ಕುಕನೂರು:
ಪಟ್ಟಣದ ಗುದ್ನೇಪ್ಪನಮಠದ ಶ್ರೀನೀಲಗುಂದ ಮಠದಲ್ಲಿ ನೀಲಗುಂದ ಗುದ್ನೇಶ್ವರ ಸ್ವಾಮೀಗಳ 19ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಜರುಗಿದ ಧಾರ್ಮಿಕ ಹಾಗೂ 11 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಪರಮಾತ್ಮನ ಮೇಲೆ ಶ್ರದ್ಧೆ ಇಟ್ಟರೆ ಮನುಷ್ಯ ಜೀವಾತ್ಮನಾಗುತ್ತಾನೆ. ಬದುಕಿನ ಜತೆಗೆ ದೇವರನ್ನು ಸಹ ಪ್ರೀತಿಸಬೇಕು. ಈ ಪ್ರಪಚಂದಲ್ಲಿ ಎಲ್ಲವೂ ಅಸ್ಥಿರ. ಸಾಮಾಜಿಕ ಕಲ್ಯಾಣ ಕಾರ್ಯ ಮಾತ್ರ ಶಾಶ್ವತ. ಸದಾಚಾರದಿಂದ ಬದುಕಬೇಕು. ದುಡಿದು ಊಟ ಮಾಡಬೇಕು. ಉಳಿದಿದ್ದರಲ್ಲಿ ದಾನ ಮಾಡಬೇಕು. ಇದುವೇ ಮುಂದಿನ ಜೀವನಕ್ಕೆ ಬುತ್ತಿ. ಭಕ್ತಿ ಶಕ್ತಿಯಿಂದ ದೈವಿಶಕ್ತಿ ಪ್ರಾಪ್ತಿ ಆಗುತ್ತದೆ ಎಂದರು.
ನವ ದಂಪತಿಗಳು ಅವಿನಾಭಾವ ಸಂಬಂಧ ಹೊಂದಬೇಕು. ಒಬ್ಬರನ್ನು ಒಬ್ಬರು ಸದಾ ಪ್ರೀತಿಸಬೇಕು ಎಂದು ತಿಳಿ ಹೇಳಿದರು.ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಗುದ್ನೇಪ್ಪನಮಠ ನಿವಾಸಿಗಳು ದಾನದ ಶ್ರೇಷ್ಠತೆ ಅರಿತಿದ್ದಾರೆ. ಸಾಮೂಹಿಕ ಕಲ್ಯಾಣ ಕಾರ್ಯದಿಂದ ಬಡವರ್ಗದ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಧಾರ್ಮಿಕ ಶಕ್ತಿಯಿಂದ ಸಾಮಾಜಿಕ ಕಳಕಳಿ ಕಾಣಬಹುದು ಎಂದರು.
ಪ್ರಾಸ್ತಾವಿಕ ಮಾತನಾಡಿದ ಹಿರಿಯ ಗುದ್ನೇಯ್ಯ ಬಂಡಿಮಠ, ಗುದ್ನೇಪ್ಪನಮಠದ ಜಂಗಮರ ಜೋಳಿಗೆ ಮೂಲಕ ಸಮಾಜ ಕಟ್ಟುವ ಕೆಲಸ ಆಗುತ್ತಿದೆ. ಕಲ್ಯಾಣ ಕಾರ್ಯದಿಂದ ಗ್ರಾಮಕ್ಕೆ ಶ್ರೇಯಸ್ಸು ಎಂದರು.
ಮುಖಂಡರಾದ ಬಸವನಗೌಡ ತೊಂಡಿಹಾಳ, ಸಚಿನ ಆಚಾರ್, ಪ್ರಾಂಶುಪಾಲೆ ಜಯಾ, ಚನ್ನಬಸಯ್ಯ ಧೂಪದ, ಸಿದ್ಲಿಂಗಯ್ಯ ಬಂಡಿಮಠ, ರುದ್ರಯ್ಯ ಗಲಬಿ, ವೀರಯ್ಯ ದೇವಗಣಮಠ, ಪಪಂ ಸದಸ್ಯ ಜಗನ್ನಾಥ ಭೋವಿ, ಎಎಸ್ಐ ನಿರಂಜನ ತಳವಾರ, ರುದ್ರಯ್ಯ ಇನಾಮದಾರ, ಶಶಿಕುಮಾರ, ಶಿವು, ಶರಣಯ್ಯ ಹಳೆಮನಿ ಇತರರಿದ್ದರು.