ಕುಡಿವ ನೀರು ಘಟಕಗಳ ಅಸಮರ್ಪಕ ನಿರ್ವಹಣೆ

KannadaprabhaNewsNetwork |  
Published : Jun 20, 2026, 01:30 AM IST
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ಆರ್.ಕಾರ್ತಿಕೇಶ್ವರ, ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಆನಂದ್ ಉಪಾಧ್ಯಕ್ಷ ಬಂತಿವೆಂಕಟೇಶ್ ಭಾಗವಹಿಸಿದ್ದರು | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ನಗರದಲ್ಲಿರುವ ಕುಡಿಯುವ ನೀರಿನ ಶುದ್ದೀಕರಣ ಘಟಕಗಳಲ್ಲಿ ಸೂಕ್ತ ನಿರ್ವಹಣೆಯೇ ಇಲ್ಲ. ನಗರದ ಹಲವೆಡೆ ಕಲುಷಿತ ನೀರು ಸರಬರಾಜು ಆಗುತ್ತಿದೆ. ಒಳ ಚರಂಡಿ ಛೇಂಬರ್‌ಗಳ ಅವ್ಯವಸ್ಥೆ ಸರಿಯಾಗಿಲ್ಲ. ಸೂಕ್ತ ನಿರ್ವಹಣೆ ಮಾಡುವಲ್ಲಿ ನಗರಸಭೆ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ನಗರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು

ದೊಡ್ಡಬಳ್ಳಾಪುರ: ನಗರದಲ್ಲಿರುವ ಕುಡಿಯುವ ನೀರಿನ ಶುದ್ದೀಕರಣ ಘಟಕಗಳಲ್ಲಿ ಸೂಕ್ತ ನಿರ್ವಹಣೆಯೇ ಇಲ್ಲ. ನಗರದ ಹಲವೆಡೆ ಕಲುಷಿತ ನೀರು ಸರಬರಾಜು ಆಗುತ್ತಿದೆ. ಒಳ ಚರಂಡಿ ಛೇಂಬರ್‌ಗಳ ಅವ್ಯವಸ್ಥೆ ಸರಿಯಾಗಿಲ್ಲ. ಸೂಕ್ತ ನಿರ್ವಹಣೆ ಮಾಡುವಲ್ಲಿ ನಗರಸಭೆ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ನಗರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ನೀರಿನ ಸಮಸ್ಯೆ ಪ್ರತಿಧ್ವನಿಸಿತು. ದಿನೇದಿನೇ ಬೆಳೆಯುತ್ತಿರುವ ನಗರಕ್ಕೆ ಬೇಕಿರುವ ಮೂಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಬೇಕು. ಒಳ ಚರಂಡಿ ನಿರ್ಮಾಣದ 2ನೇ ಹಂತದ ಕಾಮಗಾರಿ ಆರಂಭ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಿದೆ ಎಂದು ಸದಸ್ಯ ಎಂ.ಜಿ.ಶ್ರೀನಿವಾಸ್‌ ಹೇಳಿದರು.

18ನೇ ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಆಗುತ್ತಿದ್ದರೂ, ಕೆಲವು ಗಂಟೆಗಳಷ್ಟೇ ಬಿಡಲಾಗುತ್ತಿದೆ. ಈ ಅವಧಿ ಹೆಚ್ಚು ಮಾಡಬೇಕು. ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸದಸ್ಯ ಶಿವಣ್ಣ ಆಗ್ರಹಿಸಿದರು.

ಖಾಸ್‌ಬಾಗ್‌ ದರ್ಗಾಪುರದಲ್ಲಿ ನೀರು ಕಲುಷಿತ ವಾಗುತ್ತಿದೆ ಎಂದು ಸದಸ್ಯ ಎಂ.ಮಲ್ಲೇಶ್ ದೂರಿದರು. ನೀರು ಶುದ್ದೀಕರಣ ಘಟಕಗಳ ಶುದ್ದೀಕರಣದ ಬಗ್ಗೆ ಪ್ರಯೋಗಾಲಯದ ವರದಿ ಪ್ರಕಟಿಸಿ, ನೀರಿನ ಶುದ್ಧತೆಯನ್ನು ಜನರಿಗೆ ತಿಳಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ನಗರದಲ್ಲಿ ಒಳ ಚರಂಡಿ ಛೇಂಬರ್‌ಗಳು ಕಟ್ಟಿಕೊಂಡು ಮನೆಗಳ ಬಳಿ ದುರ್ನಾತ ಬೀರುತ್ತಿದೆ. ಸೂಕ್ತ ನಿರ್ವಹಣೆ ಆಗುತ್ತಿಲ್ಲ. ನಗರದ ರಸ್ತೆಗಳು ಹಾಳಾಗಿದ್ದು, ಗುಂಡಿಗಳೇ ಹೆಚ್ಚಾಗಿವೆ. ನೀರು ಸರಬರಾಜು ಮತ್ತು ಎಂಜಿನಿಯರಿಂಗ್ ವಿಭಾಗಗಳನ್ನು ಒಬ್ಬರೇ ನಿರ್ವಹಿಸುತ್ತಿರುವುದು ಸಹ ಕಾರಣ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಸದಸ್ಯ ಡಿ.ಎಂ.ಆನಂದ್ ಆಗ್ರಹಿಸಿದರು.

ಸೂಕ್ತ ಕ್ರಮದ ಭರವಸೆ:

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಆರ್. ಕಾರ್ತಿಕೇಶ್ವರ, ಇತರ ನಗರಗಳಿಗೆ ಹೋಲಿಸಿದರೆ ನಮ್ಮಲ್ಲಿ ನೀರಿನ ಗಂಭೀರ ಸಮಸ್ಯೆ ಇಲ್ಲ. ಕೆಲವು ಬಾರಿ ವಿದ್ಯುತ್ ಸಮಸ್ಯೆಯಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇನ್ನು ಒಳಚರಂಡಿ ಯನ್ನು ದುರಸ್ತಿ ಮಾಡಬೇಕಿದೆಯೇ ಹೊರತು ಹೊಸದಾಗಿ ನಿರ್ಮಾಣ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನೀರು ಶುದ್ದೀಕರಣದ ಬಗ್ಗೆ ವರದಿ ನೀಡಲು ಸೂಚಿಸಿದೆ. ಕಾಮಗಾರಿಗಳ ಬಗ್ಗೆ ಪ್ರತಿ ವಾರ ವರದಿ ಸಲ್ಲಿಸಲು ನಿರ್ದೇಶಿಸಿದ್ದು, ಸಮಯಕ್ಕೆ ಸರಿಯಾಗಿ ಕಾಮಗಾರಿಗಳನ್ನು ಮುಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದು. ಸಾರ್ವಜನಿಕರು ಓಡಾಡಲು ತೊಂದರೆಯಾಗಿದ್ದು, ದುರಸ್ತಿ ಮಾಡಬೇಕು ಎಂಬ ಒತ್ತಾಯಕ್ಕೆ ಸದಸ್ಯರು ದನಿಗೂಡಿಸಿದರು.ಇ- ಆಡಳಿತದಲ್ಲಿ ದಾಖಲೆಗಳ ನೆಪವೊಡ್ಡಿ, ಯಾವುದೇ ಕೆಲಸಗಳಾಗುತ್ತಿಲ್ಲ. ಅಪ್‌ಲೋಡ್ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಗುತ್ತಿಗೆದಾರರ ಮೇಲೆ ಕ್ರಮ:

ನಗರದಲ್ಲಿ ನಗರೋತ್ಥಾನ ಯೋಜನೆಯ ಕೆಲಸಗಳು ವಿಳಂಬವಾಗುತ್ತಿವೆ. ಇರುವ ನಾಲ್ಕು ತಿಂಗಳಲ್ಲಿ ಇನ್ನು ಎಷ್ಟು ಕಾಮಗಾರಿಗಳನ್ನು ಪೂರೈಸಲು ಸಾಧ್ಯ ಎಂದು ಪ್ರಶ್ನಿಸಿದ ಸದಸ್ಯ ವಿ.ಎಸ್.ರವಿಕುಮಾರ್, ''''''''''''''''''''''''''''''''''''''''''''''''''''''''''''''''ಟೆಂಡ‌ರ್ ಕರೆದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಬೇಕು. ನಿರ್ಲಕ್ಷ್ಯ ವಹಿಸುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷೆ ರಾಜೀನಾಮೆ ಅಂಗೀಕಾರ:ವೈಯಕ್ತಿಕ ಕಾರಣಗಳಿಂದಾಗಿ ನಗರಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸುಮಿತ್ರಾ ಆನಂದ್ ಜೂನ್ 1ರಂದು ಸಲ್ಲಿಸಿದ್ದ ರಾಜೀನಾಮೆಯನ್ನು ಜಿಲ್ಲಾಧಿಕಾರಿ ಕೆ.ಎನ್.ಅನುರಾಧ ಅಂಗೀಕರಿಸಿದ್ದಾರೆ.ಸಭೆಯ ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷ ಬಂತಿ ವೆಂಕಟೇಶ್ ಸಭೆ ನಡೆಸಿದರು.ಬಾಕ್ಸ್‌.............

ಕಾನೂನು ಬಾಹಿರ ಅನುದಾನ ಅನುಮೋದನೆ

ನಗರದ ಸಂಜಯನಗರದಲ್ಲಿ ಎಸ್ಆ‌ರ್‌ಸಿ ಗರಡಿ ಮನೆಗೆ ನಗರಸಭೆಯಿಂದ ₹30 ಲಕ್ಷ ಅನುದಾನ ನೀಡಲಾಗಿದೆ. ಇಲ್ಲಿ ಎರಡು ಟ್ರಸ್ಟ್‌ಗಳಾಗಿದ್ದು, ಅದರಲ್ಲಿ ಒಂದು ಟ್ರಸ್ಟ್‌ಗೆ ಅಧ್ಯಕ್ಷರು ಸಭೆಯಲ್ಲಿ ಚರ್ಚಿಸದೆ ನಿಯಮಬಾಹಿರವಾಗಿ ಅನುದಾನ ಮಂಜೂರು ಮಾಡಿದ್ದಾರೆ. ಎಸ್‌ಆರ್‌ಸಿ ಗರಡಿ ಮನೆ ಮತ್ತು ವ್ಯಾಯಾಮ ಶಾಲೆ ಮತ್ತು ಸರ್ವಸಿದ್ದಿ ಗಣಪತಿ ಮಂದಿರ ಟ್ರಸ್ಟ್ ನಗರಸಭೆಗೆ ದೂರು ಸಲ್ಲಿಸಿದೆ. ಇದನ್ನು ಸರಿಪಡಿಸದಿದ್ದರೆ ಅಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂದು ಸದಸ್ಯ ಟಿ.ಎನ್.ಪ್ರಭುದೇವ್ ಹೇಳಿದರು.

ಅಧ್ಯಕ್ಷರು ಟ್ರಸ್ಟ್ ವಿಚಾರದಲ್ಲಿ ತಪ್ಪು ತೀರ್ಮಾನ ಕೈಗೊಂಡಿದ್ದಾರೆ. ನಿಯಮ ಬಾಹಿರವಾಗಿ ಟ್ರಸ್ಟ್‌ಗೆ ಅನುದಾನ ನೀಡಿರುವುದು ಸರಿಯಲ್ಲ ಎಂದು ಸದಸ್ಯ ಎಂ.ಜಿ.ಶ್ರೀನಿವಾಸ್ ಆಕ್ಷೇಪಿಸಿದರು.

ಟ್ರಸ್ಟ್ ನಿಯಮಾನುಸಾರ ಇದೆ. ನಮ್ಮದು ನಿರ್ವಹಣೆಯಷ್ಟೇ. 4 ವರ್ಷದಿಂದ ಯಾರೂ ಕೇಳಿಲ್ಲ. ಇದು ನಮ್ಮ ವಾರ್ಡ್ ವಿಚಾರವಾಗಿದ್ದು, ನಾವೂ ಬಗೆಹರಿಸಿಕೊಳ್ಳುತ್ತೇವೆ ಎಂದು ಸದಸ್ಯೆ ಸುಧಾರಾಣಿ ತಿಳಿಸಿದರು.

ಟ್ರಸ್ಟ್‌ಗಳಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಹಿರಿಯ ಸದಸ್ಯರು ಹಾಗೂ ವಾರ್ಡ್‌ ಮುಖಂಡರು ಸೇರಿ ಒಂದು ಸಮಿತಿ ಮಾಡುವ ಮೂಲಕ ಗರಡಿ ಮನೆ ಉಳಿಸಬೇಕು. ಇದರಿಂದ ಸಮಾಜಕ್ಕೆ ಒಳ್ಳೆಯದಾಗುವ ಕೆಲಸವಾಗಬೇಕು ಎಂದು ಸದಸ್ಯ ಎಚ್‌.ಎಸ್.ಶಿವಶಂಕರ್ ಸಲಹೆ ನೀಡಿದರು.ಫೋಟೋ-19ಕೆಡಿಬಿಪಿ2-

ದೊಡ್ಡಬಳ್ಳಾಪುರ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ಆರ್.ಕಾರ್ತಿಕೇಶ್ವರ, ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಆನಂದ್, ಉಪಾಧ್ಯಕ್ಷ ಬಂತಿವೆಂಕಟೇಶ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕರು ಅವರವರ ಆತ್ಮಸಾಕ್ಷಿಗೆ ಮತ ಚಲಾಯಿಸಿದ್ದಾರೆ
ಸೂಕ್ತ ಪರಿಷ್ಕರಣೆಯಿಂದ 14 ಲಕ್ಷ ಮತಗಳು ವಿಮರ್ಶೆಗೆ ಒಳಪಡುತ್ತದೆ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ