ರಸ್ತೆ ಗುಂಡಿ ಮುಚ್ಚುವ ಮೂಲಕ ಸ್ವಾತಂತ್ರ್ಯೋತ್ಸವ

KannadaprabhaNewsNetwork |  
Published : Aug 19, 2024, 12:56 AM ISTUpdated : Aug 19, 2024, 12:57 AM IST
18ಎಚ್ಎಸ್ಎನ್5 : ಚನ್ನರಾಯಪಟ್ಟಣದ ಮೈಸೂರು ರಸ್ತೆಯಲ್ಲಿ ಗುಂಡಿ ಬಿದ್ದ ರಸ್ತೆಯನ್ನು ತನ್ನ ಸ್ವಂತ ಖರ್ಚಿನಲ್ಲಿ ಗುಂಡಿ ಮುಚ್ಚುತ್ತಿರುವ ವಂದೇ ಮಾತರಂ ವೃದ್ಧಾಶ್ರಮದ ಜೈಹಿಂದ್ ನಾಗಣ್ಣ.   | Kannada Prabha

ಸಾರಾಂಶ

ಹಲವಾರು ಅನಾಥ ವಯೋವೃದ್ಧರಿಗೆ ಆಶ್ರಯವಾಗಿರುವ ನಾಗಣ್ಣ ಕುಟುಂಬ ಈಗ ವಾಹನ ಸವಾರರು ರಸ್ತೆಯಲ್ಲಿ ಓಡಾಡುವಾಗ ಗುಂಡಿಗಳಲ್ಲಿ ಬಿದ್ದು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದನ್ನು ಗಮನಿಸಿದ ನಾಗಣ್ಣ ತಮ್ಮ ಸ್ವಂತ ಖರ್ಚಿನಲ್ಲೇ ಒಬ್ಬರೇ ಶ್ರಮಪಟ್ಟು ಮೈಸೂರು ರಸ್ತೆ, ಟಿವಿಎಸ್ ಶೋರೂಂ ಮುಂಭಾಗದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಜನರಿಗೆ ಅರಿವು ಮೂಡಿಸಿ ಸ್ವಾತಂತ್ರ್ಯ ದಿನಾಚರಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಿ ಫೋಟೋಗೆ ಪೋಸ್ ಕೊಡುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾದರಿಯಾಗಿ ಇಲ್ಲೊಬ್ಬರು ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ವಿನೂತನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಮಲಗಿರುವ ಅಧಿಕಾರಿಗಳು ಎಚ್ಚರಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಯಾರಿಗೂ ತಿಳಿಯದ ಹಾಗೇ ತಮ್ಮ ಪಾಡಿಗೆ ತಾವು ಕೆಲಸ ಮಾಡುವ ಗುಣ ಪಟ್ಟಣದ ವಂದೇ ಮಾತರಂ ವೃದ್ಧಾಶ್ರಮದ ಜೈಹಿಂದ್ ನಾಗಣ್ಣನವರದ್ದು. ೭೮ನೇ ಸ್ವಾತಂತ್ರ್ಯ ದಿನಾಚರಣೆ ದಿನದಂದು ಪಟ್ಟಣದಲ್ಲಿ ಹಲವು ವರ್ಷಗಳಿಂದ ಬಿದ್ದಿರುವ ಗುಂಡಿಗಳನ್ನು ಮುಚ್ಚದ ಅಧಿಕಾರಿಗಳು ನಮಗೂ ರಸ್ತೆಯ ಗುಂಡಿಗಳಿಗೂ ಸಂಬಂಧವಿಲ್ಲದೆಂಬಂತೆ ವರ್ತಿಸುತ್ತಿರುವುದು ದುರಾದೃಷ್ಟದ ಸಂಗತಿ. ಆದರೆ ಹಲವಾರು ಅನಾಥ ವಯೋವೃದ್ಧರಿಗೆ ಆಶ್ರಯವಾಗಿರುವ ನಾಗಣ್ಣ ಕುಟುಂಬ ಈಗ ವಾಹನ ಸವಾರರು ರಸ್ತೆಯಲ್ಲಿ ಓಡಾಡುವಾಗ ಗುಂಡಿಗಳಲ್ಲಿ ಬಿದ್ದು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದನ್ನು ಗಮನಿಸಿದ ನಾಗಣ್ಣ ತಮ್ಮ ಸ್ವಂತ ಖರ್ಚಿನಲ್ಲೇ ಒಬ್ಬರೇ ಶ್ರಮಪಟ್ಟು ಮೈಸೂರು ರಸ್ತೆ, ಟಿವಿಎಸ್ ಶೋರೂಂ ಮುಂಭಾಗದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಜನರಿಗೆ ಅರಿವು ಮೂಡಿಸಿ ತಮ್ಮ ಸೇವೆಸಲ್ಲಿಸಲು ನಿರತರಾಗಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ.

ಲೋಕೋಪಯೋಗಿ ಇಲಾಖೆ, ಪುರಸಭೆ ಹಾಗೂ ರಾಜಕಾರಣಿಗಳು ತಮ್ಮಗೆ ಗೊತ್ತೇ ಇಲ್ಲ ಎಂಬಂತೆ ಅನಾವಶ್ಯಕವಾದ ಜಾಗಗಳಿಗೆ ರಸ್ತೆ ಮಾಡಿ ಬಿಲ್‌ಗಳನ್ನು ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಜ್ಞಾವಂತರ ವಾದವಾಗಿದ್ದು, ಜಿಲ್ಲೆಯಲ್ಲೇ ಅತೀ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ತಾಲೂಕು ಚನ್ನರಾಯಪಟ್ಟಣವಾಗಿದ್ದು ನಗರದಲ್ಲೇ ಇಷ್ಟೊಂದು ಅವ್ಯವಸ್ಥೆಯ ರಸ್ತೆಗಳು ಅಧಿಕಾರಿಗಳಿಗೆ ಕಾಣುತ್ತಿಲ್ಲವೇ.

ಒಬ್ಬ ಬಡ ಸಾಮಾನ್ಯ ವ್ಯಕ್ತಿ ರಸ್ತೆ ಮುಚ್ಚಲು ಮುಂದಾಗುವ ಹಾಗೇ ರಾಜಕೀಯದವರು ಏಕೆ ಮುಂದೆ ಬರುತ್ತಿಲ್ಲ, ಇತ್ತೀಚೆಗೆ ಭೂಮಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೂಡ ಗುಂಡಿ ಮುಚ್ಚುವ ಪ್ರತಿಭಟನೆಯನ್ನು ಹಮ್ಮಿಕೊಂಡು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಸಹ ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.

ಒಟ್ಟಾರೆ ಪಟ್ಟಣದಲ್ಲಿ ಸಾವಿರಾರು ಗುಂಡಿಗಳು ಇದ್ದು ವಾಹನ ಸವಾರರು ತಮ್ಮ ಕುಟುಂಬದ ಜೊತೆ ಸವಾರಿ ಮಾಡುವ ಸಂದರ್ಭದಲ್ಲಿ ಬಿದ್ದು ಎದ್ದು ಹೋಗುವ ಘಟನೆಗಳು ಸರ್ವೆ ಸಾಮಾನ್ಯವಾಗಿದ್ದು ಇನ್ನಾದರೂ ರಸ್ತೆ ಗುಂಡಿ ಮುಚ್ಚುವ ಕೆಲಸವಾಗಬೇಕೆಂಬುದು ಸಂಘ ಸಂಸ್ಥೆಗಳ ಆಗ್ರಹವಾಗಿದೆ.

*ಹೇಳಿಕೆ1

ಪಟ್ಟಣದಲ್ಲಿ ಸವಾರರು ಗುಂಡಿಯಲ್ಲಿ ಬಿದ್ದು ಆಸ್ಪತ್ರೆ ಸೇರುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ನಮ್ಮ ಕೈಲಾದ ಕೆಲಸವನ್ನು ನಾವೇ ಮಾಡಿ ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ.

-ಜೈಹಿಂದ್ ನಾಗಣ್ಣ., ವಂದೇ ಮಾತರಂ ವೃದ್ಧಾಶ್ರಮದವರು

*ಹೇಳಿಕೆ2 ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನರು ಹೈರಾಣಾಗಿದ್ದು ರಸ್ತೆಯಲ್ಲಿ ಗುಂಡಿ ಮುಂದೆ ಬಿದ್ದು ಆಸ್ಪತ್ರೆ ಸೇರುತ್ತಿದ್ದಾರೆ. ಇನ್ನು ಮಳೆಗಾಲದಲ್ಲಿ ರಸ್ತೆಯ ಮೇಲೆ ಓಡಾಡಲು ಭಯಪಡುವಂತಾಗಿದೆ.

- ರುದ್ರೇಶ್‌ ಮಟ್ಟನವಿಲೆ, ಯೂತ್‌ ಕಾಂಗ್ರೆಸ್ ಮುಖಂಡ

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ