ಅಕ್ರಮ ಮರಳು ಸಾಗಾಣಿಕೆ: 2 ಟ್ರ್ಯಾಕ್ಟರ್ ಜಪ್ತಿ, ಪ್ರತ್ಯೇಕ ಪ್ರಕರಣ ದಾಖಲು

KannadaprabhaNewsNetwork |  
Published : Oct 10, 2023, 01:00 AM IST
ಫೊಟೊ(ï09ಎಂಡಿಎಲ್01)  | Kannada Prabha

ಸಾರಾಂಶ

ನಾಗಲಾಪೂರ ಗ್ರಾಮದ ಹತ್ತಿರದ ಹಳ್ಳದಿಂದ ಸರ್ಕಾರದ ಸ್ವತ್ತಾದ ಮರಳನ್ನು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ಎರಡು ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.

ಮುದಗಲ್: ನಾಗಲಾಪೂರ ಗ್ರಾಮದ ಹತ್ತಿರದ ಹಳ್ಳದಿಂದ ಸರ್ಕಾರದ ಸ್ವತ್ತಾದ ಮರಳನ್ನು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ಎರಡು ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಮಸ್ಕಿ ತಾಲೂಕಿನ ಮೆದಕಿನಾಳ ಗ್ರಾಮದ ನಿಂಗಪ್ಪ ಎನ್ನುವ ಟ್ರ್ಯಾಕ್ಟರ್ ಮಾಲೀಕ ನಾಗಲಾಪೂರ ಹಳ್ಳದಿಂದ ಉಸಕುಸಾಗಿಸುತ್ತಿದ್ದ ಹಾಗೂ ರಾಮತ್ನಾಳ ಗ್ರಾಮದ ಮಂಜುನಾಥ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿರುವುದನ್ನು ಮಾಹಿತಿ ಪಡೆದ ಮುದಗಲ್ ಪೊಲಿಸರು 2 ಟ್ರ್ಯಾಕ್ಟರ್‌ಗಳನ್ನು ಜಪ್ತಿಮಾಡಿಕೊಂಡು ಮುದಗಲ್‌ ಪಿಎಸ್ಐ ವೆಂಕಟೇಶ ನೇತೃತ್ವದ ತಂಡ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ