- ಧಾರವಾಡ ಐಐಟಿ ನಿರ್ದೇಶಕ ಡಾ. ವೆಂಕಪ್ಪಯ್ಯ ದೇಸಾಯಿಕನ್ನಡಪ್ರಭ ವಾರ್ತೆ ಧಾರವಾಡ
ಐಐಟಿ ಧಾರವಾಡದ ಮೊದಲ ಹಳೆಯ ವಿದ್ಯಾರ್ಥಿಗಳ ಸಮಾವೇಶಕ್ಕೂ ಮುಂಚೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈಗಾಗಲೇ ಕೃಷಿ ತಂತ್ರಜ್ಞಾನ ಬೆಳೆದರೂ ಇನ್ನೂ ತಾಂತ್ರಿಕವಾಗಿ ಈ ಕ್ಷೇತ್ರ ಬೆಳೆಯಬೇಕಿದೆ. ಆದ್ದರಿಂದ ಸುಸ್ಥಿರ ಬೆಳವಣಿಗೆಗೆ ಒತ್ತು ನೀಡುವ ಕ್ಷೇತ್ರಗಳಾಗಿ ಕೃಷಿ ತಂತ್ರಜ್ಞಾನದ ಜೊತೆಗೆ ಸ್ವಚ್ಛ ಇಂಧನ ಕ್ಷೇತ್ರ ಸಾಕಷ್ಟು ಬೆಳವಣಿಗೆಯಾಗಿ ಈ ಕ್ಷೇತ್ರಗಳಲ್ಲಿ ಹೆಚ್ಚು ಗಮನ ಹಾಗೂ ಸಂಶೋಧನೆ ಕೈಗೊಳ್ಳಲಾಗುವುದು ಎಂದರು.2016ರಲ್ಲಿ ಶುರುವಾಗಿರುವ ಧಾರವಾಡ ಐಐಟಿಯಲ್ಲಿ ಇದು ವರೆಗೆ ನಾಲ್ಕು ಬ್ಯಾಚ್ನ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಏಳು ವರ್ಷಗಳಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ, ಪ್ರತಿಭಾನ್ವಿತ ಭೋದಕ ವರ್ಗ ಮತ್ತು ಸಮಗ್ರ ಬೆಳವಣಿಗೆಗೆ ಸೂಕ್ತ ವಾತಾವರಣದೊಂದಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಒದಗಿಸುತ್ತಿದ್ದೇವೆ ಎಂದ ಅವರು, ಇಲ್ಲಿ ವರೆಗೆ 487 ಸ್ನಾತಕಪೂರ್ವ, 20 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪಡೆದು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ವಲಯಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಇಲ್ಲಿ 9 ಪದವಿ ಪೂರ್ವ, ನಾಲ್ಕು ಬಿಎಸ್-ಎಂಎಸ್, ಎರಡು ಎಂಟೆಕ್ ಹಾಗೂ ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟಲಿಜನ್ಸ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ ತಂತ್ರಜ್ಞಾನದಲ್ಲಿ ಎರಡು ಕಾರ್ಯಕಾರಿ ಎಂಟೆಕ್ ಕಾರ್ಯಕ್ರಮ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಐಐಟಿ ವಿವಿಧ ವಿಭಾಗಗಳ ಪ್ರಾಧ್ಯಾಪಕರಾದ ವಿ.ಆರ್. ದೇಸಾಯಿ, ಕೆ.ಬಿ. ಜಯಕುಮಾರ, ಸೂರ್ಯ ಪ್ರತಾಪಸಿಂಗ್, ವೈ.ಎಸ್. ನಾರಾಯಣ ಇದ್ದರು.