ತಿಪಟೂರಲ್ಲಿ ಬೃಹತ್ ಉದ್ಯೋಗಮೇಳ

KannadaprabhaNewsNetwork |  
Published : Dec 30, 2025, 01:30 AM IST
ತಿಪಟೂರಲ್ಲಿ ಬೃಹತ್ ಉದ್ಯೋಗಮೇಳ ಆಯೋಜನೆ : ಕೆ.ಟಿ. ಶಾಂತಕುಮಾರ್ | Kannada Prabha

ಸಾರಾಂಶ

ಕಲ್ಪತರು ನಾಡು ತಿಪಟೂರಿನಲ್ಲಿ ೨೦೨೬ರ ಜನವರಿ ೩೧ರಂದು ಶನಿವಾರ ನಗರದ ಎಸ್.ವಿ.ಪಿ ವಿದ್ಯಾಸಂಸ್ಥೆಯ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಮೂರನೇ ಬಾರಿಗೆ ಆಯೋಜಿಸಲಾಗುವುದೆಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಕಲ್ಪತರು ನಾಡು ತಿಪಟೂರಿನಲ್ಲಿ ೨೦೨೬ರ ಜನವರಿ ೩೧ರಂದು ಶನಿವಾರ ನಗರದ ಎಸ್.ವಿ.ಪಿ ವಿದ್ಯಾಸಂಸ್ಥೆಯ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಮೂರನೇ ಬಾರಿಗೆ ಆಯೋಜಿಸಲಾಗುವುದೆಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತ ಕುಮಾರ್ ತಿಳಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾವು ಆಯೋಜಿಸುವ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ೬೦ರಿಂದ ೭೦ ಕಂಪನಿಗಳು ಭಾಗವಹಿಸಲಿವೆ. ಎಸ್.ವಿ.ಪಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಎಸ್.ಕೆ. ರಾಜಶೇಖರ್ ಅಧ್ಯಕ್ಷತೆಯಲ್ಲಿ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಪಡೆಯಲು ಬಯಸುವ ಯುವಕರು, ಅಭ್ಯರ್ಥಿಗಳು ಜ.೨೦ನೇ ತಾರೀಖಿನೊಳಗೆ ಸ್ವ ವಿವರದ ಮಾಹಿತಿಯನ್ನು ನಗರದ ಕೆ.ಆರ್.ಬಡಾವಣೆಯಲ್ಲಿರುವ ನಮ್ಮ ಗೃಹ ಕಚೇರಿಗೆ ತಲುಪಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಮತಿಘಟ್ಟ ಶಿವಸ್ವಾಮಿ, ರಾಜಶೇಖರ್, ಶ್ರೀನಿವಾಸ್, ಗುರುಗದಹಳ್ಳಿ ನಟರಾಜು, ಮೋಹನ್ ಜಕ್ಕನಹಳ್ಳಿ, ಕುಪ್ಪೂರಪ್ಪ, ನಟರಾಜು, ಸುದರ್ಶನ್, ಆಲದಹಳ್ಳಿ ಚೆನ್ನೇಗೌಡ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ
ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ