ಕರ್ನಾಟಕ ಬಂದ್‌ಗೆ ಬದ್ಧವಾಗಿದ್ದೇನೆ: ವಾಟಾಳ್ ನಾಗರಾಜ್

KannadaprabhaNewsNetwork |  
Published : Aug 13, 2026, 01:45 AM IST
೧೨ಕೆಎಂಎನ್‌ಡಿ-೬ಮಂಡ್ಯದಲ್ಲಿ ನಡೆದ ಕಾವೇರಿ ಹೋರಾಟದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಭಾಗವಹಿಸಿದ್ದರು. | Kannada Prabha

ಸಾರಾಂಶ

ನಮ್ಮ ಕರ್ನಾಟಕ ಬಂದ್‌ಗೆ ವಿದ್ಯಾರ್ಥಿಗಳು, ಯುವಕರೇ ಶಕ್ತಿ. ಅವರೆಲ್ಲರೂ ಒಗ್ಗಟ್ಟಿನಿಂದ ಬಂದ್‌ಗೆ ಬೆಂಬಲ ಕೊಡಬೇಕು. ವಿದ್ಯಾರ್ಥಿಗಳು ಬಂದ್‌ನಲ್ಲಿ ಭಾಗವಹಿಸಲು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ರಜೆ ಕೊಡಬೇಕು. ಈ ಬಂದ್ ಕೇವಲ ಕಾವೇರಿ ನೀರನ್ನು ಮಾತ್ರ ಒಳಗೊಂಡಿಲ್ಲ. ಮಹದಾಯಿ, ಕಾವೇರಿ, ಕಳಸಾ- ಬಂಡೂರಿ, ಮೇಕೆದಾಟು ಅಣೆಕಟ್ಟು ಸೇರಿದಂತೆ ನಾಡಿನ ನೆಲ- ಜಲ, ಭಾಷೆ- ಗಡಿ ಸೇರಿದಂತೆ ಎಲ್ಲಾ ವಿಷಯಗಳೆಲ್ಲವನ್ನೂ ಒಳಗೊಂಡು ಕರ್ನಾಟಕ ಬಂದ್ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ, ಮಂಡ್ಯ

ಕರ್ನಾಟಕ ಬಂದ್‌ಗೆ ನಾನು ಬದ್ಧವಾಗಿದ್ದೇನೆ, ಭದ್ರವಾಗಿದ್ದೇನೆ. ಇವತ್ತು ಬಂದ್ ಬೇಡ ಎನ್ನುವವರು ಅವತ್ತೇಕೆ ಒಪ್ಪಿಕೊಂಡರು ಎಂದು ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು ಹೇಳಿಕೆಗೆ ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಪ್ರಶ್ನಿಸಿದರು.

ಅವರ ಹೊಂದಾಣಿಕೆ ಏನಿದೆಯೋ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಇತಿಹಾಸವನ್ನು ನೋಡಿದರೆ ಅಕ್ಕ- ಪಕ್ಕದಲ್ಲಿರೋರೇ ಕೈಕೊಟ್ಟಿರೋದು. ಅದೇ ರೀತಿ ಬಂದ್‌ಗೆ ಬೆಂಬಲವಿಲ್ಲ ಎನ್ನುವವರು ನನಗೆ ಕೈಕೊಟ್ಟಿದ್ದಾರೆಂದು ಹೇಳೋಲ್ಲ. ಅವರಿಗವರೇ ಕೈಕೊಟ್ಟಿಕೊಂಡಿದ್ದಾರೆ. ನಾವು ಕರೆ ನೀಡಿರುವ ಬಂದ್‌ಗೆ ಒಂದೂವರೆ ಕೋಟಿ ಜನ ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನಮ್ಮ ಕರ್ನಾಟಕ ಬಂದ್‌ಗೆ ವಿದ್ಯಾರ್ಥಿಗಳು, ಯುವಕರೇ ಶಕ್ತಿ. ಅವರೆಲ್ಲರೂ ಒಗ್ಗಟ್ಟಿನಿಂದ ಬಂದ್‌ಗೆ ಬೆಂಬಲ ಕೊಡಬೇಕು. ವಿದ್ಯಾರ್ಥಿಗಳು ಬಂದ್‌ನಲ್ಲಿ ಭಾಗವಹಿಸಲು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ರಜೆ ಕೊಡಬೇಕು. ಈ ಬಂದ್ ಕೇವಲ ಕಾವೇರಿ ನೀರನ್ನು ಮಾತ್ರ ಒಳಗೊಂಡಿಲ್ಲ. ಮಹದಾಯಿ, ಕಾವೇರಿ, ಕಳಸಾ- ಬಂಡೂರಿ, ಮೇಕೆದಾಟು ಅಣೆಕಟ್ಟು ಸೇರಿದಂತೆ ನಾಡಿನ ನೆಲ- ಜಲ, ಭಾಷೆ- ಗಡಿ ಸೇರಿದಂತೆ ಎಲ್ಲಾ ವಿಷಯಗಳೆಲ್ಲವನ್ನೂ ಒಳಗೊಂಡು ಕರ್ನಾಟಕ ಬಂದ್ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಸಮಗ್ರ ಕರ್ನಾಟಕದ ಪರಿಸ್ಥಿತಿ ಕಣ್ಣೀರಿನ ಕಥೆಯಾಗಿದೆ. ಇದನ್ನು ಕಂಡೂ ಬೆಂಬಲ ಕೊಡೋಲ್ಲ ಎಂದರೆ ಬೇಡ ಬಿಡಿ. ಈ ರಾಜ್ಯ ಏನು ಅವರ ಕೈಯ್ಯಲ್ಲಿದೆಯೇ. ಜನರು ಅವರು ಹೇಳಿದಂತೆ ಕೇಳುವರೇ. ಜನರು ನಮ್ಮ ಜೊತೆಗಿದ್ದರೆ ಅಷ್ಟೇ ಸಾಕು ಎಂದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್, ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್, ಸೌಭಾಗ್ಯ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

20ರಂದು ಅರಸು ಜಯಂತಿ: ಸಿದ್ಧತೆ ನಡೆಸಿ
ಪರಮಾಣು ವಿದ್ಯುತ್ ಸಾಮರ್ಥ್ಯ ವಿಸ್ತರಣೆಗೆ ಒತ್ತು