ಹುಬ್ಬಳ್ಳಿ:
ಇಲ್ಲಿನ ವಿದ್ಯಾನಗರದಲ್ಲಿರುವ ಅಖಿಲ ಭಾರತ ಮಾಧ್ವ ಮಹಾ ಮಂಡಳ ವಿದ್ಯಾರ್ಥಿ ನಿಲಯ(ಎಬಿಎಂಎಂ)ದ ಷಷ್ಟಿಪೂರ್ತಿ ಮಹೋತ್ಸವ ಹಾಗೂ ನವೀಕೃತ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂ ಧರ್ಮದ ಪವಿತ್ರ ಪ್ರಾರ್ಥನೆಯಾದ ಗಾಯತ್ರಿ ಮಂತ್ರ ಪಠಿಸುವುದೇ ಕಡಿಮೆಯಾಗುತ್ತಿದೆ. ಈ ಮಂತ್ರ ಪಠಿಸದಿದ್ದರೆ ನಾವು ಬ್ರಾಹ್ಮಣರಾಗಿ ಉಳಿಯುವುದಿಲ್ಲ ಎಂದರು.
ಈ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದು ಕಲಿತ ಸಾವಿರಾರು ಮಕ್ಕಳು ಇಂದು ಹಲವು ರಂಗಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಅಂತಹವರು ಈ ಸಂಸ್ಥೆಗೆ ಆರ್ಥಿಕ, ಭೌತಿಕವಾಗಿ ನೆರವಾಗುತ್ತಿದ್ದಾರೆ. ಸಜ್ಜನರಲ್ಲಿ ದಾನ, ಒಳ್ಳೆಯ ಮಾತುಗಳನ್ನು ಕೇಳಬಹುದು. ಸಾವಿರಾರು ದಾನಿಗಳಿಂದ ಇಂತಹ ಸಂಸ್ಥೆಗಳು ಮುಂದುವರಿಯಲು ಸಾಧ್ಯ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಈ ವಿದ್ಯಾರ್ಥಿ ನಿಲಯವು ಉತ್ತರ ಕರ್ನಾಟಕದ ಹೆಮ್ಮೆ. ಹಿಂದೂ ವಿದ್ಯಾರ್ಥಿಗಳು ತಮ್ಮ ಧರ್ಮ ಉಳಿಸಿಕೊಂಡು ವಿದ್ಯಾರ್ಜನೆ ಮಾಡುವಂತಹ ವಿದ್ಯಾರ್ಥಿ ನಿಲಯಗಳು ಈ ಭಾಗದಲ್ಲಿ ಇರಲಿಲ್ಲ. ಇದನ್ನು ಮನಗೊಂಡು ಈ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗಿದೆ. ವಿಪ್ರ ಸಮಾಜದ ವಿದ್ಯಾರ್ಥಿಗಳಿಗೆ ಇಂತಹ ಸೌಲಭ್ಯಗಳಿಲ್ಲದ ಸಮಯದಲ್ಲಿಯೇ ಈ ಸಂಸ್ಥೆ ಜನ್ಮ ತಾಳುವ ಮೂಲಕ ಹಿಂದೂ ಧರ್ಮದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಮಾಧ್ವ ಮಹಾಮಂಡಳ ಇಲ್ಲದಿದ್ದರೆ ವಿವಿಧ ಮಠಗಳು ಭಿನ್ನವಾಗಿ ಇರುತ್ತಿದ್ದವು. ಆದರೆ, ಇಂತಹ ಎಲ್ಲ ಮಠಗಳನ್ನು ಒಂದೇ ವೇದಿಕೆಗೆ ತಂದ ಕೀರ್ತಿ ಈ ಮಹಾಮಂಡಳಕ್ಕೆ ಸಲ್ಲುತ್ತದೆ ಎಂದರು.ಅನಂತಪದ್ಮನಾಭ ಐತಾಳ ಪ್ರಾಸ್ತಾವಿಕ ಮಾತನಾಡಿ, ಇಲ್ಲಿ ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. 8 ಕೊಠಡಿಗಳೊಂದಿಗೆ ಆರಂಭವಾಗಿರುವ ಈ ಸಂಸ್ಥೆ ಇಂದು 70 ಕೊಠಡಿಗಳು ನಿರ್ಮಾಣವಾಗಿದೆ. ದಾನಿಗಳ ನೆರವಿನಿಂದ ವ್ಯವಸ್ಥಿತವಾಗಿ ವಿದ್ಯಾರ್ಥಿನಿಲಯ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಪ್ರಸ್ತುತ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಶ್ರೀಗಳ ಮೆರವಣಿಗೆ...