ಹೊನ್ನಾಳಿ: ಇಂದು ದೇವಸ್ಥಾನ ಉದ್ಘಾಟನೆ, ವಿಗ್ರಹ ಪುನರ್ ಪ್ರತಿಷ್ಠಾಪನೆ, ಧರ್ಮಸಭೆ

KannadaprabhaNewsNetwork |  
Published : Mar 25, 2026, 01:30 AM IST
24ಎಚ್.ಎಲ್.ಐ1 ಹೊನ್ನಾಳಿ, ಕೆಪಿಟಿಸಿಎಲ್., ಬೆಸ್ಕಾಂ, ಮತ್ತು ಶ್ರೀ ವರಸಿದ್ದಿವಿನಾಯಕ ಸೇವಾ ಸಮಿತಿವತಿಯಿಂದ ವರಸಿದ್ದಿವಿನಾಯಕ  ದೇವಸ್ಥಾನ ಉದ್ಘಾಟನೆ, ವಿನಾಯಕ  ವಿಗ್ರಹ ಪುನರ್ ಪ್ರತಿಷ್ಠಾಪನೆ  ಅಂಗವಾಗಿ ಮಂಗಳವಾರ ನಡೆದ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ಬೆಸ್ಕಾಂ ಅಧಿಕಾರಿ ಜಯಣ್ಣದಂಪತಿ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿ ಪೂಜೆ ಸಲ್ಲಿಸಿದರು.  | Kannada Prabha

ಸಾರಾಂಶ

ಹೊನ್ನಾಳಿ ಪಟ್ಟಣದ ಕೆಪಿಟಿಸಿಎಲ್‌, ಬೆಸ್ಕಾಂ ಹಾಗೂ ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಉದ್ಘಾಟನೆ ಮತ್ತು ಶ್ರೀ ವಿನಾಯಕ ಮೂರ್ತಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಮಾರ್ಚ್ 25ರಂದು ಬೆಳಗ್ಗೆ ನಡೆಯಲಿವೆ. ಅನಂತರ ಧರ್ಮಸಭೆ, ಸಾಮೂಹಿಕ ಅನ್ನ ಸಂತರ್ಪಣೆ ಸಂಪನ್ನಗೊಳ್ಳಲಿದೆ.

ಹೊನ್ನಾಳಿ: ಪಟ್ಟಣದ ಕೆಪಿಟಿಸಿಎಲ್‌, ಬೆಸ್ಕಾಂ ಹಾಗೂ ಶ್ರೀ ವರಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಉದ್ಘಾಟನೆ ಮತ್ತು ಶ್ರೀ ವಿನಾಯಕ ಮೂರ್ತಿ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಮಾರ್ಚ್ 25ರಂದು ಬೆಳಗ್ಗೆ ನಡೆಯಲಿವೆ. ಅನಂತರ ಧರ್ಮಸಭೆ, ಸಾಮೂಹಿಕ ಅನ್ನ ಸಂತರ್ಪಣೆ ಸಂಪನ್ನಗೊಳ್ಳಲಿದೆ.

ದೇವಸ್ಥಾನ ಉದ್ಘಾಟನೆ ಮತ್ತು ಶ್ರೀ ವರಸಿದ್ಧಿ ವಿನಾಯಕ ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಮಾರ್ಚ್ 24ರಿಂದಲೇ ವಿವಿಧ ಹೋಮ, ಹವನ, ವಿಶೇಷ ಧಾರ್ಮಿಕ ಕೈಂಕರ್ಯಗಳು ಆರಂಭಗೊಂಡಿವೆ. ಬ್ರಹ್ಮಶ್ರೀ, ಜಿ.ಬಿ, ವೀರೇಶ್, ಆಚಾರ್ಯ, ಶ್ರೀ ಕಾಳಿಕಾ ಪರಮೇಶ್ವರಿ ವೈದಿಕ ಪ್ರತಿಷ್ಠಾನ ದಾವಣಗೆರೆಯ ಮುಖ್ಯ ಪುರೋಹಿತರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಜರುಗಲಿವೆ.

25ರಂದು ಬೆಳಗ್ಗೆ 4.30 ರಿಂದ 5.30ರ ಬ್ರಾಹ್ಮಿ ಮೂಹೂರ್ತದಲ್ಲಿ ದೇವರ ಪ್ರಾಣ ಪ್ರತಿಷ್ಠಾನೆ, ನೇತ್ರೋನ್ಮಿಲನ, ಕದಳಿ ಚೇದನ, ಮಹಾಬಲಿ, ದೇನುದರ್ಶನ, ಬಿಂಬ ದರ್ಶನ, ಗಣಪತಿ ಮೂಲಮಂತ್ರ ಹೋಮ, ಪ್ರತಿಷ್ಠಾ ಹೋಮ, ಜಯಾದಿ ಹೋಮ, ಪ್ರಾಯಶ್ಛಿತ ಹೋಮ, ಪೂರ್ಣಾಹುತಿ, ಮಂಗಳಾರತಿ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಅರ್ಚನೆ ಮತ್ತು ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಜರುಗಲಿವೆ.

ಮಾ.26ರಿಂದ ಮೇ 15ರವರೆಗೆ ಪ್ರತಿ ದಿನ ಮಂಡಲ ಪೂಜೆ ಪ್ರಯುಕ್ತ ವಿಶೇಷ ಪೂಜೆಗಳು ನಡೆಯಲಿವೆ. ಭಕ್ತರು ತಮ್ಮ ಭಕ್ತಿಯ ಕಾಣಿಕೆ ಸಲ್ಲಿಸಿ, ರಶೀದಿ ಪಡೆಯಬೇಕು. ಮಂಗಳವಾರ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಯಪ್ಪ ಹಾಗೂ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

- - -

-24ಎಚ್.ಎಲ್.ಐ1:

ವರಸಿದ್ಧಿ ವಿನಾಯಕ ದೇವಸ್ಥಾನ ಉದ್ಘಾಟನೆ, ವಿನಾಯಕ ವಿಗ್ರಹ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಮಂಗಳವಾರ ನಡೆದ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ಬೆಸ್ಕಾಂ ಅಧಿಕಾರಿ ಜಯಣ್ಣ ದಂಪತಿ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿ ಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಡೆದ ಮನಸ್ಸನ್ನು ಬೆಸೆಯುವುದೇ ನಿಜವಾದ ಧರ್ಮ: ರಂಭಾಪುರಿ ಜಗದ್ಗುರು ಶ್ರೀಗಳು
ಪಂಚಮಸಾಲಿ ನೊಗ ಹೊತ್ತಿದ್ದೇನೆ, ಮುಂದೆಯೂ ಹೊರುತ್ತೇನೆ