ಕನ್ನಡಪ್ರಭ ವಾರ್ತೆ ಕೋಲಾರ
ನಗರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರವು ಮಕ್ಕಳಿಗೆ ನೀಡುವ ಸೌಲಭ್ಯಗಳು ಈ ಹಿಂದೆ ನೀಡುತ್ತಿರಲಿಲ್ಲ, ಮಕ್ಕಳು ಸರ್ಕಾರ ನೀಡುವ ಸೌಲಭ್ಯ ಸದ್ಬಳಿಸಿಕೊಂಡು ಜೀವನದಲ್ಲಿ ನಿಮ್ಮ ಪೋಷಕರು ಕಂಡ ಕನಸುಗಳು ನೀವು ಹೊಂದಿರುವ ಗುರಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.ಹಣದ ಬೆನ್ನತ್ತಿ ಹೋದರೆ ಜೀವನದಲ್ಲಿ ಶಾಂತಿ, ನೆಮ್ಮದಿ ಕಳೆದುಕೊಳ್ಳಬೇಕಾಗುವುದು. ಜೀವನದಲ್ಲಿ ಶಾಂತಿ, ತಾಳ್ಮೆ ಮುಖ್ಯ. ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು, ಯಾರಿಂದ ಬೇಕಾದರೂ ತಪ್ಪಿಸಿ ಕೊಂಡರೂ ಭಗವಂತನಿಂದ ಮಾತ್ರ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ, ಆತ್ಮಸಾಕ್ಷಿಯೇ ದೇವರು, ಆತ್ಮಸಾಕ್ಷಿಗಿಂತ ಮತ್ತೊಂದು ಸಾಕ್ಷಿ ಅಗತ್ಯವಿಲ್ಲ, ಜೀವನದಲ್ಲಿ ಸಿಹಿ, ಕಹಿ ಎರಡು ನಿಮ್ಮ ಕೈಯಲ್ಲಿದೆ ಎಂದು ತಿಳಿಸಿದರು.
ಜಾನಪದ ಕಲಾವಿದರಾದ ಮಾರುತಿ ಹಾಗೂ ರವಿಚಂದ್ರ ತಂಡದಿಂದ ವಿವಿಧ ಗೀತೆಗಳು ನಾಡಗೀತೆ. ಕೊಂಡರಾಜನಹಳ್ಳಿ ಮಂಜುಳ ನಿರೂಪಣೆ, ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷ್ಮೀ.ಆರ್ ಪ್ರತಿಜ್ಞಾವಿಧಿ ಬೋಧಿಸಿ, ಸ್ವಾಗತಿಸಿದರು.