ಸಂಸ್ಕೃತದಲ್ಲಿ ಬರದರೆ ಹೆಚ್ಚು ಜನರನ್ನು ತಲುಪುವುದಿಲ್ಲ: ಮುರಳೀಧರ ಉಪಾಧ್ಯ ಹಿರಿಯಡ್ಕ

KannadaprabhaNewsNetwork |  
Published : Sep 06, 2024, 01:09 AM IST
ಪ್ರಾಂಜಲ5 | Kannada Prabha

ಸಾರಾಂಶ

ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಾರ್ಷಿಕ ಸಂಚಿಕೆ ‘ಪ್ರಾಂಜಲ’ವನ್ನು ಅನಾವರಣಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಪೂರ್ಣಪ್ರಜ್ಞಾ ಕಾಲೇಜಿನ ‘ಪ್ರಾಂಜಲ’ ವಾರ್ಷಿಕ ಸಂಚಿಕೆಯನ್ನು ಅವಲೋಕಿಸಿದಾಗ ಹೊಸ ತಲೆಮಾರಿನ ವಿದ್ಯಾರ್ಥಿಗಳು, ೨೧ನೇ ಶತಮಾನದ ಹುಡುಗರು ಯಾವ ರೀತಿಯಲ್ಲಿ ಸಮಾಜವನ್ನು ಗ್ರಹಿಸುತ್ತಾರೆ, ಸ್ಪಂದಿಸುತ್ತಾರೆ, ಚಿಂತಿಸುತ್ತಾರೆ ಎಂದು ತಿಳಿಯುತ್ತಿದೆ. ಕೃತಕ ಬುದ್ಧಿಮತ್ತೆ, ವಿದೇಶಿ ಬಂಡವಾಳ ಹೂಡಿಕೆ, ಮತದಾನದ ಜಾಗೃತಿ, ಪ್ರಕೃತಿ ವಿನಾಶ, ದುಡಿಯುವ ಮಹಿಳೆಯರ ಕುರಿತಾಗಿ ಬರೆದ ಲೇಖನಗಳು ಯೋಗ್ಯವಾಗಿದೆ ಎಂದು ಖ್ಯಾತ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹೇಳಿದರು.ಅವರು ನಗರದ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಾರ್ಷಿಕ ಸಂಚಿಕೆ ‘ಪ್ರಾಂಜಲ’ವನ್ನು ಅನಾವರಣಗೊಳಿಸಿದರು.

ಸಂಸ್ಕೃತ ಮಾತನಾಡುವವರು ಒಂದು ಅಂದಾಜು ಪ್ರಕಾರ ೨೩ ಲಕ್ಷ ೭೦ ಸಾವಿರ ಜನರಿದ್ದಾರೆ. ಸಂಸ್ಕೃತದಲ್ಲೇ ಬರೆದರೆ ಅದು ಹೆಚ್ಚು ಜನರಿಗೆ ತಲುಪುವುದಿಲ್ಲ. ಸಂಸ್ಕೃತದ ಕೃತಿಗಳನ್ನು ಕನ್ನಡದಲ್ಲಿ ಬರೆದು ಸಂಸ್ಕೃತದ ವಾಕ್ಯವನ್ನು ಕನ್ನಡಿಗರಿಗೆ ಪರಿಚಯಿಸಬಹುದು. ಹಾಗೆಯೇ ಕನ್ನಡದಿಂದ ಹಿಂದಿಗೆ, ಹಿಂದಿಯಿಂದ ಕನ್ನಡ ಅನುವಾದವನ್ನು ಮಾಡಬಹುದು. ಅನುವಾದ ಸಾಹಿತ್ಯಕ್ಕೂ ವಿಶೇಷ ಸ್ಥಾನಮಾನವಿದೆ. ಸಾಧಕರ ಸಂದರ್ಶನ, ಕಲಾ ವಿಮರ್ಶೆ, ಸಿನಿಮಾ ವಿಮರ್ಶಾ ಲೇಖನಗಳನ್ನು ಬರೆದು ವಾರ್ಷಿಕ ಸಂಚಿಕೆಗೆ ನೀಡಬಹುದು. ಕತೆ, ಕವನ, ಹಾಸ್ಯ ಲೇಖನದಂತಹ ಸೃಜನಾತ್ಮಕ ಬರಹಗಳಿಗೆ ಓದಿನ ಅಗತ್ಯವಿದೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲೆ, ಸಂಚಿಕೆಯ ಪ್ರಧಾನ ಸಂಪಾದಕಿ ಪ್ರತಿಮಾ ಬಾಳಿಗಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಟಿ.ಪ್ರಶಾಂತ್ ಹೊಳ್ಳ, ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಯ ಉಪ ಆಡಳಿತಾಧಿಕಾರಿ ಪುಂಡರೀಕಾಕ್ಷ ಕೊಡಂಚ ಉಪಸ್ಥಿತರಿದ್ದರು.ವಾರ್ಷಿಕ ಸಂಚಿಕೆಯ ಕಾರ್ಯನಿರ್ವಾಹಕ ಸಂಪಾದಕ, ಕನ್ನಡ ಉಪನ್ಯಾಸಕ ರಮಾನಂದ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿ ತೇಜಸ್ವಿ ಗಾಂವ್ಕರ್ ನಿರೂಪಿಸಿದರು. ಹಿಂದಿ ಉಪನ್ಯಾಸಕ ಮುರಳೀಕೃಷ್ಣ ವಂದಿಸಿದರು. ಸಂಚಿಕೆಯ ಮುಖಪುಟ ವಿನ್ಯಾಸಗೊಳಿಸಿದ ಕೃಷ್ಣ, ಲೇಖನಗಳನ್ನು ನೀಡಿದ ವಿದ್ಯಾರ್ಥಿಗಳಾದ ವೈಭವ ಪ್ರಭು, ಸುಪ್ರಜಾ, ಶಮಿತಾ ಇವರನ್ನು ಗೌರವಿಸಲಾಯಿತು. ಅಕ್ಷರ ಭಾವಗೀತೆ ಹಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!