ನಗರ ಪಾಲಿಕೆಯ ವಾರ್ಡ್ ನಂಬರ್ 53ರ ಕುರುಬಾರಳ್ಳಿ 1ನೇ ಕ್ರಾಸ್ ನಲ್ಲಿ ಕುಡಿಯುವ ನೀರಿನೊಂದಿಗೆ ಕುಲಷಿತ ನೀರು ಮಿಶ್ರಣವಾಗುತ್ತಿದ್ದ ಕಾರಣ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಪ್ರತ್ಯೇಕ ಪೈಪ್ ಲೈನ್ ಅಳವಡಿಸಲು ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ನಗರ ಪಾಲಿಕೆಯ ವಾರ್ಡ್ ನಂಬರ್ 53ರ ಕುರುಬಾರಳ್ಳಿ 1ನೇ ಕ್ರಾಸ್ ನಲ್ಲಿ ಕುಡಿಯುವ ನೀರಿನೊಂದಿಗೆ ಕುಲಷಿತ ನೀರು ಮಿಶ್ರಣವಾಗುತ್ತಿದ್ದ ಕಾರಣ ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಪ್ರತ್ಯೇಕ ಪೈಪ್ ಲೈನ್ ಅಳವಡಿಸಲು ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ಸೋಮವಾರ ಗುದ್ದಲಿಪೂಜೆ ನೆರವೇರಿಸಿದರು.ವಾರ್ಡ್ ನಂ. 52ರ ಗಾಲ್ಫ್ ಕ್ಲಬ್ ನಿಂದ ಸತ್ಯ ಹರಿಶ್ಚಂದ್ರ ದೇವಸ್ಥಾನದವರೆಗೆ ಸುಮಾರು 35 ಲಕ್ಷ ರೂ. ಯುಜಿಡಿ ಕಾಮಗಾರಿ ಮತ್ತು ವಾರ್ಡ್ ನಂ.49ರ ಅದಂಖಾನ್ ಮಸೀದಿ ಹಾಗೂ ಹುಲ್ಲಿನ ಬೀದಿ ಅಕ್ಕಪಕ್ಕ ಕುಡಿಯುವ ನೀರಿಗೆ ಖುಲಷಿತ ನೀರು ಮಿಶ್ರಣವಾಗುತ್ತಿದ್ದ ಕಾರಣ 25 ಲಕ್ಷ ರೂ. ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.ಈ ವೇಳೆ ನಗರ ಪಾಲಿಕೆ ಮಾಜಿ ಸದಸ್ಯ ಕೆ.ಜಿ. ರಮೇಶ್, ವಾರ್ಡ್ ಅಧ್ಯಕ್ಷ ಬಾಬು ವಿನಯ್ ಪಾಂಚಜನ್ಯ, ನಾಗಣ್ಣ, ಪ್ರದೀಪ್ ಕುಮಾರ್, ಪುನೀತ್, ಕಿಶೋರ್, ಸಂತೋಷ್, ಇಇ ಶಿಲ್ಪಾ, ಎಇಇ ಧನುಷ್, ಸಂತೋಷ್, ಪ್ರಸನ್ನ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.