ಗುಂಡ್ಲುಪೇಟೆಯ ಬಂಡೀಪುರದಲ್ಲಿ ವನ್ಯಜೀವಿಗಳ ಜೀವನಾಡಿ ‘ಹಿರಿಕೆರೆ’ ಕೋಡಿ ಬೀಳಲು ಆರಂಭ

KannadaprabhaNewsNetwork |  
Published : Jul 24, 2024, 12:15 AM IST
ವನ್ಯಜೀವಿಗಳ ಜೀವನಾಡಿ ʼಹಿರಿಕೆರೆ ಕೋಡಿʼ ಬೀಳಲು ಶುರು ವಾಯ್ತು! | Kannada Prabha

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ವಲಯದ ಹಿರಿಕೆರೆ ತುಂಬಿ ಕೋಡಿ ಬೀಳಲು ಶುರು ಮಾಡಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ವಲಯದ ಹಿರಿಕೆರೆ ತುಂಬಿ ಕೋಡಿ ಬೀಳಲು ಶುರು ಮಾಡಿದೆ.

ಶ್ರೀಗಂಧದ ಮೀಸಲು ಅರಣ್ಯ ಪ್ರದೇಶದ ಹಿರಿಕೆರೆ ಬಂಡೀಪುರ ಅರಣ್ಯದ ವನ್ಯಜೀವಿಗಳಿಗೆ ಆಸರೆಯಾಗಿದ್ದ ಕೆರೆಯಲ್ಲಿ ಕಳೆದ ೨ ವರ್ಷಗಳಿಂದ ನೀರು ಬಂದರೂ ಕೆರೆ ತುಂಬಿ ಕೋಡಿ ಬಿದ್ದಿರಲಿಲ್ಲ. ಕಳೆದ ಹಲವು ದಿನಗಳಿಂದ ಬಂಡೀಪುರ ಕಾಡಿನಲ್ಲಿ ಬಿದ್ದ ಮಳೆಯಿಂದ ಹಿರಿಕೆರೆ ನೀರು ಹರಿದು ಬಂದು ಕೆರೆ ತುಂಬಿ ತುಳುಕಲು ಶುರು ಮಾಡಿದೆ. ಹಿರಿ ಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಕೋಡಿ ಬಿದ್ದು ನೀರು ಹರಿದು ಹಂಗಳ ಗ್ರಾಮದ ಮುಂಭಾಗದಲ್ಲಿ ಕೆರೆ ನೀರು ಬರಲು ಜೋರು ಮಳೆ ಬೀಳಬೇಕಿದೆ.

ಹಿರಿಕೆರೆ ತುಂಬಿ ಹರಿದಿರುವ ಕಾರಣ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ಮುಖದಲ್ಲಿ ಮಂದ ಹಾಸ ಬೀರಿದೆ. ಇತ್ತ ಹಂಗಳ ಗ್ರಾಮದ ರೈತರ ಮುಖದಲ್ಲಿ ಮತ್ತಷ್ಟು ಮಂದಹಾಸ ನಗು ಕಾಣುತ್ತಿದೆ.

ಸಂತಸ ತಂದಿದೆ: ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ಕನ್ನಡಪ್ರಭದೊಂದಿಗೆ ಮಾತನಾಡಿ, ಹಿರಿಕೆರೆ ತುಂಬಿ ಕೋಡಿ ಬಿದ್ದಿರುವುದು ಅರಣ್ಯ ಇಲಾಖೆಗೆ ಸಂತಸವಾಗಿದೆ ಎಂದರು. ಗೋಪಾಲಸ್ವಾಮಿ ಬೆಟ್ಟದ ಅರಣ್ಯದ ವನ್ಯ ಜೀವಿಗಳ ಜೀವನಾಡಿಯಾಗಿರುವ ಹಿರಿಕೆರೆ ತುಂಬಿ ಕೋಡಿ ಬಿದ್ದಿರುವ ಕಾರಣ ಸಂತಸ ನಮಗಿಂತ ವನ್ಯಜೀವಿಗಳಿಗೆ ಮುಗಿಲು ಮುಟ್ಟಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ