ಪಾಂಡವಪುರ:
ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಸೆಲ್ಕೋ ಫೌಂಡೇಶನ್ನಿಂದ ಆಧುನೀಕರಣಗೊಂಡ ಶಾರದಾ ಮಿನಿ ಗಾರ್ಮೆಂಟ್ಸ್ ಘಟಕ ಉದ್ಘಾಟಿಸಿ ಮಾತನಾಡಿದರು.
ಮಿನಿ ಗಾರ್ಮೆಂಟ್ಸ್ ನ ಇಡೀ ಉತ್ಪಾದನಾ ಘಟಕಕ್ಕೆ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ನಾವು ಎಲ್ಲ ಕಡೆ ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ಕೊಡುತ್ತಿದ್ದೇವೆ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಜನರಿಗೆ ಉದ್ಯೋಗ ದೊರಕುವ ಜತೆಗೆ ಅವರಿಗೆ ಖರ್ಚು ಕೂಡ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಉದ್ಯೋಗವಕಾಶ ಸೃಷ್ಟಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಗಾರ್ಮೆಂಟ್ಸ್ ನೂರಾರು ಜನರಿಗೆ ಕೆಲಸ ಕೊಡುವಂತೆ ಬೆಳೆಯಲಿ ಎಂದು ಶುಭಕೋರಿದರು.ಈ ವೇಳೆ ಪುಟ್ಟಣ್ಣಯ್ಯ ಫೌಂಡೇಶನ್ ಸಿಇಒ ಹಿರೇಮರಳಿ ರಣಜಿತ್, ಶಾರದಾ ಗಾರ್ಮೆಂಟ್ಸ್ ಮಾಲೀಕ ಪ್ರಜ್ವಲ್, ರೈತಸಂಘದ ಮುಖಂಡ ವಿಜೇಂದ್ರ, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಸಿ.ಎಂ.ಶ್ರೀಕಾಂತ್, ಕೃಷ್ಣೇಗೌಡ ಇತರರಿದ್ದರು.
ಪಾಂಡವಪುರ: ತಾಲೂಕಿನ ಕೆನ್ನಾಳು ಗ್ರಾಮದ ಸಿಪಿಎಡ್ ಕಾಲೇಜಿನ ಬಳಿ ಶ್ರೀಜಯಚಾಮರಾಜೇಂದ್ರ ಕಲಾಸಂಘದ ವತಿಯಿಂದ ಜುಲೈ 5ರಂದು ಮೊದಲನೇ ವರ್ಷದ ರಾಜ್ಯ ಮಟ್ಟದ ಜೋಡಿಕರುಗಳ ಚಕ್ಕಡಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು 3999 ಪ್ರವೇಶಾತಿ ಶುಲ್ಕ ಪಾವತಿಸಬೇಕು, ಮೊದಲನೇ ಬಹುಮಾನ 8 ಗ್ರಾಂ ಚಿನ್ನ, ಎರಡನೇ ಬಹುಮಾನ ಹೀರೋ ಎಚ್.ಎಫ್ 100 ಬೈಕ್, ತೃತೀಯ ಬಹುಮಾನ 30 ಸಾವಿರ, ನಾಲ್ಕನೇ ಬಹುಮಾನ 15 ಸಾವಿರ, ಐದನೇ ಬಹುಮಾನ 10 ಸಾವಿರ, ಆರನೇ ಬಹುಮಾನ 8 ಸಾವಿರ, ಏಳನೇ ಬಹುಮಾನ 5 ಸಾವಿರ. ಹೆಚ್ಚಿನ ಮಾಹಿತಿಗಾಗಿ ಮನೋಜ್ಗೌಡ-9972938163, 9972484236ಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.