ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ: ನ್ಯಾ.ಆರ್.ಮಹೇಶ್

KannadaprabhaNewsNetwork |  
Published : Jun 23, 2026, 01:45 AM IST
22ಕೆಎಂಎನ್ ಡಿ11 | Kannada Prabha

ಸಾರಾಂಶ

ಯೋಗ ಭಾರತದ ಪ್ರಾಚೀನ ಕಲೆ, ಯೋಗ ನಮ್ಮ ದೇಶದ ಸಂಸ್ಕ್ರತಿ. ಯೋಗ ಅಂದ್ರೆ ಸಂಯೋಗ, ದೇಹ ಮತ್ತು ಮನಸ್ಸು ಎರಡು ಸಂಯೋಗವಾಗುವ ಕಲೆಯೇ ಯೋಗ. ದೇಶದ ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿ 2015ರ ಜೂನ್ 21ರಂದು ಯೋಗವನ್ನು ಅಂತಾರಾಷ್ಟ್ರೀಯ ಕ್ರೀಡೆಯಾಗಿ ಮಾಡುವುದಾಗಿ ಜಾರಿಗೆ ತಂದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸಲಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪಾಂಡವಪುರ ನ್ಯಾಯಾಂಗ ವಿಭಾಗ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ವಿಶ್ವ ಯೋಗದಿನದ ಪ್ರಯುಕ್ತ ನಡೆದ ಯೋಗಾಭ್ಯಾಸದಲ್ಲಿ ಮಾತನಾಡಿದರು.

ಯೋಗ ಭಾರತದ ಪ್ರಾಚೀನ ಕಲೆ, ಯೋಗ ನಮ್ಮ ದೇಶದ ಸಂಸ್ಕ್ರತಿ. ಯೋಗ ಅಂದ್ರೆ ಸಂಯೋಗ, ದೇಹ ಮತ್ತು ಮನಸ್ಸು ಎರಡು ಸಂಯೋಗವಾಗುವ ಕಲೆಯೇ ಯೋಗ. ದೇಶದ ಪ್ರಧಾನಿ ಮೋದಿ ವಿಶ್ವಸಂಸ್ಥೆಯಲ್ಲಿ 2015ರ ಜೂನ್ 21ರಂದು ಯೋಗವನ್ನು ಅಂತಾರಾಷ್ಟ್ರೀಯ ಕ್ರೀಡೆಯಾಗಿ ಮಾಡುವುದಾಗಿ ಜಾರಿಗೆ ತಂದರು ಎಂದರು.

ಅಂದಿನಿಂದ ಪ್ರತಿ ವರ್ಷ ಕಡ್ಡಾಯವಾಗಿ ಎಲ್ಲೆಡೆ ಜೂನ್ 21ರಂದು ಯೋಗ ದಿನಾಚರಣೆ ಆಚರಿಸಲಾಗುತ್ತದೆ. ನ್ಯಾಯಾಲಯದ ಆವರಣದಲ್ಲಿ ಕಡ್ಡಾಯವಾಗಿ ಯೋಗ ದಿನಾಚರಣೆ ಮಾಡಬೇಕೆಂಬ ಉಚ್ಚ ನ್ಯಾಯಾಲಯದ ಆದೇಶ ಇದೆ. ಹೀಗಾಗಿ ಆಚರಿಸಲಾಗುತ್ತಿದೆ ಎಂದರು.

ಹಿರಿಯ ನೇತ್ರ ತಜ್ಞ ವೈದ್ಯೆ ಡಾ.ಮಣಿಕರ್ಣಿಕಾ ಮಾತನಾಡಿ, ಯೋಗಾಶನ ಎಂಬುದು ಜೀವನದ ಒಂದು ಕ್ರಮ. ಮನುಷ್ಯನ ಜೀವನ ಕ್ರಮ, ಆಹಾರ ಕ್ರಮ ಹಾಗೂ ನಡಾವಳಿಕೆ ಕ್ರಮವನ್ನು ಈ ಯೋಗ ಹೇಳುತ್ತದೆ. ಆರೋಗ್ಯ ಸಮಸ್ಯೆ ಇರುವವರು ಕೂಡ ಯೋಗ ಮಾಡಬಹುದು ಎಂದರು.

ಈ ವೇಳೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್.ಬಾಬು, ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಚ್.ಎಸ್.ಪೂಜಾ, ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಕೆ.ಎಸ್.ಮೋಹನ್ ಕುಮಾರ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಎಸ್.ಜಯರಾಂ, ಯೋಗಗುರುಗಳಾದ ಸೋಮಶೇಖರ್, ಪ್ರಭಾವತಿ, ಯೋಗ ಸಮಿತಿ ಸದಸ್ಯರಾದ ಡಾ.ಮಣಿಕರ್ಣಿಕಾ, ಪೊಲೀಸ್ ಜವರೇಗೌಡ, ಪೂಜಾ, ಭುವನೇಶ್ವರಿ, ನಳಿನಿ, ನಿರ್ಮಲ, ಅಂಬಿಕಾ, ಜೆ.ರಾಧಾ, ಜಯಲಕ್ಷ್ಮಿ, ರಜಿನಿ, ಲೀಲಾವತಿ, ಕವಿತಾ, ಶೋಭಾ, ಲಾವಣ್ಯ, ಯಶೋದಮ್ಮ, ಪುಟ್ಟಮಾದ್ದೇಗೌಡ, ರೈಟರ್ ಸ್ವಾಮಿಗೌಡ, ಟಿ.ಲೋಕೇಶ್, ಸದಾನಂದ, ಡಿ.ಶಿವಣ್ಣ, ಅರಣ್ಯ ಇಲಾಖೆ ಮಂಜು, ಸೌಮ್ಯ, ಕಲಾವತಿ, ಶಿಲ್ಪಾ, ತುಕಾರಾಮ್, ಅಪ್ಪಾಜಿ, ಮೀನಾ, ಜಯ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದರ್ಶನ್‌ ಪತ್ನಿ ನಿಂದಕರಿಗೆ ಜೈಲೇ ಗತಿ
ಅಂಕೇಗೌಡರ ಸಂಗ್ರಹಿಸಿರುವ ಪುಸ್ತಕಗಳಿಗೆ ಸೂಕ್ತ ಜಾಗ, ಕಟ್ಟಡ ವ್ಯವಸ್ಥೆ: ಸಿಎಂ ಸೂಚನೆ