ತಾಪಂ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಭರವಸೆ ಕನ್ನಡಪ್ರಭ ವಾರ್ತೆ ಹೊಸದುರ್ಗ
ಜಲಾಶಯ ಯಾವ ತಾಲೂಕಿನದ್ದು ಎನ್ನುವುದು ನನಗೆ ಮುಖ್ಯವಲ್ಲ. ನಾನು ಜಲಾಶಯದ ಬಗ್ಗೆ ಸಾಕಷ್ಠು ಹೇಳಿಕೆ ನೀಡಬಹುದು, ಅದೆಲ್ಲಾ ಕೇವಲ ಕಾಗದದ ಹೇಳಿಕೆಗಳಾಗುತ್ತವೆ ಆದರೆ ಸರ್ಕಾರ ರಚಿಸಿರುವ ಅಧಿಕಾರಿಗಳ ತಂಡ ಬಂದು ಸ್ಥಳ ಪರಿಶೀಲಿಸಿ ನೀಡುವ ವರದಿ ಮುಖ್ಯವಾಗುತ್ತದೆ. ಇದರಿಂದ ಯಾವ ಸರ್ಕಾರ ಬಂದರೂ ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗುತ್ತದೆ ಎಂದರು.
*ಎಫ್ಡಿಎ ವಿರುದ್ಧ ಕ್ರಮ ಕೈಗೊಳ್ಳಿ: ನೋಂದಣಿ ಇಲಾಕೆ ಮೇಲಿನ ಚರ್ಚೆಯಲ್ಲಿ ಸಾಲ ಕೊಟ್ಟವರು ಸಾಲ ವಸೂಲಿ ಮಾಡುವುದೇ ಕಷ್ಠವಾಗಿರುವಾಗ ಅಡಮಾನ ಮಾಡಿರುವ ಜಮೀನಿಗೆ ಸಾಲ ಇಲ್ಲ ಎಂದು ಇಸಿ ಕೊಟ್ಟು ಮಾರಾಟಕ್ಕೆ ಸಹಕರಿಸಿರುವ ಎಫ್ಡಿಎ ಮೇಘನಾ ವಿರುದ್ಧ ಕ್ರಮ ಕೈಗೊಂಡು ಅವರನ್ನು ಅಮಾನತು ಪಡಿಸಿ ಎಂದು ಉಪ ನೊಂದಣಾಧಿಕಾರಿಗೆ ತಾಕೀತು ಮಾಡಿದ ಶಾಸಕರು, ನೀವು ಮಾಡುವ ತಪ್ಪಿನಿಂದ ಸಾಲ ಕೊಟ್ಟವರು ಏನು ಆಗಬೇಕು ನಿಮ್ಮ ಕೆಲಸದಲ್ಲಿ ಬೇಜವಬ್ದಾರಿತನ ಕಾಣುತ್ತಿದೆ ಅದನ್ನು ಸರಿ ಪಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.*ರೋಗದ ಮೂಲ ಕಂಡು ಹಿಡಿಯಿರಿ: ತಾಲೂಕಿನ ತೆಂಗು ಬೆಳಗೆ ತಗುಲಿರುವ ರೋಗ ಭಾಧೆಗೆ ಕಾರಣ ತಿಳಿಯುವಲ್ಲಿ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿ, ಬಬ್ಬೂರು ಫಾರಂನ ವಿಜ್ಞಾನಿಗಳು ಬರೀ ಹಳೇ ಕತೆ ಹೇಳುತ್ತಾರೆ. ಇದರಿಂದ ರೋಗಕ್ಕೆ ಮದ್ದು ತಿಗುತ್ತಿಲ್ಲ ಬೆಂಗಳೂರು ಅಥವಾ ಅರಸೀಕೆರೆಯ ಫಾರಂನಿಂದ ತಜ್ಞರನ್ನು ಕರೆಸಿ ರೋಗ ಭಾಧೆಗೆ ಕಾರಣ ತಿಳಿಯುವ ಕೆಲಸ ಮಾಡಿಸಿ ಎಂದು ತೋಟಕಾರಿಕೆ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ವೈದ್ಯರು ಕರ್ತವ್ಯದಲ್ಲಿರುತ್ತಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ ಅದನ್ನು ಸರಿಪಡಿಸಿಕೊಳ್ಳಿ ಅಲ್ಲದೆ ಗರ್ಬಿಣಿಯರಿಗೆ ಹೆರಿಗೆ ನಂತರ ಪೋಷಕಾಂಶಗಳನ್ನು ನೀಡುವ ಬದಲು ಮುಂಚಿತವಾಗಿಯೇ ಸೂಕ್ತ ಪರಿಶೀಲನೆ ನಡೆಸಿ ಅಗತ್ಯ ಇರುವ ಪೋಷಕಾಂಶಗಳನ್ನು ನೀಡುವ ಮೂಲಕ ಆರೋಗ್ಯವಂತ ಮಗುವಿನ ಜನನಕ್ಕೆ ಏಕೆ ಕಾರಣವಾಗಬಾರದು ಎಂದರು.
ಸಭೆಯಲ್ಲಿ ತಾಪಂ ಇಒ ಸುನಿಲ್ ಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ನಿರಂಜನಮೂರ್ತಿ, ಲೋಕೇಶಪ್ಪ, ಪದ್ಮನಾಭ ಸೇರಿ ತಾಲೂಕು ಮಟ್ಟದ ಅಧಿಕಾರಿಗಳೂ ಹಾಜರಿದ್ದರು.