- ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಧ್ವಜವಂದನೆ ಕಾರ್ಯಕ್ರಮ - - - ದಾವಣಗೆರೆ: ಜಾತ್ಯತೀತ ಭಾರತ ದೇಶದಲ್ಲಿ ಜಾತಿ-ಧರ್ಮಗಳ ಮಧ್ಯ ವೈರುಧ್ಯ ಬೆಳೆಸುವ ಆರ್ಎಸ್ಎಸ್ನಂತಹ ಸಂಘಟನೆಗಳಿಗಿಂತ ಪ್ರತಿಯೊಂದು ಜಾತಿ- ಧರ್ಮದವರನ್ನು ಸಮನಾಗಿ ಕಾಣುವ ಕಾಂಗ್ರೆಸ್ ಪಕ್ಷದ ಸೇವಾದಳದಂತಹ ಸಂಘಟನೆಗಳ ಅವಶ್ಯಕತೆ ಇದೆ ಎಂದು ದೂಡಾ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಡಿ.ಶಿವಕುಮಾರ್ ಮಾತನಾಡಿ, ಇಂದು ಎಐಸಿಸಿ ಕಾಂಗ್ರೆಸ್ ಸೇವಾದಳದ ರಾಷ್ಟ್ರಾಧ್ಯಕ್ಷ ಲಾಲ್ಜಿ ದೇಸಾಯಿ ಆದೇಶದ ಮೇರೆಗೆ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ರಾಜ್ಯ ಅಧ್ಯಕ್ಷ ಎಂ.ರಾಮಚಂದ್ರಪ್ಪ ಸೂಚನೆ ಮೇರೆಗೆ ಧ್ವಜವಂದನ ಕಾರ್ಯಕ್ರಮ ಏರ್ಪಡಿಸಿದ್ದೇವೆ ಎಂದರು.
ರಾಜ್ಯ ಉಪಾಧ್ಯಕ್ಷ ಉಮಾ ತೋಟಪ್ಪ, ರಾಜ್ಯ ಕಾರ್ಯದರ್ಶಿ ಪ್ರವೀಣ್, ದಾವಣಗೆರೆ ಉತ್ತರ ವಲಯ ಅಧ್ಯಕ್ಷ ಆವರಗೆರೆ ಚಂದ್ರಪ್ಪ, ಹರಿಹರ ಬ್ಲಾಕ್ ಅಧ್ಯಕ್ಷ ಪ್ರಕಾಶ್, ಬೇತೂರು ನಾಗೇಂದ್ರಪ್ಪ, ಬಿ.ಜಿ. ಅಶೋಕ್, ಹನುಮಮ್ಮ, ನಾಗರತ್ನ, ಕೃಷ್ಣಮ್ಮ, ಮಮ್ತಾಜ್, ರತ್ನಮ್ಮ, ರೇಣುಕಮ್ಮ, ಅಕ್ಕಮ್ಮ, ನಾಗರತ್ನಮ್ಮ ಉಪಸ್ಥಿತರಿದ್ದರು.- - - -23ಕೆಡಿವಿಜಿ37:
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಿನೇಶ ಕೆ. ಶೆಟ್ಟಿ ಧ್ವಜವಂದನೆ ಕಾರ್ಯಕ್ರಮ ನಡೆಯಿತು.