ನಾಳೆ ಆರೋಗ್ಯ ಶಿಬಿರಕ್ಕೆ ಕೆಂಗೇರಿ ಶ್ರೀಗಳಿಂದ ಉದ್ಘಾಟನೆ: ಬಸವರಾಜೇಗೌಡ

KannadaprabhaNewsNetwork |  
Published : Apr 20, 2026, 01:45 AM IST
19ಕೆಎಂಎನ್ ಡಿ19 | Kannada Prabha

ಸಾರಾಂಶ

ವೈದ್ಯರ ತಪಾಸಣೆ ಜತೆಗೆ ಅವಶ್ಯಕ ಔಷಧಿಗಳನ್ನು ಉಚಿತ ವಿತರಣೆ ಹಾಗೂ ಅವಶ್ಯಕವಿದ್ದಲ್ಲಿ ನೇತ್ರ ಸರ್ಜರಿ ಜತೆಗೆ ಕನ್ನಡಕ ನೀಡಲಾಗುವುದು. ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಾರತೀ ವಿದ್ಯಾ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಶಯ್ ಜಿ.ಮಧು ಅವರ 33ನೇ ಹುಟ್ಟುಹಬ್ಬದ ಅಂಗವಾಗಿ ಮದ್ದೂರು ತಾಲೂನ ಚಂದೂಪುರ ಗ್ರಾಮದಲ್ಲಿ ಏ.21 ಮತ್ತು 22 ರಂದು ನಡೆಯುವ ನಡೆಯುವ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀ ಎಜುಕೇಷನ್ ಟ್ರಸ್ಟ್, ಭಾರತೀ ಹೆಲ್ತ್ ಸೈನ್ಸ್ ಕಾಲೇಜುಗಳು, ಅಸ್ಟರ್ ಜಿ. ಮಾದೇಗೌಡ ಆಸ್ಪತ್ರೆ, ಆಶಯ್ ಅಭಿಮಾನಿ ಬಳಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರದಲ್ಲಿ ನಡೆಯುವ ಶಿಬಿರದಲ್ಲಿ ಚಂದೂಪುರ ರೇಣುಕಾ ಆಶ್ರಮ ಮಠದ ಶ್ರೀಶಿವಲಿಂಗ ಶಿವಾಚಾರ್ಯ ಮಹಾ ಸ್ವಾಮೀಜಿ ಸಾನಿಧ್ಯವಹಿಸಲಿರೆ ಎಂದರು.

ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಭಾರತೀ ವಿದ್ಯಾ ಸಂಸ್ಥೆ ಮುಖ್ಯ ನಿರ್ವಾಣಾಧಿಕಾರಿ ಆಶಯ್ ಜಿ.ಮಧು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆ ಯೂನಿಟ್ ಹೆಡ್ ಗಣೇಶ್ ಪ್ರಭು, ಭಾರತೀ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಚಂದೂಪುರ ಡಿ.ಕೆ.ಗೌಡ ವಿದ್ಯಾಸಂಸ್ಥೆ ಅಧ್ಯಕ್ಷ ಶಿವಲಿಂಗೇಗೌಡ, ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಅಭಿಯಂತರ ಹಾಗಲಹಳ್ಳಿ ಬಸವರಾಜೇಗೌಡ, ಪಿಡಿಒ ಮಂಚಮ್ಮ ಭಾಗವಹಿಸಲಿದ್ದಾರೆ ಎಂದರು.

ಅನುಭವ ಹೊಂದಿದ ವೈದ್ಯರ ತಂಡಗಳು ರಕ್ತದ ಒತ್ತಡ ಪರಿಶೀಲನೆ, ಮಧುಮೇಹ ಪರೀಕ್ಷೆ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಲಹೆ, ಕ್ಯಾನ್ಸರ್ ಪತ್ತೆ ಹಚ್ಚುವಿಕೆ, ಕೀಲು ಮತ್ತು ಮೂಳೆ ತಜ್ಞ ವೈದ್ಯರಿಂದ ತಪಾಸಣೆ, ಜನರಲ್ ಸರ್ಜರಿ ತಜ್ಞರಿಂದ ತಪಾಸಣೆ, ದಂತ ಚಿಕಿತ್ಸೆ, ಮೂತ್ರ ವಿಜ್ಞಾನ, ಯೋಗ ಮತ್ತು ನ್ಯಾಚುರೊಪತಿ ಚಿಕಿತ್ಸೆ ಫೀಸಿಯೋತೆರಪಿ, ಸಾಮಾನ್ಯ ವೈದ್ಯಕೀಯ ತಜ್ಞ ವೈದ್ಯರಿಂದ ತಪಾಸಣೆ, ನವಜಾತ ಶಿಶು ಮತ್ತು ಮಕ್ಕಳ ಆರೋಗ್ಯ, ಶಸ್ತ್ರಚಿಕಿತ್ಸೆ ತಜ್ಞರಿಂದ ತಪಾಸಣೆ, ಕಣ್ಣಿನ ತಜ್ಞ ವೈದ್ಯರಿಂದ ತಪಾಸಣೆ ನಡೆಯಲಿದೆ ಎಂದರು.

ವೈದ್ಯರ ತಪಾಸಣೆ ಜತೆಗೆ ಅವಶ್ಯಕ ಔಷಧಿಗಳನ್ನು ಉಚಿತ ವಿತರಣೆ ಹಾಗೂ ಅವಶ್ಯಕವಿದ್ದಲ್ಲಿ ನೇತ್ರ ಸರ್ಜರಿ ಜತೆಗೆ ಕನ್ನಡಕ ನೀಡಲಾಗುವುದು. ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗ್ರಾಪಂ ಮಾಜಿ ಸದಸ್ಯ ಎಚ್.ಹೊಸಹಳ್ಳಿ ಮಲ್ಲೇಶ್, ಎಲ್.ಐಸಿ ಕೆಂಪೇಗೌಡ, ಚಂದೂಪುರ ಪುನೀತ್, ಪುಟ್ಟಮಾದೇಗೌಡ ,ಅಪ್ಪಾಜಿಗೌಡ, ಪ್ರಭಾಕರ್, ಅನಿಲ್ ಕುಮಾರ್, ಎಸ್.ಐ ಹೊನ್ನಲಗೆರೆ ಮರಿಸ್ವಾಮಿ ಸೇರಿದಂತೆ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜ್ಞಾನಸಾಗರ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಉತ್ತಮ ಫಲಿತಾಂಶ
ಪಾರಂಪರಿಕ ಸ್ಥಳಗಳನ್ನು ಸಂರಕ್ಷಿಸುವುವಂತೆ ವಿದ್ಯಾರ್ಥಿಗಳಿಗೆ ಸಲಹೆ