ಕನ್ನಡಪ್ರಭ ವಾರ್ತೆ ಚಾಮರಾಜನಗರ
ಈ ತಿಂಗಳ ಕೊನೆಯಲ್ಲಿ ಸಭೆ ಮಾಡುತ್ತಿದ್ದು, ಬೇಡಿಕೆ ಇರುವ ಉತ್ಪನ್ನವನ್ನು ಹೆಚ್ಚು ಉತ್ಪಾದನೆ ಮಾಡಲು ನಿರ್ಧರಿಸುತ್ತೇವೆ. ಕಳೆದ ಬಾರಿಯ 2025ರ ದಸರಾ ಮತ್ತು ದೀಪಾವಳಿ ಹಬ್ಬದಲ್ಲಿ ನಂದಿನಿ ತುಪ್ಪ ಹಾಗೂ ಉತ್ಪನ್ನ ಅಧಿಕವಾಗಿ ಸೇಲ್ ಆಗಿದೆ, 740 ಮೆಟ್ರಿಕ್ ಟನ್ ನಂದಿನಿ ಉತ್ಪನ್ನ ಕಳೆದ ಬಾರಿ ಹಬ್ಬದಲ್ಲಿ ಖರ್ಚಾಗಿತ್ತು, ಈ ಬಾರಿಯ ದಸರಾ ಹಾಗೂ ದೀಪಾವಳಿ ಹಬ್ಬದಲ್ಲಿ 1 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಮಾಡಲು ತಯಾರಿ ಮಾಡಿಕೊಂಡಿದ್ದೆವು. ಆದರೆ, 1 ಸಾವಿರದ 80 ಮೆಟ್ರಿಕ್ ಟನ್ ತುಪ್ಪ ಸೇಲ್ ಆಗಿದೆ, ನಮ್ಮ ನಂದಿನಿ ಬ್ರಾಂಡನ್ನು ಜನರು ಒಪ್ಪಿಕೊಂಡಿದ್ದಾರೆ. ನಂದಿನಿ ಬ್ರಾಂಡ್ನ ಕ್ವಾಲಿಟಿ ಚೆನ್ನಾಗಿ ಇರುವ ಕಾರಣ ತಿರುಪತಿಯವರು ಅಧಿಕ ತುಪ್ಪ ಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದರು.
ಕೇವಲ ರಾಜ್ಯದಲ್ಲಿ ಅಷ್ಟೇ ಅಲ್ಲ, ಬೇರೆ ರಾಜ್ಯದಲ್ಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ, ನಂದಿನಿಗೆ ಒಳ್ಳೆಯ ದೆಸೆ ಬಂದಿದೆ ಎಂದು ಕೆ.ವೆಂಕಟೇಶ್ ಹೇಳಿಕೆ ನೀಡಿದರು.ಅಶೋಕ್ ಹೇಳಿಕೆಗೆ ತಿರುಗೇಟು: ಚುನಾವಣೆಯಲ್ಲಿ ಸೋಲು- ಗೆಲುವು ಸಹಜ. ಸೋತ ಕೂಡಲೇ ಡಮ್ಮಿ ಆಗಲ್ಲ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು. ಬಿಹಾರ ಫಲಿತಾಂಶದ ಬಳಿಕ ಗಾಂಧಿ ಡಮ್ಮಿಯಾಗಿದ್ದಾರೆ ಎಂಬ ಆರ್.ಅಶೋಕ್ ಹೇಳಿಕೆ ಬಗ್ಗೆ ನಗರದಲ್ಲಿ ಸೋಮವಾರ ಮಾತನಾಡಿ, ಸೋತ ತಕ್ಷಣವೇ ಡಮ್ಮಿ ಆಗೋಕೆ ಸಾದ್ಯವಿಲ್ಲ, ಚುನಾವಣೆಯಲ್ಲಿ ಸೋಲು ಗೆಲವು ಕಾಮನ್. ಇದು ರಾಜ್ಯದ ಚುನಾವಣೆ ದೇಶದ ಒಟ್ಟಿಗೆ ನಡೆದಾಗ ಪಲಿತಾಂಶ ಏನಾಗುತ್ತೆ ನೋಡಬೇಕಲ್ಲ ಎಂದರು.ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಾರ್ ಸೋ ಬಾರ್ ಅಂತ ಮೋದಿ ಹೇಳಿದ್ರು ಕೊನೆಗೆ ಏನಾಯ್ತು, ಚುನಾವಣೆಯಲ್ಲಿ ಸೋತಿದ್ದೇವೆ ಅಂದ ತಕ್ಷಣ ಕಾಂಗ್ರೆಸ್ ಪಕ್ಷನೇ ಇಲ್ಲ ಅಂತ ಹೇಳೋಕೆ ಆಗುತ್ತಾ? ಬಿಹಾರ ಚುನಾವಣೆ ಸೋಲಿಗೆ ಮತ ಚೋರಿ ಆಗಿರೋದೆ ಕಾರಣ. ನವೆಂಬರ್ ಕ್ರಾಂತಿ ವಿಚಾರ ಸೃಷ್ಠಿ ಮಾಡಿರುವುದು ಬಿಜೆಪಿಯವರು ಮತ್ತು ಮಾಧ್ಯಮದವರೇ ಎಂದರು.