ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಲೊಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಇಂಡಿ ಮತಕ್ಷೇತ್ರ ಶೈಕ್ಷಣಿಕವಾಗಿ ಪ್ರಗತಿ ಸಾದಿಸಬೇಕು. ಗಡಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು. ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂಬ ಚಿಂತನೆಯಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ತಂದಿರುವೆ. ಜಿಟಿಟಿಸಿ ಕಾಲೇಜು ಶೈಕ್ಷಣಿಕ ಪ್ರಗತಿಗೆ ಮುಕುಟವಾಗಿದೆ. ಈ ಭಾಗದಲ್ಲಿ ನಿರುದ್ಯೋಗ ಹೋಗಲಾಡಿಸಬೇಕು ಎಂಬ ಚಿಂತನೆ ಇಟ್ಟುಕೊಂಡು ಜಿಟಿಟಿಸಿ ಕಾಲೇಜು ತಂದಿದ್ದು, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಹೊರಬಂದರೆ ಉದ್ಯೋಗ ಗ್ಯಾರಂಟಿ ಎಂದರು. ಜಿಟಿಟಿಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಎಷ್ಟೊ ವಿದ್ಯಾರ್ಥಿಗಳು ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ಸ್ಮರಿಸಿದರು.ಜಲಧಾರೆ ಯೋಜನೆ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆ ಪೂರ್ಣಗೊಂಡರೆ ತಾಲೂಕಿನ ಯಾವುದೇ ಗ್ರಾಮಕ್ಕೂ ಕುಡಿಯುವ ನೀರಿನ ಸಮಸ್ಯೆ ತಲೆದೊರುವುದಿಲ್ಲ. ಭೀಮಾನದಿ ದಂಡೆಯ ಗ್ರಾಮಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಮಹಾರಾಷ್ಟ್ರ ಸರ್ಕಾರದಿಂದ ಭೀಮಾನದಿಗೆ ನೀರು ಹರಿಸಲಾಗಿದೆ. ಮಳೆಗಾಲದಲ್ಲಿ ಭೀಮಾನದಿ ಹರಿಯುವಂತೆ ಬೇಸಿಗೆಯಲ್ಲಿಯೂ ಭೀಮಾನದಿಗೆ ನೀರು ಹರಿಸಲಾಗಿದೆ ಎಂದರು.ಸಂಗಮೇಶ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್.ಜೆ.ಮಾಡ್ಯಾಳ ಮಾತನಾಡಿದರು. ಭೀಮಣ್ಣ ಕವಲಗಿ, ಎಸಿ ಚಿದಾನಂದ ಗುರುಸ್ವಾಮಿ, ಪ್ರಶಾಂತ ಕಾಳೆ, ತಾಪಂ ಇಒ ಮಹಾದೇವಪ್ಪ ಏವೂರ,ಎಇಇ ದಯಾನಂದ ಮಠ, ಅಜೀತ ಧನಶೆಟ್ಟಿ, ಜೀತಪ್ಪ ಕಲ್ಯಾಣಿ, ಶಿವಯೋಗೆಪ್ಪ ಚನಗೊಂಡ, ಶಿವಯೋಗೆಪ್ಪ ಜೊತಗೊಂಡ, ಜಾವೀದ ಮೋಮಿನ, ಅಯುಬ ಬಾಗವಾನ, ಜಟ್ಟೆಪ್ಪ ರವಳಿ, ಶ್ರೀಕಾಂತ ಕುಡಿಗನೂರ, ಬಿಇಒ ಎಸ್.ಎಸ್.ಮುಜಾವರ, ಸಿಡಿಪಿಒ ಗೀತಾ ಗುತ್ತರಗಿಮಠ, ಎಚ್.ಎಸ್.ಪಾಟೀಲ, ಧರ್ಮು ವಾಲಿಕಾರ, ಕೆ.ಎಸ್.ಮರಡಿ, ನೀಲಕಂಠ ರೂಗಿ, ಎಸ್.ಆರ್.ಗದ್ಯಾಳ, ಎಂ.ಆರ್.ಪಾಟೀಲ, ಮಲ್ಲನಗೌಡ ಪಾಟೀಲ, ಸಿಪಿಐ ಸುನೀಲ ಪಾಟೀಲ, ಚನಮಲ್ಲ ಚನಗೊಂಡ, ಸೊಮಣ್ಣ ಅಕ್ಕಲಕೋಟ, ಶೇಖರ ನಾಯಕ, ಸುದೀರ ಕರಕಟ್ಟಿ, ಸತೀಶ ಕುಂಬಾರ ವೇದಿಕೆ ಮೇಲಿದ್ದರು.
- ಯಶವಂತರಾಯಗೌಡ ಪಾಟೀಲ, ಶಾಸಕರು