ಧಾರವಾಡ:
ಈಜುಕೊಳ ಹಾಗೂ ಕ್ರೀಡಾ ಸಂಕೀರ್ಣ ಉದ್ಘಾಟಿಸಿದ ಕೇಂದ್ರ ಸಚಿವ ಮನ್ಸುಖ್ ಮಾಡಂವೀಯ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ದೇಶದ ಭವಿಷ್ಯ ಕಟ್ಟುವವರು. ಅವರು ಉತ್ತಮ ಕ್ರೀಡಾಪಟುಗಳಾಗಿ ಧಾರವಾಡ ಅಷ್ಟೇ ಅಲ್ಲ ಇಡೀ ದೇಶಕ್ಕೆ ಹೆಸರು ತರುವಂತಾಗಬೇಕು ಎಂದು ಹೇಳಿದರು.
ದೇಶಕ್ಕಾಗಿ ಆಡುವ ಕ್ರೀಡಾಪಟುಗಳಿಗಾಗಿ ಉತ್ತಮ ಸುಸಜ್ಜಿತವಾದ ಕ್ರೀಡಾ ಸಂಕೀರ್ಣ ಇಂದು ನಿರ್ಮಾಣವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದು ಹೇಳಿದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಈ ಹಿಂದೆ ಧಾರವಾಡದಲ್ಲಿ ಬರೀ ಸಣ್ಣ ಈಜುಗೊಳ ಇತ್ತು. 2018ರಲ್ಲಿ ಹೊಸ ಈಜುಗೋಳ ನಿರ್ಮಿಸಲು ಯೋಜಿಸಿದ್ದೇವು. ಆದರೆ, ಒಎನ್ಜಿಸಿ ಸೇರಿದಂತೆ ಹಲವಾರು ಕಂಪನಿಗಳಿಂದ ಸಿಎಸ್ಆರ್ ನಿಧಿ ಬಳಸಿಕೊಂಡು ಇಂದು ವಿಶ್ವ ದರ್ಜೆಯ ಕ್ರೀಡಾ ಸಂಕೀರ್ಣ ನಿರ್ಮಿಸಿದ್ದೇವೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಹಳೆ ಈಜುಗೋಳ ಕೇವಲ 30 ಮೀಟರ್ ಇತ್ತು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಿಗೆ ತರಬೇತಿ ಪಡೆಯಲು ತೊಂದರೆಯಾಗುತ್ತಿತ್ತು. ಇದೀಗ ವಿಶ್ವ ದರ್ಜೆಯ 50 ಮೀಟರ್ ಈಜುಗೋಳ ಇಲ್ಲಿ ನಿರ್ಮಾಣವಾಗಿದೆ. ಇನ್ನೊಂದೆಡೆ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಇರುವ ಒಳಾಂಗಣ ಕ್ರೀಡಾಂಗಣ ಕೇವಲ ಅಧಿಕಾರಿಗಳಿಗೆ ಸೀಮಿತವಾಗಿದೆ. ಆದರೆ, ಈ ಕ್ರೀಡಾಂಗಣ ಯುವ ಕ್ರೀಡಾ ಪಟುಗಳಿಗೆ ಮೀಸಲಾಗುವಂತಾಗಲಿ ಎಂದು ಸಲಹೆ ನೀಡಿದರು.
ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಎಂ.ಆರ್. ಪಾಟೀಲ್, ಎಸ್.ವಿ. ಸಂಕನೂರ, ಪ್ರದೀಪ್ ಶೆಟ್ಟರ್, ಮೇಯರ್ ಜ್ಯೋತಿ ಪಾಟೀಲ್, ಉಪ ಮೇಯರ್ ಸಂತೋಷ ಚೌಹ್ವಾಣ, ಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ, ಶಾಕೀರ್ ಸನದಿ, ಜಿಲ್ಲಾಧಿಕಾರಿ ಸ್ನೇಹಲ್ ಆರ್, ಸಿಇಒ ಭುವನೇಶ ಪಾಟೀಲ್, ಸ್ವರ್ಣ ಗ್ರುಪ್ನ ವಿ.ಎಸ್.ವಿ. ಪ್ರಸಾದ್ ಸೇರಿದಂತೆ ಗಣ್ಯರಿದ್ದರು.ಧಾರವಾಡದ ಕ್ರೀಡಾಪಟುಗಳು ₹ 25 ಲಕ್ಷ ವೆಚ್ಚದ ಕ್ರೀಡಾ ಸಾಮಗ್ರಿಗಳಿಗಾಗಿ ಮನವಿ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಅವರಿಗೆ ಅಗತ್ಯವಾದ ಎಲ್ಲ ಕ್ರೀಡಾ ಸಾಮಾಗ್ರಿ ನೀಡಲಾಗುವುದು.
ಪ್ರಹ್ಲಾದ ಜೋಶಿ, ಸಂಸದ