ಕನ್ನಡಪ್ರಭ ವಾರ್ತೆ ಕಲಾದಗಿ
ಉದಗಟ್ಟಿ ಗ್ರಾಮದಲ್ಲಿ, ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಮಹಾಪುರಾಣ ಮಂಗಲ ಧರ್ಮ ಸಮಾರಂಭ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾತಪಸ್ವಿ ಶ್ರೀ ಗುರುಲಿಂಗೇಶ್ವರ ಮಹಾಶಿವಯೋಗಿಗಳ ಮಹಾಪುರಾಣ ಪ್ರವಚನ ಪ್ರಾರಂಭೊತ್ಸವದಲ್ಲಿ ಆಶೀರ್ವಚನ ನೀಡಿದರು.
ಯಾವುದು ಅಸಾಧ್ಯವೋ ಅದನ್ನು ಸಾಧ್ಯ ಮಾಡಿ ತೋರಿಸುವ ಶಕ್ತಿ ಈ ನಾಡಿನ ಮಹಾತಪಸ್ವಿ ಮಹಾಶಿವಯೋಗಿಗಳಿಗೆ ಮಾತ್ರ ಇದೆ. ಶಿವಯೋಗಿಗಳು ಪೂಜೆ, ಧರ್ಮ, ಕಾರ್ಯ ಮಾಡುವುದು ಭಕ್ತರ ಕಷ್ಟಗಳನ್ನು ದೂರ ಮಾಡಲು. ಪುರಾಣ ಪ್ರವಚನಗಳನ್ನು ಶ್ರದ್ಧೆಯಿಂದ ಆಲಿಸಿ ಅಧ್ಯಾತ್ಮದ ಕಡೆಗೆ ಮನಸ್ಸು ತೋರಿದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಬಹುದು ಎಂದರು.ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮ ಬೇವೂರಿನ ಎಂ.ಜಿ.ಗುರುಸಿದ್ದೇಶ್ವರ ಶಾಸ್ತ್ರಿಗಳು ಪ್ರವಚನ ನೀಡಿದರು, ಜಿ.ಬಸನಕೊಪ್ಪದ ಹಿರೇಮಠದ ಶ್ರೀ ಗದಿಗಯ್ಯ ಗವಾಯಿಗಳು ಸಂಗೀತ ಸೇವೆ ನೀಡಿದರು. ಕೊಡಗಾನೂರ ಮಲ್ಲಿಕಾರ್ಜುನ.ಬಿ. ಹೂಗಾರ ತಬಲಾ ಸೇವೆ, ಭೀಮಪ್ಪ ಗಣಿ ಮೊದಲ ದಿನದ ಪ್ರಸಾದ ಸೇವೆ ಒದಗಿಸಿದ್ದು, ಚಂದ್ರಶೇಖರ ಶೆಲೆಯಪ್ಪನವರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.