ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮಹಿಳಾ ಮೀಸಲಾತಿಯ ಸೋಗಿನಲ್ಲಿ ಕ್ಷೇತ್ರ ಮರು ವಿಂಗಡಣೆ ಮಾಡುವ ಮೂಲಕ ಮಹಿಳೆಯರಿಗೆ ಅನ್ಯಾಯ ಮಾಡಲು ಮುಂದಾಗಿದ್ದು, ಸಾವಿರಾರು ವರ್ಷಗಳಿಂದ ಮಹಿಳೆಯರಿಗೆ ಇವರು ಇಂತಹ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ ಎಂದು ಕಿಡಿಕಾರಿದರು.
ಕ್ಷೇತ್ರ ಪುನರ್ ವಿಂಗಡನೆ ಹಾಗೂ ಮಹಿಳಾ ಮೀಸಲಾತಿ ಮಸೂದೆಯನ್ನು ಒಂದೇ ಮತದಲ್ಲಿ ನಿರ್ಣಯಿಸಿ ಜಾರಿಗೆ ತರಲು ಮುಂದಾಗಿದ್ದರು. ಇದು ಮೂರ್ಖತನದ ಪರಮಾವಧಿ ಆದರೂ ಬಿಜೆಪಿಗರು ಬುದ್ದಿವಂತರಂತೆ ನಡೆದುಕೊಳ್ಳುತ್ತಿದ್ದಾರೆ. ಈ ಕುರಿತಂತೆ ಸಂಸದರು, ಕಾಂಗ್ರೆಸ್ ಮಹಿಳೆಯರಿಗೆ ಅನ್ಯಾಯ ಮಾಡಿದೆ ಎನ್ನುತ್ತಿದ್ದಾರೆ. ಹಾಗಾಗಿ ಎರಡು ಮಸೂದೆಗಳಿಗೆ ಒಂದೇ ಮತವಂತೆ ಹೇಗೆ ವಿಭಾಗವನ್ನು ಮಾಡುತ್ತಾರೆಂದು ಅವರು ತಿಳಿಸಬೇಕು ಎಂದರು.ಮಹಿಳಾ ಮೀಸಲಾತಿಯನ್ನು ಪ್ರಪ್ರಥಮವಾಗಿ ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರ. ನಾವು ಯಾವಾಗಲು ಮಹಿಳೆಯರ ಪರವಾಗಿ ಇದ್ದೇವೆ. ಆದರೆ ಈಗ ಬಿಜೆಪಿ ಅದನ್ನು ನಾವೇ ಸಾಧಿಸಲು ಹೊರಟ್ಟಿದ್ದೇವೆ ಎನ್ನುತ್ತಿದ್ದಾರೆ. ಅಷ್ಟು ಮಹಿಳೆಯ ಮೇಲೆ ಕಾಳಜಿ ಇದ್ದರೆ ಮಹಿಳಾ ಮೀಸಲಾತಿಯನ್ನು ಪ್ರತ್ಯೇಕವಾಗಿ ಜಾರಿಗೆ ತರಲು ಮತದಾನ ಮಾಡಬೇಕಿತ್ತು. ಇಲ್ಲದಿದ್ದರೆ ಚುನಾವಣೆ ನಂತರ ಚರ್ಚಿಸಬಹುದಿತ್ತು. ಆದರೆ ಅಂತಹ ಯಾವುದೇ ಯೋಚನೆ ಮಾಡದೆ ದುರುದ್ದೇಶದಿಂದ ಜಾರಿ ಮಾಡಲು ಹೊರಟ್ಟಿದ್ದಾರೆ. ಬಿಜೆಪಿಯವರ ಈ ಆಲೋಚನೆ ಹಿಂದೆ ಗೋಲ್ವಲ್ಕರ್ ಅವರ ಚಿಂತನಗಂಗಾದ ಉದ್ದೇಶ ಅಡಗಿದೆ ಎಂದು ಕಿಡಿಕಾರಿದರು.
ಇಲ್ಲಿನ ಸಂಸದರು, ಶಾಸಕರು ಕೂಡ ಚಿಂತನಗಂಗಾ ಪ್ರವೃತ್ತಿಯನ್ನು ಬೆಳೆಸಿಕೊಂಡು ಹಿಂದೂ ಸಮಾಜ ವಿರುದ್ದವಾಗಿ ಇದ್ದಾರೆ. ಚಿಂತನ ಗಂಗಾ ದಲಿತರು ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎಂದು ಹೇಳಿದೆ. ಒಕ್ಕೂಟ ವ್ಯವಸ್ಥೆ ವಿರುದ್ದವಾಗಿದೆ. ಇದನ್ನು ಬಿಜೆಪಿ ಒಪ್ಪುತ್ತಾರಾ. 1962ರಲ್ಲಿ ಜನಸಂಘ ಮೀಸಲಾತಿಯನ್ನು ವಿರೋಧಿಸಿದ್ದರು. ಈ ಬಗ್ಗೆ ಚರ್ಚೆ ಮಾಡಲು ಶಾಸಕರು, ಸಂಸದರು ಸಿದ್ದವಾಗಿದ್ದಾರಾ ಎಂದು ಪ್ರಶ್ನಿಸಿದರು.
ಬಿಜೆಪಿಗರಿಂದ ಬೇರೇನು ನಿರೀಕ್ಷಿಸಲು ಸಾಧ್ಯ?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಸೈದ್ದಾಂತಿಕವಾಗಿ ಬಿಜೆಪಿ, ಆರ್ಎಸ್ಎಸ್ ಅವರು ವಿಷಜಂತು ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ. ಇದು ಭಾಗಶಃ ನೂರಕ್ಕೂ ನೂರು ಸತ್ಯ ಎಂದರು.
ಚಿಂತನಗಂಗಾದಲ್ಲಿ ಪುಟ 36 ಮತ್ತು 37ರಲ್ಲಿ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಉಚ್ಛ ಸ್ಥಾನದಿಂದ ಅಂದರೆ ತಲೆಯಿಂದ ಬ್ರಾಹ್ಮಣ, ಭುಜದಿಂದ ಕ್ಷತ್ರೀಯ, ತೊಡೆಯಿಂದ ವೈಶ್ಯ ಹುಟ್ಟತ್ತಾನೆ ಎಂದು ಹೇಳುತ್ತದೆ. ಕೆಳಸ್ತರದಲ್ಲಿರುವ ಪಾದದಿಂದ ದಲಿತರು ಹುಟ್ಟುತ್ತಾರೆ ಎಂದು ಹೇಳುತ್ತದೆ. ಈ ನಿಟ್ಟಿನಲ್ಲಿ ಸಾವಿರಾರು ವರ್ಷಗಳಿಂದ ಮನುವಾದಿಗಳಿಂದ ದಲಿತರು ತುಳಿತಕ್ಕೆ ಒಳಗಾಗುತ್ತಿದ್ದಾರೆ ಎಂದರು.