ಮುಂದೆ ಗುರಿ ಹಿಂದೆ ಗುರು ಇರಬೇಕು

KannadaprabhaNewsNetwork |  
Published : Jan 13, 2025, 12:46 AM IST
ಅರಸೀಕೆರೆ ಗ್ರಾಮಾಂತರ ಭಾರತೀಯ ಜೀವ ವಿಮಾನ ನಿಗಮದ ಶಾಖಾ ಖರ್ಚೇರಿಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ವಾರ್ಷಿಕೋತ್ಸವವನ್ನು ಜೈ ಹೊ ರಾಮನಲ್ಲಿ ಕಾರ್ಯಕ್ರಮ ಉದ್ಘಾಟಿಸುತ್ತಿರುವುದು ಈ ಸಂದರ್ಭದಲ್ಲಿ  ಸಮಾಜ ಚಿಂತಕ ಶಿವಶಂಕರ್, ಬಲವಂತ ಮಾರುತಿ, ಶ್ರೀನಿವಾಸ್, ಜೈಪಾಲ್,ನಂದೀಶ್, ಸೇತುರಾಮ್ ಹಾಜರಿದ್ದರು | Kannada Prabha

ಸಾರಾಂಶ

ಮುಂದೆ ಗುರಿ ಇರಬೇಕು ಹಿಂದೆ ಗುರುವಿನ ಮಾರ್ಗದರ್ಶನ ಇರಬೇಕು. ಆಗ ಮಾತ್ರ ಮುಕ್ತಿ, ಮತ್ತು ಆದರ್ಶ ಹೊಂದಲು ಸಾಧ್ಯ ಎಂದು ಸಮಾಜ ಚಿಂತಕ ಶಿವಶಂಕರ್ ಅಭಿಪ್ರಾಯಪಟ್ಟರು. ಭಾರತೀಯ ಜೀವ ವಿಮಾ ನಿಗಮದ ಶಾಖಾ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜೈ ಹೋ ರಾಮಲಲ್ಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ರಾಮಚಂದ್ರ ಪ್ರತಿಯೊಬ್ಬ ವ್ಯಕ್ತಿಗೆ ಆದರ್ಶ ಮರ್ಯಾದ ಪುರುಷೋತ್ತಮ ಎನಿಸಿಕೊಂಡರು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮುಂದೆ ಗುರಿ ಇರಬೇಕು ಹಿಂದೆ ಗುರುವಿನ ಮಾರ್ಗದರ್ಶನ ಇರಬೇಕು. ಆಗ ಮಾತ್ರ ಮುಕ್ತಿ, ಮತ್ತು ಆದರ್ಶ ಹೊಂದಲು ಸಾಧ್ಯ ಎಂದು ಸಮಾಜ ಚಿಂತಕ ಶಿವಶಂಕರ್ ಅಭಿಪ್ರಾಯಪಟ್ಟರು.

ಭಾರತೀಯ ಜೀವ ವಿಮಾ ನಿಗಮದ ಶಾಖಾ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜೈ ಹೋ ರಾಮಲಲ್ಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ರಾಮಚಂದ್ರ ಪ್ರತಿಯೊಬ್ಬ ವ್ಯಕ್ತಿಗೆ ಆದರ್ಶ ಮರ್ಯಾದ ಪುರುಷೋತ್ತಮ ಎನಿಸಿಕೊಂಡರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಒಂದು ವರ್ಷದ ವಾರ್ಷಿಕೋತ್ಸವ ಆಯೋಜನೆ ಮಾಡಿದ ಜೀವವಿಮಾ ನಿಗಮದ ವಲಯ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣದ ವಾರ್ಷಿಕೋತ್ಸವದ ಅಂಗವಾಗಿ 2 ಪಾಲಿಸಿಗಳನ್ನು ನೀಡಿದವರಿಗೆ ಶ್ರೀ ರಾಮನ ವಿಗ್ರಹವನ್ನು ಕೊಡುಗೆಯಾಗಿ, ಬಹುಮಾನವಾಗಿ 93 ಜನ ಪ್ರತಿನಿಧಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್, ಜೈಪಾಲ್ ಬೆಟ್ನರ್, ರವಿಶಂಕರ್, ನಂದೀಶ್ ಬ್ಯಾಡಗಿ, ಲಿಂಗರಾಜು, ಸುಮಂತ್ , ರವೀಂದ್ರನಾಥ, ಮಾರಣಕೌಶಿ, ಲೋಕೇಶ್, ವಿಜಯ್, ಆರ್‌ ಎಮ್ ಲೋಕೇಶ್, ಶಿವಮೂರ್ತಿ, ರಾಜಶೇಖರ್ ಸೇತುರಾಮ್ ರಾಮಚಂದ್ರ, ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?