ಪಂಚವಾದ್ಯಗಳೊಂದಿಗೆ, ಕೊಲ್ಲೂರಿನ ಓಲಗ ಮಂಟಪದಿಂದ ರಥಬೀದಿಯಲ್ಲಿ ಪೂರ್ಣಕುಂಭ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕಿರೀಟ ಹಾಗೂ ಚಿನ್ನಾಭರಣಗಳನ್ನು ತಂದು, ಕ್ಷೇತ್ರದ ಋತ್ವಿಜರು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ, ದೇವರಿಗೆ ಕಿರೀಟ ಹಾಗೂ ಆಭರಣಗಳನ್ನು ಒಪ್ಪಿಸಲಾಯಿತು. ಈ ವೇಳೆ ದೇವಸ್ಥಾನದ ವತಿಯಿಂದ ಇಳಯರಾಜ ಅವರನ್ನು ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಂದಾಪುರದಕ್ಷಿಣ ಭಾರತದ ಸುಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಗೆ ಬುಧವಾರ ಕೋಟ್ಯಂತರ ಮೌಲ್ಯದ ವಜ್ರಖಚಿತ ಕಿರೀಟ ಹಾಗೂ ಚಿನ್ನಾಭರಣವನ್ನು ಅರ್ಪಿಸಿದ್ದಾರೆ.ಪಂಚವಾದ್ಯಗಳೊಂದಿಗೆ, ಕೊಲ್ಲೂರಿನ ಓಲಗ ಮಂಟಪದಿಂದ ರಥಬೀದಿಯಲ್ಲಿ ಪೂರ್ಣಕುಂಭ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕಿರೀಟ ಹಾಗೂ ಚಿನ್ನಾಭರಣಗಳನ್ನು ತಂದು, ಕ್ಷೇತ್ರದ ಋತ್ವಿಜರು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ, ದೇವರಿಗೆ ಕಿರೀಟ ಹಾಗೂ ಆಭರಣಗಳನ್ನು ಒಪ್ಪಿಸಲಾಯಿತು. ಈ ವೇಳೆ ದೇವಸ್ಥಾನದ ವತಿಯಿಂದ ಇಳಯರಾಜ ಅವರನ್ನು ಗೌರವಿಸಲಾಯಿತು.
ಈ ಹಿಂದೆ ದೇವಿಗೆ ವಜ್ರಖಚಿತ ಹಸ್ತವನ್ನು ನೀಡಿದ್ದ ಇಳಯರಾಜ್, ಇಂದು ಶ್ರೀ ದೇವಿಗೆ ವಜ್ರ ಕಿರೀಟ, ಚಿನ್ನಾಭರಣ, ಶ್ರೀ ವೀರಭದ್ರ ದೇವರಿಗೆ ರಜತ ಕಿರೀಟ ಸಹಿತ ಖಡ್ಗವನ್ನು ಸಮರ್ಪಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.