ಚನ್ನಗಿರಿ: ಪ್ರತಿಯೊಬ್ಬರು ನಮ್ಮ ಪರಿಸರದ ಕಾಳಜಿಗಳನ್ನು ಇಟ್ಟುಕೊಂಡು ಪರಿಸವನ್ನು ಸಂರಕ್ಷಣೆ ಮಾಡದೆ ಇದ್ದರೆ ಕುಡಿಯಲು ನೀರು ಸಿಗದಂತೆ ಆಗುವ ಕಾಲ ದೂರವಿಲ್ಲ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ನುಡಿದರು.
ಮರ-ಗಿಡಗಳು ಸಂಮೃದ್ದವಾಗಿದ್ದರೆ ಕಾಲ ಮಾನಕ್ಕೆ ತಕ್ಕಂತೆ ಮಳೆ-ಬೆಳೆಯಾಗಲಿದೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ಕೋಗಲೂರು ಶರಣಪ್ಪ ಮಾತನಾಡಿ ನಾಗರೀಕತೆ ಬೆಳೆದಂತೆಲ್ಲ ಮನುಷ್ಯರಲ್ಲಿರುವ ಮೌಲ್ಯಗಳೆ ನಶಿಸುತ್ತಿವೆ ಪರಿಸರ ಸಂರಕ್ಷಣೆ ಮತ್ತು ಕಾಳಜಿ ಇರುವಂತಹ ಪ್ರತಿಯೊಬ್ಬರು ಉತ್ತಮವಾದ ಸೇವಾ ಕಾರ್ಯಗಳನ್ನು ಮಾಡುತ್ತಾ ಪ್ರಶಂಶೆಗೆ ಪಾತ್ರರಾಗುತ್ತಾರೆ ಎಂದರು.ಇದೇ ಸಂದರ್ಭದಲ್ಲಿ ವಿಶ್ವ ಮಾನವ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಚಿಕ್ಕುಲಿಕೆರೆ ನಾಗೇಂದ್ರಪ್ಪ ಅವರ 66ನೇ ವರ್ಷದ ಜನ್ಮ ದಿನ ನಿಮಿತ್ತ ಕೇಕ್ ಕತ್ತರಿಸಲಾಯಿತು.
ಜಾನಪದ ಜಂಗಮ ಸಿದ್ದನಮಠದ ರಾಮಣ್ಣ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶಪ್ಪ, ಗಂಗಾಧರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಪ್ರೇಮಾ,ಪುರಸಭೆಯ ಮಾಜಿ ಸದಸ್ಯ ಜಿ.ನಿಂಗಪ್ಪ, ಭಾರತಿಪ್ರಸಾದ್, ಕರೇಕಟ್ಟೆ ದೇವೆಂದ್ರಪ್ಪ, ಶೈಲೇಶ್ ಪಟೇಲ್, ಸಂತೆಬೆನ್ನೂರು ಬಸವರಾಜ್, ಸುಂದರೇಶ್ ಹಾಜರಿದ್ದರು.