ದೊಡ್ಡಬಳ್ಳಾಪುರ: ನಮ್ಮ ಸಮುದಾಯ ಶೈಕ್ಷಣಿಕವಾಗಿ ಮುನ್ನಡೆಯಬೇಕೆಂದು ದಶಕಗಳ ಹಿಂದೆಯೇ ನಮ್ಮ ಹಿರಿಯರು ಶಿಕ್ಷಣದ ಮಹತ್ವ ಕುರಿತು ಹೇಳಿ, ಶಿಕ್ಷಣ ಸಮುದಾಯದ ಪ್ರಗತಿಗೆ ಅಸ್ತ್ರವಾಗಬೇಕು ಎಂದು ಪ್ರತಿಪಾದಿಸಿದ್ದರು ಎಂದು ನಗರಸಭಾ ಸದಸ್ಯ ಹಾಗೂ ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಹೇಳಿದರು.
ದೇವಾಂಗ ಮಂಡಲಿಯ ಗೌರವ ಕಾರ್ಯದರ್ಶಿ ಪ್ರೊ.ಎಂ.ಜಿ.ಅಮರನಾಥ್ ಮಾತನಾಡಿ, ಯಾವುದೇ ಸಮುದಾಯ ಮುನ್ನಡೆಯಬೇಕಾದರೆ ಶಿಕ್ಷಣ ಮುಖ್ಯವಾಗಿದೆ. ದೇವಾಂಗ ಸಮುದಾಯ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ದಿಸೆಯಲ್ಲಿ ಸಾಧಕರನ್ನು ಪುರಸ್ಕರಿಸುವ ಮೂಲಕ ದೇವಾಂಗ ಮಂಡಲಿ, ಪ್ರತಿಭಾನ್ವಿತರಿಗೆ ಉತ್ತೇಜನ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಎಂ.ಪಿ.ಸಿ.ವೆಂಕಟೇಶ್ (ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ), ಡಾ.ಭಾನು ಪ್ರಕಾಶ್ (ಪಿಎಚ್ಡಿ), ಶ್ರೀಕಾಂತ್.ಸಿ.ಕೆ (ಎನ್ಸಿಸಿ ಮತ್ತು ಬಾಲ್ ಬ್ಯಾಡ್ಮಿಂಟನ್ ಸಾಧನೆ), ಶುಚಿತ.ಎ.ವಿ (ಸಿಪಿಎ ಅತ್ಯುನ್ನತ ಶ್ರೇಣಿ), ಜಯಲಕ್ಷ್ಮೀ.ಎಂ.ಆರ್ (ಎಂ.ಕಾಂ ಮೂರನೇ ರ್ಯಾಂಕ್), ಎ.ಜಿ.ಯಶಸ್ವಿನಿ (ಯೋಗ) ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.ದೇವಾಂಗ ಮಂಡಲಿ ಉಪಾಧ್ಯಕ್ಷರಾದ ಬಿ.ಜಿ.ಅಮರನಾಥ್, ಎನ್.ಎಸ್.ಚಿಕ್ಕಣ್ಣ, ಸಹ ಕಾರ್ಯದರ್ಶಿ ಎ.ನಟರಾಜ್, ಖಜಾಂಚಿ ಎಚ್.ವಿ.ಅಖಿಲೇಶ್ ನಿರ್ದೇಶಕರಾದ ಕೆ.ಎಸ್.ಮಂಜುನಾಥ, ಎಲ್.ಮಹೇಶ, ಎನ್.ಜಿ.ಕುಮಾರ್, ಕೆ.ಎನ್.ಜನಾರ್ಧನ, ವಿ.ಎಸ್.ರಾಘವೇಂದ್ರ, ಪ್ರಭಾಕರ್, ಕೆ.ಎಸ್.ನರೇಂದ್ರ, ಎಸ್.ಎನ್.ನಟರಾಜ, ವಿ.ನಿರ್ಮಲ, ಬಿ.ಪಿ.ಪ್ರಿಯಾಂಕ, ಪಿ.ಎಚ್.ಗೋಪಾಲ ಕೃಷ್ಣ, ಜಿ.ಸಿ.ಶಿವಕುಮಾರ್ ಭಾಗವಹಿಸಿದ್ದರು.
ದೊಡ್ಡಬಳ್ಳಾಪುರದ ದೇವಾಂಗ ಮಂಡಲಿ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ನಡೆಯಿತು.