕರ- 9448324052), ಅಣ್ಣಿಗೇರಿ ತಾಲೂಕು (ಆಹಾರ ಶಿರಸ್ತೇದಾರ-9620734505), ನವಲಗುಂದ ತಾಲೂಕು (ಆಹಾರ ನಿರೀಕ್ಷಕರ-8694971257) ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ಜೀವನದ ಮೇಲೆ ಪ್ರಭಾವ ಬೀರಿದ ದಾಸ ಸಾಹಿತ್ಯ
ನಾಳೆ ಜಿಲ್ಲಾದ್ಯಂತ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್