ಶರಣರು ಹೇಳಿದ ಸರಳ ಸೂತ್ರ ಅನುಸರಿಸಿದಲ್ಲಿ ಮನಸ್ಸು ಸ್ವಚ್ಛವಾಗಲಿದೆ-ಗವಿಸಿದ್ದೇಶ್ವರ ಸ್ವಾಮೀಜಿ

KannadaprabhaNewsNetwork |  
Published : Nov 15, 2024, 12:34 AM IST
ಪೋಟೋ ಇದೆ. | Kannada Prabha

ಸಾರಾಂಶ

ಹುಟ್ಟಿದ ಕೂಡಲೇ ಸ್ವಚ್ಛವಾಗಿದ್ದ ಮನಸ್ಸು, ಬೆಳೆದಂತೆ ಕಲುಷಿತಗೊಳ್ಳುತ್ತಿದೆ. ಇಂತಹ ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಬೇಕು, ಶರಣರು ಹೇಳಿದ ಸರಳ ಸೂತ್ರವನ್ನು ಅನುಸರಿಸಿದಲ್ಲಿ ಮನಸ್ಸು ಸ್ವಚ್ಛವಾಗಲಿದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ತಿಳಿಸಿದರು.

ಬ್ಯಾಡಗಿ: ಹುಟ್ಟಿದ ಕೂಡಲೇ ಸ್ವಚ್ಛವಾಗಿದ್ದ ಮನಸ್ಸು, ಬೆಳೆದಂತೆ ಕಲುಷಿತಗೊಳ್ಳುತ್ತಿದೆ. ಇಂತಹ ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಬೇಕು, ಶರಣರು ಹೇಳಿದ ಸರಳ ಸೂತ್ರವನ್ನು ಅನುಸರಿಸಿದಲ್ಲಿ ಮನಸ್ಸು ಸ್ವಚ್ಛವಾಗಲಿದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ತಿಳಿಸಿದರು.

ಬ್ಯಾಡಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ “ಆಧ್ಯಾತ್ಮ ಪ್ರವಚನ”ದಲ್ಲಿ ಮಾತನಾಡಿದರು. ತನುವ ದಂಡಿಸಬೇಡ, ಮನವ ನಿಲ್ಲಿಸಬೇಡ, ಧನವ ನೀಗಿಸಬೇಡ , ಮನೆ ಮಾರು ತೊರೆದು ವನವಾಸ ಬೇಡ, ಎಲ್ಲಿ ಶರಣರ, ಸತ್ಪುರುಷರ ವಚನ ಗಂಗೆಯಲ್ಲಿ ಮಿಂದಲ್ಲಿ ಮನಸ್ಸು ಪವಿತ್ರ ಆಗಲಿದೆ. ಇದನ್ನೊಂದು ತಿಳಿದುಕೊಂಡಲ್ಲಿ ಮನಸ್ಸು ಸ್ವಚ್ಛವಾಗಲಿದೆ ಎಂದರು. ಹುಟ್ಟಿದಾಗ ಸ್ವಚ್ಛ ಇರೋ ಮನಸ್ಸನ್ನು ನಾವು ಬೆಳಿತಾ ಹೊಲಸು ಮಾಡತಾ ಹೊಂಟೆವಿ, ಮನೆಯಲ್ಲಿ ಸೊಳ್ಳೆ ಕಡಿಯದಿರಲು ಗುಡ್ ನೈಟ್ ಹಚ್ಚಬೇಕು, ಮನಸ್ಸಿನಲ್ಲಿನ ದುಃಖ, ನೋವು ಹತಾಸೆ ಹಾಗೂ ಹೊಲಸೆಂಬ ಸೊಳ್ಳೆಗಳನ್ನು ಓಡಿಸಲು ಶರಣರ ವಚನಾಮೃತದ ಗುಡ್ ಲೈಟ್ ಹಚ್ಚಬೇಕು ಅಂದಾಗ ಮಾತ್ರ ಪ್ರಾಪಂಚಿಕ ಸುಖಗಳನ್ನು ತೊರೆದು ಮನಸ್ಸು ಭಗವಂಗತನಲ್ಲಿ ಲೀನ ಮಾಡಲು ಸಾಧ್ಯವಾಗಲಿದೆ ಎಂದರು.

ತುಂಬಿಕೊಂಡು ಹೋದರ ಸಂಸಾರ, ತುಂಬಿದನ್ನ ಖಾಲಿ ಮಾಡಕೊಂಡು ಹೋಗೋದ ಸನ್ಯಾಸ, ಇಷ್ಟೆ ಸಂಸಾರಕ್ಕೂ ಸನ್ಯಾಸಕ್ಕೂ ಇರುವ ವ್ಯತ್ಯಾಸ. ಸಂಸಾರದ ಜಂಜಾಟಗಳಲ್ಲಿ ಸಿಲುಕಿ ನಲುಗುತ್ತಿರುವ ಮನಸ್ಸನ್ನು ಖಾಲಿ ಮಾಡುವುದು ಆಧ್ಯಾತ್ಮವೇ ಹೊರತು ಬೇರೆ ಯಾವುದರಿಂದಲೂ ಸಾಧ್ಯವಿಲ್ಲ ಎಂದರು. ಇಂದಿನ ಕಾಲದಲ್ಲಿ ಹೊಟೆಲ್ ಮ್ಯಾನೇಜಮೆಂಟ್, ಆ ಮ್ಯಾನೇಜಮೆಂಟ್, ಈ ಮ್ಯಾನೇಜಮೆಂಟ್ ಅಂತ ಕಟ್ಟಿದರ ಹಿಂದಿನ ಕಾಲದಲ್ಲಿ ಶರಣರು ಮನಸ್ಸನ್ನು ಶುದ್ಧಿಕರಿಸುವ ಮೈಂಡ್ ಮಾನೇಜ್ ಮೆಂಟ್ ಕಟ್ಯಾರ, ಅದಕ್ಕೆ ಶರಣರ ಸಂಗ ನಮ್ಮ ಹೊಲಸು ತುಂಬಿದ ಮನಸ್ಸು ಸ್ವಚ್ಛ ಮಾಡೋದಕ್ಕ ಇರುವ ಸುಲಭ ಮಾರ್ಗ ಈ ಮಾರ್ಗದಲ್ಲಿ ನಡೆಯೋದನ್ನ ನಾವೆಲ್ಲರೂ ಕಲಿಯಬೇಕಾಗಿದೆ ಎಂದರು.

ಒಳ್ಳೆಯ ಜನರು ಯಾವುದೇ ಹಣ ಅಧಿಕಾರದಿಂದ ಸಿಗಲ್ಲ, ಅದೃಷ್ಟದಿಂದ ಸಿಗತಾರ. ಅದಕ್ಕೆ ನಮಗೆಲ್ಲ ಒಳ್ಳೆಯ ಜನರ ಸಂಗ ಅತ್ಯಂತ ಅವಶ್ಯವಿದೆ, ಒಳ್ಳೆಯವರು ಸಿಕ್ಕರ ಅವರು ಯಾವ ಜಾತಿ, ಧರ್ಮ, ಬಡವ ಬಲ್ಲಿದ ಅಂತ ನೋಡಬಾರದು. ಬದಲಾಗಿ ಅವರಿಂದ ಎಷ್ಟು ಒಳ್ಳೆ ಮಾತು ಸಿಗತಾವ ಅದನ್ನ ಜೀವನದಾಗ್‌ ಅಳವಡಿಸಿಕೊಳ್ಳಲು ಸಿಗತದ ಅನ್ನೋದ ಮಾತ್ರ ನೋಡಬೇಕು ಎಂದರು.

ಜ್ಞಾನವನ್ನು ಹಲವು ಶತಮಾನದಿಂದ ಶರಣರು ಸಂತರು ಜನರಿಗೆ ಧಾರೆ ಎರೆಯುವ ಕಾರ್ಯ ಮಾಡ್ಯಾರ, ಅದನ್ನ ಜೀವನದಾಗ ಅಳವಡಿಸಿಕೊಳ್ಳೋದ ಕಲಿಬೇಕ, ಅಂದಾಗ ಮನುಷ್ಯನ ಜೀವ ಸಾರ್ಥಕ ಆಗಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!