ಮತದಾರರನ್ನು ಜೀವನದುದ್ದಕ್ಕೂ ಸ್ಮರಿಸುವೆ

KannadaprabhaNewsNetwork |  
Published : May 12, 2026, 03:15 AM IST
11ಐಎನ್‌ಡಿ1, ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಇಂಡಿ ಆಲಮೇಲ ಮುಖ್ಯರಸ್ತೆ ಕಾಮಗಾರಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ 6 ತಿಂಗಳಲ್ಲಿ ಮತಕ್ಷೇತ್ರ ಶೇ.90ರಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. 40 ವರ್ಷಗಳ ಕಾಲ ನಮ್ಮ ಮನೆತನಕ್ಕೆ ಮತ ನೀಡಿ ಆಶೀರ್ವಾದ ಮಾಡಿದ ಮತದಾರರನ್ನು ಜೀವನದುದ್ದಕ್ಕೂ ಸ್ಮರಿಸುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

6 ತಿಂಗಳಲ್ಲಿ ಮತಕ್ಷೇತ್ರ ಶೇ.90ರಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. 40 ವರ್ಷಗಳ ಕಾಲ ನಮ್ಮ ಮನೆತನಕ್ಕೆ ಮತ ನೀಡಿ ಆಶೀರ್ವಾದ ಮಾಡಿದ ಮತದಾರರನ್ನು ಜೀವನದುದ್ದಕ್ಕೂ ಸ್ಮರಿಸುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಲೊಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಇಂಡಿ ಮತಕ್ಷೇತ್ರ ಶೈಕ್ಷಣಿಕವಾಗಿ ಪ್ರಗತಿ ಸಾದಿಸಬೇಕು. ಗಡಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು. ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂಬ ಚಿಂತನೆಯಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ತಂದಿರುವೆ. ಜಿಟಿಟಿಸಿ ಕಾಲೇಜು ಶೈಕ್ಷಣಿಕ ಪ್ರಗತಿಗೆ ಮುಕುಟವಾಗಿದೆ. ಈ ಭಾಗದಲ್ಲಿ ನಿರುದ್ಯೋಗ ಹೋಗಲಾಡಿಸಬೇಕು ಎಂಬ ಚಿಂತನೆ ಇಟ್ಟುಕೊಂಡು ಜಿಟಿಟಿಸಿ ಕಾಲೇಜು ತಂದಿದ್ದು, ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಹೊರಬಂದರೆ ಉದ್ಯೋಗ ಗ್ಯಾರಂಟಿ ಎಂದರು. ಜಿಟಿಟಿಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಎಷ್ಟೊ ವಿದ್ಯಾರ್ಥಿಗಳು ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ಸ್ಮರಿಸಿದರು.

ಜಲಧಾರೆ ಯೋಜನೆ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಯೋಜನೆ ಪೂರ್ಣಗೊಂಡರೆ ತಾಲೂಕಿನ ಯಾವುದೇ ಗ್ರಾಮಕ್ಕೂ ಕುಡಿಯುವ ನೀರಿನ ಸಮಸ್ಯೆ ತಲೆದೊರುವುದಿಲ್ಲ. ಭೀಮಾನದಿ ದಂಡೆಯ ಗ್ರಾಮಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಮಹಾರಾಷ್ಟ್ರ ಸರ್ಕಾರದಿಂದ ಭೀಮಾನದಿಗೆ ನೀರು ಹರಿಸಲಾಗಿದೆ. ಮಳೆಗಾಲದಲ್ಲಿ ಭೀಮಾನದಿ ಹರಿಯುವಂತೆ ಬೇಸಿಗೆಯಲ್ಲಿಯೂ ಭೀಮಾನದಿಗೆ ನೀರು ಹರಿಸಲಾಗಿದೆ ಎಂದರು.ಸಂಗಮೇಶ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್‌.ಜೆ.ಮಾಡ್ಯಾಳ ಮಾತನಾಡಿದರು. ಭೀಮಣ್ಣ ಕವಲಗಿ, ಎಸಿ ಚಿದಾನಂದ ಗುರುಸ್ವಾಮಿ, ಪ್ರಶಾಂತ ಕಾಳೆ, ತಾಪಂ ಇಒ ಮಹಾದೇವಪ್ಪ ಏವೂರ,ಎಇಇ ದಯಾನಂದ ಮಠ, ಅಜೀತ ಧನಶೆಟ್ಟಿ, ಜೀತಪ್ಪ ಕಲ್ಯಾಣಿ, ಶಿವಯೋಗೆಪ್ಪ ಚನಗೊಂಡ, ಶಿವಯೋಗೆಪ್ಪ ಜೊತಗೊಂಡ, ಜಾವೀದ ಮೋಮಿನ, ಅಯುಬ ಬಾಗವಾನ, ಜಟ್ಟೆಪ್ಪ ರವಳಿ, ಶ್ರೀಕಾಂತ ಕುಡಿಗನೂರ, ಬಿಇಒ ಎಸ್‌.ಎಸ್‌.ಮುಜಾವರ, ಸಿಡಿಪಿಒ ಗೀತಾ ಗುತ್ತರಗಿಮಠ, ಎಚ್‌.ಎಸ್‌.ಪಾಟೀಲ, ಧರ್ಮು ವಾಲಿಕಾರ, ಕೆ.ಎಸ್‌.ಮರಡಿ, ನೀಲಕಂಠ ರೂಗಿ, ಎಸ್‌.ಆರ್‌.ಗದ್ಯಾಳ, ಎಂ.ಆರ್‌.ಪಾಟೀಲ, ಮಲ್ಲನಗೌಡ ಪಾಟೀಲ, ಸಿಪಿಐ ಸುನೀಲ ಪಾಟೀಲ, ಚನಮಲ್ಲ ಚನಗೊಂಡ, ಸೊಮಣ್ಣ ಅಕ್ಕಲಕೋಟ, ಶೇಖರ ನಾಯಕ, ಸುದೀರ ಕರಕಟ್ಟಿ, ಸತೀಶ ಕುಂಬಾರ ವೇದಿಕೆ ಮೇಲಿದ್ದರು.

ಎಇ ಮಹಿಬೂಬ ಸಂಜವಾಡ, ಸಂತೋಷ ಪರಸೆನವರ, ಅಪ್ಪು ಅಡಗಲ್ಲ, ಅವಿನಾಶ ಬಗಲಿ, ನಿಂಗಯ್ಯ ಗಿರಡಿಮಠ,ಚಂದು ಸೊನ್ನ, ಅಶೋಕ ಬಗಲಿ, ವಿಜಯಕುಮಾರ ಚನಗೊಂಡ, ಬಸು ಬಂಗಲಿ, ರಮೇಶ ಕಲ್ಯಾಣಿ, ಶಂಕ್ರೇಪ್ಪ ಸರ್ಜಾಪೂರ, ರಾಜು ಖೇಡಗಿ, ಗಂಗು ಗುಳೆದ, ಬಾಬುರಾವ ಗುಡಮಿ ಇತರರಿದ್ದರು.

₹ 3 ಸಾವಿರ ಕೋಟಿ ಅನುಧಾನದಲ್ಲಿ ರೇವಣಸಿದ್ದೇಶ್ವರ ಏತನೀರಾವರಿ ಯೋಜನೆ ಆರಂಭಗೊಂಡಿದ್ದು, ಈ ಯೋಜನೆ ಪೂರ್ಣಗೊಂಡರೆ ತಾಲೂಕಿನ 28 ಸಾವಿರ ಹೆಕ್ಟರ್‌ ಪ್ರದೇಶ ನೀರಾವರಿಗೆ ಒಳಪಡಲಿದೆ. ಇದರಿಂದ ರೈತರಿಗೆ ಆರ್ಥಿಕ ಅನುಕೂಲವಾಗಲಿದೆ. ಹ್ಯಾಟ್ರೀಕ್‌ ಗೆಲುವು ನೀಡಿದ ಮತದಾರರ ಋಣ ತೀರಿಸಲು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಈ ಭಾಗಕ್ಕೆ ತಂದಿರುವೆ. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಿದ್ಯುತ್‌ ವಿತರಣಾ ಕೇಂದ್ರಗಳು ಇಂಡಿ ತಾಲೂಕಿನಲ್ಲಿದ್ದು, ಈ ಭಾಗ ನೀರಾವರಿಯಾದರೆ ಸಾಲದು, ನೀರಾವರಿಗೆ ವಿದ್ಯುತ್‌ ಅವಶ್ಯಕ ಬೇಕು ಎಂಬ ದೂರದೃಷ್ಠಿಯಿಂದ ವಿದ್ಯುತ್‌ ಕ್ಷೇತ್ರದ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಲಾಗಿದೆ.

- ಯಶವಂತರಾಯಗೌಡ ಪಾಟೀಲ, ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳದಿಂಗಳಂತೆ ಬದುಕನ್ನು ಬೆಳಗಬಲ್ಲದು ಕನ್ನಡ ಸಾಹಿತ್ಯ
ಆತ್ಮ ವಿಶ್ವಾಸದಿಂದ ಜೀವನ ರೂಪಿಸಿಕೊಳ್ಳಿ