ಪದವೀಧರರ ಸಮಸ್ಯೆಗೆ ಧ್ವನಿಯಾಗುವ ಆಶಯವಿದೆ: ಲಿಂಬಿಕಾಯಿ

KannadaprabhaNewsNetwork |  
Published : Sep 18, 2026, 02:15 AM IST
ಗಜೇಂದ್ರಗಡ ಮೋಹನ್ ಲಿಂಬಿಕಾಯಿ ಮಾತನಾಡಿದರು. | Kannada Prabha

ಸಾರಾಂಶ

ಅಧಿಕಾರ ಹಾಗೂ ಅಂತಸ್ತು ಬಯಸಿ ಚುನಾವಣೆಗೆ ಬಂದಿಲ್ಲ. ಬೇರೆ, ಬೇರೆ ಉದ್ಯೋಗ ಮಾಡುತ್ತಿರುವ ಹಾಗೂ ಪದವೀಧರರ ಸಮಸ್ಯೆಗೆ ಧ್ವನಿಯಾಗಬೇಕು ಎಂಬ ಆಶಯದಿಂದ ಚುನಾವಣೆಗೆ ನಿಂತಿದ್ದೇನೆ.

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಅಧಿಕಾರ ಹಾಗೂ ಅಂತಸ್ತು ಬಯಸಿ ಚುನಾವಣೆಗೆ ಬಂದಿಲ್ಲ. ಬೇರೆ, ಬೇರೆ ಉದ್ಯೋಗ ಮಾಡುತ್ತಿರುವ ಹಾಗೂ ಪದವೀಧರರ ಸಮಸ್ಯೆಗೆ ಧ್ವನಿಯಾಗಬೇಕು ಎಂಬ ಆಶಯದಿಂದ ಚುನಾವಣೆಗೆ ನಿಂತಿದ್ದೇನೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಮೋಹನ ಲಿಂಬಿಕಾಯಿ ಹೇಳಿದರು.

ಪಟ್ಟಣದ ಶಿವರಾಜ ಘೋರ್ಪಡೆ ನಿವಾಸದಲ್ಲಿ ರೋಣ, ನರೇಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಗುರುವಾರ ನಡೆದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಾಗೂ ಭಾರತ ಜೋಡೋ ಯುವಕರ ಸಂಘ ಸ್ಥಾಪನೆ ಮತ್ತು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಪಶ್ಚಿಮ ಪದವೀಧರರ ಕ್ಷೇತ್ರ ವಿಚಿತ್ರವಾದದ್ದು. ಯಾರೂ ಸಹ ಬಿಜೆಪಿ ಪಾಲಾಗಬಹುದು ಎಂದು ಭಾವಿಸಿರಲಿಲ್ಲ. ಆದರೆ ೨೦೦೮ರಲ್ಲಿ ಚುನಾವಣೆಯಲ್ಲಿ ನಿಂತು ಎಲ್ಲ ಪದವೀಧರರ, ಶಿಕ್ಷಕರ, ಶಿಕ್ಷಕೇತರ ಪದವೀಧರರ ಹಾಗೂ ನಿರುದ್ಯೋಗಿ ಪದವೀಧರರನ್ನು ಸಂಪರ್ಕ ಮಾಡಿ, ಅವರ ಮನಸ್ಸನ್ನು ಗೆದ್ದು ವಿಧಾನಪರಿಷತ್ ಒಳಗೆ ಹೋದೆ. ಆತ್ಮಸಾಕ್ಷಿ ವಿರುದ್ಧವಾಗಿ ಇರಬಾರದು ಎಂದು ಅಧಿಕಾರ ಅವಧಿ ಇದ್ದರೂ ಸಹ ರಾಜಿನಾಮೆ ನೀಡಿ ಬಂದಿದ್ದೆ. ಅಧಿಕಾರ ಮುಖ್ಯವಲ್ಲ ಎಂದು ಭಾವಿಸಿದ್ದೇನೆ. ಕ್ಷೇತ್ರ ದೊಡ್ಡದಿದ್ದು ಒಟ್ಟು ೨೪ ಶಾಸಕರು ಬರುತ್ತಾರೆ. ಅದರಲ್ಲಿ ೧೭ ಶಾಸಕರು ನಮ್ಮವರು, ಇನ್ನುಳಿದ ೭ ಶಾಸಕರು ಬಿಜೆಪಿಗರು. ಅದರಲ್ಲಿ ಬಿಜೆಪಿಯ ಶಿವರಾಮ ಹೆಬ್ಬಾರ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ ಎಂದರು.

ಎಲ್ಲರೂ ಸಂಘಟಿತವಾಗಿ ಕೆಲಸ ಮಾಡಿದರೆ ಅಭ್ಯರ್ಥಿ ಗೆಲ್ಲುವುದರಲ್ಲಿ ಸಂಶಯವಿಲ್ಲ. ಅಭ್ಯರ್ಥಿಗೆ ಪಕ್ಷ ಅನಿವಾರ್ಯವಾಗಬೇಕು ಹೊರತು ಪಕ್ಷಕ್ಕೆ ಅಭ್ಯರ್ಥಿ ಅನಿವಾರ್ಯವಾಗಬಾರದು. ನಾನು ಆರಿಸಿ ಬಂದ ನಂತರ ಎಂತವರನ್ನು ಆರಿಸಿ ತಂದೇವು ಎಂದು ಕಾರ್ಯಕರ್ತರು ಮುಖತಳಗಾಗುವಂತೆ ಎಂದಿಗೂ ನಾನು ನಡೆದುಕೊಳ್ಳುವದಿಲ್ಲ ಎಂದರು.

ಮುಖಂಡ ಸಿದ್ದಪ್ಪ ಬಂಡಿ ಮಾತನಾಡಿ, ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಕಳೆದ ಚುನಾವಣೆಯಲ್ಲಿ ರೋಣ ತಾಲೂಕಿನ ಅತಿ ಹೆಚ್ಚು ಪದವೀಧರರ ಮತಗಳನ್ನು ಹಾಕಿಸಿದ್ದೇವೆ. ಹೀಗಾಗಿ ಈ ಬಾರಿಯ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ ಎಂದರು.

ವಕೀಲ ಶ್ರೀಕಾಂತ್ ಅವಧೂತ ಮಾತನಾಡಿದರು. ಮುಖಂಡರಾದ ಅಶೋಕ ಬಾಗಮಾರ, ಪ್ರಶಾಂತ ರಾಠೋಡ, ಶಿವರಾಜ ಘೋರ್ಪಡೆ, ಬಿ.ಎಸ್. ಶೀಲವಂತರ, ಶಶಿಧರ ಹೂಗಾರ, ಎ.ಡಿ. ಕೋಲಕಾರ, ಎಸ್.ಆರ್. ರಾಮಜಿ ಮಾತನಾಡಿದರು.

ಈ ವೇಳೆ ಮಿಥುನ ಪಾಟೀಲ, ವೀರಣ್ಣ ಶೆಟ್ಟರ, ಶರಣಪ್ಪ ಬೆಟಗೇರಿ, ಸುರೇಂದ್ರಸಾ ರಾಯಬಾಗಿ, ಅಪ್ಪು ಮತ್ತಿಕಟ್ಟಿ, ರಾಜು ಸಾಂಗ್ಲೀಕರ, ಯಲ್ಲಪ್ಪ ಬಂಕದ, ಅರ್ಜುನ ರಾಠೋಡ, ಮುರ್ತುಜಾ ಡಾಲಾಯಾತ, ಸಿದ್ದಪ್ಪ ಚೋಳಿನ, ಮುದಿಯಪ್ಪ ಮುಧೋಳ, ಶ್ರೀಧರ ಬಿದರಳ್ಳಿ, ಅಜ್ಜಪ್ಪ ವಂದಕುದರಿ, ಬಸವರಾಜ ಕುರಿ, ಷರೀಫ ಸೌದಾಗರ, ಸಿದ್ದು ಗೊಂಗಡಶೆಟ್ಟಮಠ, ವಿನಾಯಕ ಅಬ್ಬಿಗೇರಿ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ಅಲೆದಾಟ ತಪ್ಪಿಸಲು ಪ್ರಜಾಸೇವೆ ಆಂದೋಲನ: ಶಾಸಕ ಆರ್.ವಿ. ದೇಶಪಾಂಡೆ
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆತ್ಮಾವಲೋಕನ ಅಗತ್ಯ