ಆಧುನಿಕ ಜಗತ್ತಿನಲ್ಲಿ ಮಹಿಳೆಯರ ಸ್ವಾತಂತ್ರ್ಯವು ಕೇವಲ ಹಕ್ಕಲ್ಲ, ಅದು ಸಮಾಜದ ಪ್ರಗತಿಯ ಅಡಿಪಾಯ

KannadaprabhaNewsNetwork |  
Published : Mar 10, 2026, 02:15 AM IST
40 | Kannada Prabha

ಸಾರಾಂಶ

ಆಧುನಿಕ ಜಗತ್ತಿನಲ್ಲಿ ಮಹಿಳೆಯರ ಸ್ವಾತಂತ್ರ್ಯವು ಕೇವಲ ಹಕ್ಕಲ್ಲ, ಅದು ಸಮಾಜದ ಪ್ರಗತಿಯ ಅಡಿಪಾಯ. ಮಹಿಳೆಯರು ದಯೆ ಮತ್ತು ಮಾನವೀಯತೆಯೊಂದಿಗೆ ತಮ್ಮ ಸ್ವಾತಂತ್ರ್ಯವನ್ನು ಚಲಾಯಿಸಿದಾಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ. ಮಹಿಳೆಯರಿಗೆ ಆತ್ಮರಕ್ಷಣಾ ಕಲಿಕೆ ಕೇವಲ ದೈಹಿಕ ಕಸರತ್ತಲ್ಲ, ಬದಲಾಗಿ ಆತ್ಮರಕ್ಷಣೆ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಆಧುನಿಕ ಜಗತ್ತಿನಲ್ಲಿ ಮಹಿಳೆಯರ ಸ್ವಾತಂತ್ರ್ಯವು ಕೇವಲ ಹಕ್ಕಲ್ಲ, ಅದು ಸಮಾಜದ ಪ್ರಗತಿಯ ಅಡಿಪಾಯ ಎಂದು ಸೇಂಟ್ ಫಿಲೋಮಿನಾ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಸಿ.ಎ. ನೂರ್ ಮುಬಾಶೀರ್ ಹೇಳಿದರು.

ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸ್ಪರ್ಶ್ ಮತ್ತು ಮಹಿಳಾ ಸಬಲೀಕರಣ ಸಮಿತಿ ಹಾಗೂ ಐಕ್ಯೂಎಸಿನಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ‘ಸ್ವತಂತ್ರದೊಂದಿಗೆ ಆಧುನಿಕ ಜಗತ್ತನ್ನು ಮುನ್ನಡೆಸುವುದು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಮತ್ತು ಆತ್ಮರಕ್ಷಣಾ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಮಹಿಳೆಯರ ಸ್ವಾತಂತ್ರ್ಯವು ಕೇವಲ ಹಕ್ಕಲ್ಲ, ಅದು ಸಮಾಜದ ಪ್ರಗತಿಯ ಅಡಿಪಾಯ. ಮಹಿಳೆಯರು ದಯೆ ಮತ್ತು ಮಾನವೀಯತೆಯೊಂದಿಗೆ ತಮ್ಮ ಸ್ವಾತಂತ್ರ್ಯವನ್ನು ಚಲಾಯಿಸಿದಾಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದರು.

ಮಹಿಳೆಯರಿಗೆ ಆತ್ಮರಕ್ಷಣಾ ಕಲಿಕೆಯ ಮಹತ್ವದ ಬಗ್ಗೆ ಒತ್ತಿ ಹೇಳಿದ ಅವರು, ಇದು ಕೇವಲ ದೈಹಿಕ ಕಸರತ್ತಲ್ಲ, ಬದಲಾಗಿ ಆತ್ಮರಕ್ಷಣೆ ಮತ್ತು ಆತ್ಮವಿಶ್ವಾಸದ ಸಂಕೇತವಾಗಿದೆ ಎಂದು ವಿವರಿಸಿದರು.

ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿನಿಯರಿಗಾಗಿ ಕರಾಟೆ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮವನ್ನು ಹೆಚ್ಚಿಸಲು ಕಾಲೇಜಿನ ಮಹಿಳಾ ಸಿಬ್ಬಂದಿ ಹಸಿರು ಬಣ್ಣದ ಸೀರೆಯ ಉಡುಗೆಯನ್ನು ಧರಿಸಿದ್ದರು.

ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಸಂಯೋಜಕ ರಾಧಿಕಾ ರಾಣಿ, ಪ್ರಮುಖರಾದ ಎನ್.ಜಿ. ರೆನ್ಸಿ ಶಿವದಾಸ್, ಎಸ್. ಮಿಸ್ ಪೂಜಾ, ಎಸ್. ಗೌತಮ್, ವಿಳಿ ರಂಜಿತ್ ಮತ್ತು ಸಿ. ಮಿಸ್ ಖುಷಿ ಹಾಗೂ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಇದ್ದರು.ಚಿತ್ತ ಚಿಲುಮೆ ಕವನ ಸಂಕಲನ ಬಿಡುಗಡೆ

ಕನ್ನಡಪ್ರಭ ವಾರ್ತೆ ಮೈಸೂರುವಿಶ್ವ ಕನ್ನಡ ಅಂತಾರಾಷ್ಟ್ರೀಯ ಮಹಿಳಾ ಸಾಹಿತ್ಯ ಸಮ್ಮೇಳನವು ಬೆಂಗಳೂರಿನ ಇಂಡೋ ಗ್ಲೋಬಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಟಿ. ನರಸೀಪುರ ತಾಲೂಕು ಕೇತೂಪುರದ ಕನ್ನಡ ಭಾಷಾ ಶಿಕ್ಷಕಿ ಎಂ.ಸಿ. ಮಂಜುಳಾ ಅವರು ಬರೆದ ಚಿತ್ತ ಚಿಲುಮೆ ಕವನ ಸಂಕಲನವನ್ನು ಲೇಖಕ ಜಯಪ್ಪ ಹೊನ್ನಾಳಿ ಬಿಡುಗಡೆಗೊಳಿಸಿದರು.ವಿಶ್ವ ಕನ್ನಡ ಕಲಾಸಂಸ್ಥೆ ಅಧ್ಯಕ್ಷ ರವೀಶ್‌ ಅಕ್ಕರ, ಬಿ. ಶೃಂಗೇಶ್ವರ್‌, ಕಸಾಪ ಸಂಘಟನ ಕಾರ್ಯದರ್ಶಿ ಸಮ್ಮೇಳನ ಅಧ್ಯಕ್ಷರು ಹಾಗೂ ಸಾಹಿತಿ ಮಾಲತಿ ಮೇಲುಕೋಟೆ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉನ್ನತ ಹುದ್ದೆ ಕನಸು ಈಡೇರಿಸಲು ಅಧ್ಯಯನ ಅವಶ್ಯಕ : ಶ್ರೀನಿವಾಸ್
ಕೆ.ಆರ್. ಆಸ್ಪತ್ರೆಯಲ್ಲಿ 100 ಹಾಸಿಗೆವುಳ್ಳ ಐ.ಸಿ.ಯು ಘಟಕ ಸ್ಥಾಪಿಸಿ: ಕೆ. ಶಿವಕುಮಾರ್