ಹುಲಸೋಗಿ ಗ್ರಾಮ ದೊಡ್ಡಾಟದ ತೊಟ್ಟಿಲು: ಪ್ರೊ. ಟಿ.ಎಂ. ಭಾಸ್ಕರ್

KannadaprabhaNewsNetwork |  
Published : Feb 28, 2025, 12:46 AM IST
ಪೊಟೋ ಪೈಲ್ ನೇಮ್ ೨೭ಎಸ್‌ಜಿವಿ೧ ತಾಲೂಕಿನ ಹುಲಸೋಗಿ ಗ್ರಾಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಹುಲಸೋಗಿ ಗ್ರಾಮದ ದೊಡ್ಡಾಟ ಕಲಾ ಭಳಗದ ವತಿಯಿಂದ ಹಮ್ಮಿಕೊಂಡ ಪುಸ್ತಕ ಬಿಡುಗಡೆ ಹಾಗೂ ದೊಡ್ಡಾಟ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟನೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಟಿ ಎಮ್ ಭಾಸ್ಕರ್ ನೆರವೇರಿಸಿದರು. | Kannada Prabha

ಸಾರಾಂಶ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೂ ಹಾಗೂ ಹುಲಸೋಗಿ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ.

ಶಿಗ್ಗಾಂವಿ: ಒಳ್ಳೆಯ ಕೆಲಸಗಳು ನಮ್ಮನ್ನು ಪುಣ್ಯದ ಕಡೆಗೆ ಕೊಂಡೊಯುತ್ತವೆ. ಹಾಗೆಯೇ ನಾವು ಮಾಡುವ ಕೆಲಸಗಳು ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ತಿಳಿಸಿದರು.ತಾಲೂಕಿನ ಹುಲಸೋಗಿ ಗ್ರಾಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಹುಲಸೋಗಿ ಗ್ರಾಮದ ದೊಡ್ಡಾಟ ಕಲಾ ಬಳಗದ ವತಿಯಿಂದ ಹಮ್ಮಿಕೊಂಡ ಪುಸ್ತಕ ಬಿಡುಗಡೆ ಹಾಗೂ ದೊಡ್ಡಾಟ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೂ ಹಾಗೂ ಹುಲಸೋಗಿ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ದೊಡ್ಡಾಟ ಕಲೆ ಉಳಿಯಲು ಹುಲಸೋಗಿ ಗ್ರಾಮದ ಕಲಾವಿದರ ಶ್ರಮ ಬಹಳ ಇದೆ. ಹಾಗಾಗಿ ಹುಲಸೋಗಿ ಗ್ರಾಮವನ್ನು ದೊಡ್ಡಾಟದ ತೊಟ್ಟಿಲು ಎಂದರೆ ತಪ್ಪಾಗಲಾರದು. ಆ ತೊಟ್ಟಿಲು ನಿರಂತರವಾಗಿ ತೂಗುತ್ತಿರಬೇಕು. ಅಂದರೆ ದೊಡ್ಡಾಟ ಕಲೆಯನ್ನು ಜೀವಂತವಾಗಿಡಬೇಕು. ಅದಕ್ಕೆ ವಿಶ್ವವಿದ್ಯಾಲಯದ ಸಹಕಾರ ಸದಾ ಇರುತ್ತದೆ ಎಂದರು.ಹಿರಿಯ ಸಾಹಿತಿ ಡಾ. ಬಾಳಸಾಹೇಬ್ ಲೋಕಾಪುರ ಅವರು ಪುಸ್ತಕದ ಬಗ್ಗೆ ಮಾತನಾಡಿ, ವೀರ ವೀರಾಗಿ ಬಾಹುಬಲಿ ದೊಡ್ಡಾಟದ ಪುಸ್ತಕವು ಭರತ ಬಾಹುಬಲಿಯ ಚರಿತ್ರೆಯನ್ನು ತಿಳಿಸುವುದರ ಜತೆಗೆ ನಮ್ಮ ನೆಲಮೂಲ ಸಂಸ್ಕೃತಿಯ ಸೊಗಡನ್ನು ಬಿತ್ತರಿಸುತ್ತದೆ ಎಂದರು.ಪುಸ್ತಕ ವಿಮರ್ಶಕ ಡಾ. ಜಿನದತ್ತ ಹಡಗಲಿ ಮಾತನಾಡಿ, ಎಲ್ಲವುದಕ್ಕೂ ಮೂಲ ಜಾನಪದ, ರಂಗಭೂಮಿ. ಅದರಲ್ಲಿಯೂ ವಿಶೇಷವಾಗಿ ಬಯಲಾಟ ರಂಗಭೂಮಿಗೆ ತನ್ನದೇ ಆದ ಇತಿಹಾಸವಿದೆ. ಎಂ.ಎಸ್. ಮಾಳವಾಡ ಅವರ ಕೃತಿಗಳು ಕಲಾಕ್ಷೇತ್ರಕ್ಕೆ ಒಳ್ಳೆಯ ಕೊಡುಗೆಯಾಗಲಿವೆ ಎಂದರು.ಈ ವೇಳೆ ಜಾನಪದ ಕಲಾವಿದರಾದ ಶಂಭಯ್ಯ ಹಿರೇಮಠ ಉಪನ್ಯಾಸ ನೀಡಿದರು. ಎಂ.ಎಸ್. ಮಾಳವಾಡ ಸಾವಿತ್ರಮ್ಮ ತಿಪ್ಪಣ್ಣ ಸೊಲಬಕ್ಕನವರ ಫಕ್ಕೀರೇಶ ಬಿಸಟ್ಟಿ ಹಾಗೂ ಹಿರಿಯ ದೊಡ್ಡಾಟದ ಕಲಾವಿದರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೃತಿ ರಚನೆಕಾರರಾದ ಎಂ.ಎಸ್. ಮಾಳವಾಡ, ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ, ಡಾ. ಜಗನಾಥ ಗೆಣಣ್ಣವರ ಮಾತನಾಡಿದರು.ಕೊಟ್ರೇಶ್ ಮಾಸ್ತರ ಬೆಳಗಲಿ, ಎಸ್.ಎಫ್. ಮನಕಟ್ಟಿ, ನಾಗರಾಜ ಸಿಂಧೆ, ಪರಿಮಳ ಜೈನ, ಬಸವರಾಜ ಶಿಗ್ಗಾಂವಿ ಇತರರು ಇದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಕ್ಕೀರೇಶ ಕೊಂಡಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಚಂದ್ರಪ್ಪ ಸೊಬಟಿ ಸ್ವಾಗತಿಸಿದರು. ಬಸವರಾಜ ಶಿಗ್ಗಾಂವಿ ಹಾಗೂ ತಂಡದವರು ಪ್ರಾರ್ಥಿಸಿದರು. ಜನಪದ ಕಲಾವಿದ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳಿಗೆ ಸಂಸ್ಕೃತಿಯ ಅರಿವು ಮೂಡಿಸಿ

ರಾಣಿಬೆನ್ನೂರು: ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ನಮ್ಮ ಸಂಸ್ಕೃತಿಯ ಆಚಾರ, ವಿಚಾರಗಳ ಅರಿವು ಮೂಡಿಸಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಮತ್ತೀಹಳ್ಳಿ ತಿಳಿಸಿದರು.ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಆತ್ಮವಿಶ್ವಾಸವನ್ನು ರೂಢಿಸಿಕೊಂಡು ಅಧ್ಯಯನ ಕೈಗೊಂಡಲ್ಲಿ ಬದುಕಿನಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಶಾಲೆಗೆ ದಾನ ನೀಡಿದ ಶಂಕ್ರಗೌಡ ಕುಸಗೂರ, ಶಂಕ್ರಗೌಡ ತರಗನಹಳ್ಳಿ, ಗೀತಾ ಕೆಳಗಿನಮನಿ ಹಾಗೂ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಪಾಲಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!