ಮಾಗುಂಡಿ ವಲಯದ ಹಲಸೂರು ಮೀಸಲು ಅರಣ್ಯದಲ್ಲಿ ನಾಟಾ ಪತ್ತೆ
ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ದಾಖಲಿಸಲಾಗಿದೆ.
ಮಾಗುಂಡಿ ವಲಯದ ಹಲಸೂರು ಮೀಸಲು ಅರಣ್ಯದ ಸರ್ವೆ ನಂ.೪೫ರ ನೇಮನಹಳ್ಳಿ ಸಾಗುವಾನಿ ನೆಡುತೋಪಿನ ಕೆಮ್ಮಣ್ಣುಮಟ್ಟು ಎಂಬಲ್ಲಿ ಮೂರು ಸಾಗುವಾನಿ ಮರ, ಒಂದು ಶಿವನೆ ಜಾತಿಯ ಮರವನ್ನು ಕಡಿದು ನಾಟಾ ಮಾಡಿ ಮುಚ್ಚಿಟ್ಟಿರುವ ಕುರಿತು ಬಂದ ಖಚಿತ ಮಾಹಿತಿ ಆಧರಿಸಿ ಉಪ ವಲಯ ಅರಣ್ಯಾಧಿಕಾರಿ ಅಕ್ರಮ ಪತ್ತೆ ಮಾಡಿದ್ದಾರೆ.ಸ್ಥಳದಲ್ಲಿ 6.081 ಘನ ಮೀಟರ್ ನಾಟಾ ಪತ್ತೆಯಾಗಿದೆ. ಘಟನೆ ಕುರಿತು ಹಲಸೂರು ಗ್ರಾಮದ ರವೀಶ, ಜಕ್ಕಣಕ್ಕಿ ಗ್ರಾಮದ ಶ್ರೀಧರ, ದೇವಗೋಡು ಗ್ರಾಮದ ಸತ್ಯನಾರಾಯಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನಾಪತ್ತೆ ಯಾಗಿದ್ದಾರೆ.
ಘಟನೆ ಕುರಿತು ಕಿಚ್ಚಬ್ಬಿಯ ಕೆ.ಎಂ.ಮೋಹನ್, ಸುರೇಶ್, ಹೇರೂರಿನ ಕುಮಾರ್, ದಿವಿನ್ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡು ಪ್ರಕರಣಗಳಲ್ಲಿ ನಾಟಾದ ಒಟ್ಟು ಮೊತ್ತ ₹7 ಲಕ್ಷ ಆಗಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಅಂದಾಜಿಸಿದ್ದಾರೆ.