ಮನೆಯಲ್ಲಿ ಸರಸ್ವತಿ ನೆಲೆಸಿದರೆ ಲಕ್ಷ್ಮೀ ಕೃಪೆ: ಮಹೇಶ್ ನಾಚಯ್ಯ

KannadaprabhaNewsNetwork |  
Published : Jun 03, 2026, 02:30 AM IST
ಚಿತ್ರ :  2ಎಂಡಿಕೆ2 :  ಪಾಲಂದಿರ ಮುಂದುಮನೆಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಮನ-ಮನೆಯಲ್ಲಿ ಸರಸ್ವತಿ ನೆಲೆಸಿದರೆ ಲಕ್ಷ್ಮಿ ತನಿಷ್ಟಕ್ಕೆ ಒಲಿಯುವಳು. ಲಕ್ಷ್ಮಿ ಖಾಲಿಯಾದರೂ ಸರಸ್ವತಿ ಸಂಪನ್ನಳು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹೇಳಿದ್ದಾರೆ.

ಮಡಿಕೇರಿ: ಮನ-ಮನೆಯಲ್ಲಿ ಸರಸ್ವತಿ ನೆಲೆಸಿದರೆ ಲಕ್ಷ್ಮಿ ತನಿಷ್ಟಕ್ಕೆ ಒಲಿಯುವಳು. ಲಕ್ಷ್ಮಿ ಖಾಲಿಯಾದರೂ ಸರಸ್ವತಿ ಸಂಪನ್ನಳು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹೇಳಿದ್ದಾರೆ.

ಕಡಿಯತ್ತನಾಡು ಬಲಂಬೇರಿಯಲ್ಲಿರುವ ಪಾಲಂದಿರ ಮುಂದುಮನೆಯಲ್ಲಿ ನಡೆದ ಕೊಡವ ಪುಸ್ತಕ ಪತ್ತಾಯದ 11 ನೇ ಆವೃತ್ತಿಯನ್ನು ತೆರೆಯುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಬದುಕಿನಲ್ಲಿ ಓದಿ, ಕೇಳಿ, ತಿಳಿದು ಕಲಿತದ್ದು ಎಂದಿಗೂ ನಮ್ಮ ಮನಸ್ಸಿನಿಂದ ಮರೆಯಾಗುವುದಿಲ್ಲ. ಇದರೊಂದಿಗೆ ಪುಸ್ತಕಗಳಲ್ಲಿ ಅಡಗಿರುವ ಅಗಾದವಾದ ಜ್ಞಾನ ಎಂದಿಗೂ ಮಾಸುವುದಿಲ್ಲ. ಆದ್ದರಿಂದ ಪುಸ್ತಕದ ಜ್ಞಾನ ಎಂಬುವುದು ಒಳ್ಳೆಯ ಸಂಸ್ಕಾರ-ಸಂಸ್ಕೃತಿಗೆ ದಾರಿ ತೋರಿಸಬಲ್ಲದು ಎಂದರು.

ಪುಸ್ತಕ ಪತ್ತಾಯವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಪತ್ನಿ ಕಾಂಚನ ಪೊನ್ನಣ್ಣ ಅವರು ಕೊಡವರ ಪ್ರತಿಯೊಂದು ಆಭರಣಗಳಿಗೆ, ಹಬ್ಬ-ಆಚರಣೆಗಳಿಗೆ, ಪದ್ಧತಿ-ಪರಂಪರೆಗೆ, ಹಾಕಿ ಉತ್ಸವಕ್ಕೆ ತನ್ನದೇ ಆದಂತಹ ಪ್ರಾಮುಖ್ಯತೆಯೊಂದಿಗೆ ಸಾಂಸ್ಕೃತಿಕವಾದ ಗಾಂಭೀರ್ಯವಿದೆ ಎಂದರು.

ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಬಲ್ಯಮನೆ, ಮುಂದ್‌ಮನೆಗಳಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವಂತಹ ಅಕಾಡೆಮಿಯ ಯೋಜನೆಯು ಸಮಾಜದಲ್ಲಿ ಸಾಹಿತ್ಯ-ಸಂಸ್ಕೃತಿಯನ್ನು ಬೆಳೆಸುವಲ್ಲಿ ಅನುಕೂಲದಾಯಕವಾಗಿದೆ. ಎಲ್ಲಾ ಕುಟುಂಬಗಳು ಇಂತಹ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂದರು.

ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನ ಪರಂಪರೆ ಮುಂದಿನ ಪೀಳಿಗೆಗೆ ಪಾರಂಪರ್ಯಗೊಳಿಸುವಲ್ಲಿ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಬದ್ಧತೆಯನ್ನು ಮುನ್ನಡೆಸಲು ಕೊಡವ ಭಾಷೆ-ಸಂಸ್ಕೃತಿ ಪಾಲಿಸಿಕೊಂಡು ಬರುತ್ತಿರುವ ಎಲ್ಲಾ ಜನಾಂಗಗಳು ಜವಾಬ್ದಾರಿಯುತವಾಗಿ ಒಗ್ಗಟ್ಟಿನ ಹೆಜ್ಜೆ ಇಡಬೇಕೆಂದರು.ಪಾಲಂದಿರ ಒಕ್ಕ ಪಟ್ಟೆದಾರ 96 ಹರೆಯದ ಪಾಲಂದಿರ ಸೋಮಣ್ಣ ತಮ್ಮ ಅನುಭವದ ನುಡಿಗಳನ್ನಾಡಿದರು. ‘ಪಾಲಂದಿರ’ ಹೆಸರು ಕಾವೇರಿ ತಾಯಿ ಬಲಂಬೇರಿ ಮೂಲಕ ಹರಿಯುವುದಕ್ಕಿಂತ ಮುಂಚೆ ಇದ್ದರೂ, ಆ ಪರ್ವಕಾಲದಲ್ಲಿ ಕಾವೇರಿಯ ದರುಶನದ ಭಾಗ್ಯಪಡೆದ ಕುಟುಂಬದಲ್ಲಿ ಸಂತೋಷದ ಕ್ಷಣಗಳನ್ನು ಹಾಲು ಕುಡಿದು ಸಂಭ್ರಮಿಸುವ ಸಲುವಾಗಿ ‘ಪಾಲ್ ಏಂದಿರ’ ಎಂಬ ದೈವವಾಣಿ ಕೇಳಿ ಬಂದ ಮೇರೆಗೆ ಕ್ರಮೇಣ ಇದೇ ಮನೆತನದ ಹೆಸರನ್ನು ಪಡೆದುಕೊಳ್ಳುತ್ತದೆ-ಪಾಲಂದಿರ ಎಂದು ವ್ಯಾಖ್ಯಾನಿಸಿದರು.ಕುಟುಂಬದ ಬಾಳೋಪಾಟ್ ನುರಿತರಾದ ಪಾಲಂದಿರ ಮೊಣ್ಣಪ್ಪ, ಬೊಳಕಾಟ್ ತರಬೇತುದಾರರಾದ ಪಾಲಂದಿರ ರವಿ ಮಂದಣ್ಣರನ್ನು ಮುಖ್ಯ ಅತಿಥಿಗಳಿಂದ ಸನ್ಮಾನಿಸಲಾಯಿತು. ಕೋಟೆರ ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ದುಡಿ ವಿತರಿಸಲಾಯಿತು.ಪಾಲಂದಿರ ಪ್ರಜ್ಞಾ ದರ್ಶನ್ ಕಾವೇರಿ ತಾಯಿಯನ್ನು ಸ್ತುತಿಸಿ ಪ್ರಾರ್ಥಿಸಿದರು. ಬಲಂಬೇರಿ ಗ್ರಾಮದ ಬೊಳ್ಳಚೆಟ್ಟಿರ ವಿಜಯ ಸಂಗಡಿಗರು ಕೆಲಹೊತ್ತು ಕಾವೇರಿ ಪುರಾಣವನ್ನು ಬಾಳೋಪಾಟ್ ಮೂಲಕ ಹಾಡಿದರು.

ಕಾರ್ಯಕ್ರಮದ ರೂವಾರಿ ಪಾಲಂದಿರ ಜಗಜೋಯಪ್ಪ ಸ್ವಾಗತಿಸಿ, ನಿರೂಪಿಸಿದರು. ಅಕಾಡೆಮಿ ಸದಸ್ಯ ನಾಪಂಡ ಗಣೇಶ್ ವಂದಿಸಿದರು. ಅಕಾಡೆಮಿಯ ಸದಸ್ಯೆ ಕಂಬೆಯಂಡ ಡೀನಾ ಬೋಜಣ್ಣ, ಪಾಲಂದಿರ ಕುಟುಂಬದಲ್ಲಿ ಹುಟ್ಟಿ ಬೆಳೆದು ವಿದ್ಯಾವಂತರಾದ ಕೇಟೋಳಿರ ಕುಟ್ಟಪ್ಪ ರಾಜಪ್ಪ ವಿದೇಶದಲ್ಲಿರುವ ಪಾಲಂದಿರ ಕುಟುಂಬದ ತಾಮನೆ ಹುಡುಗಿಯರ ಸಂಸಾರ, ಊರು-ನಾಡಿನ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಷ್ಠೆ ಇದ್ದರೆ ಯಶಸ್ವಿ ಉದ್ಯಮ ಸಾಧ್ಯ: ಅಬೀದ್ ಗದ್ಯಾಳ
ಆನಂದಶರದಿ ಪಾರಮಾರ್ಥಿಕ ಸಾಧನೆಗೆ ಪ್ರೇರಣೆಯಾಗಲಿ: ಕೃಷ್ಣಾಪುರ ಶ್ರೀ