ಭಾರತೀಯ ಸಂವಿಧಾನ ಜಾಗೃತಿ ಅಗತ್ಯ: ಹೊಸಮನಿ

KannadaprabhaNewsNetwork |  
Published : Feb 13, 2024, 12:45 AM IST
ಸುರಪುರ ನಗರದ ಗೋಲ್ಡನ್‌ ಕೇವ್ ಬುದ್ಧ ವಿಹಾರದಲ್ಲಿ ಸಂವಿಧಾನ ಅರಿವಿನಯಾನ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ಲಿಖಿತ ಸಂವಿಧಾನವಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನದ ಪುಟಗಳನ್ನು ತಿರುಚುತ್ತಿರುವುದು ತುಳಿತಕ್ಕೊಳಗಾದವರ ಮೇಲೆ ತೋರುತ್ತಿರುವ ದಬ್ಬಾಳಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಸುರಪುರ

ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರಕಾರಗಳಿಂದ ಸಂವಿಧಾನ ತಿರುಚುವ ಕೆಲಸ ಆಗಿಂದಾಗ್ಗೆ ನಡೆಯುತ್ತಿರುವುದು ಜನಸಾಮಾನ್ಯರ ಮೇಲೆ ನೆಡೆಯುತ್ತಿರುವ ದೌರ್ಜನ್ಯವಾಗಿದೆ. ಇದನ್ನು ತಡೆದು ನಮ್ಮ ಹಕ್ಕುಗಳನ್ನು ಚಲಾಯಿಸಲು ಸಂವಿಧಾನ ಜಾಗೃತಿ ಮತ್ತು ತಿಳಿವಳಿಕೆ ಅಗತ್ಯ ಎಂದು ಗೋಲ್ಡನ್‌ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ ಹೇಳಿದರು.

ನಗರದ ನಗರದ ಗೋಲ್ಡನ್‌ ಕೇವ್ ಬುದ್ಧ ವಿಹಾರದಲ್ಲಿ ಮಹಿಳಾ ಬೌದ್ಧ ಪರಿಷತ್ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಅರಿವಿನ ಯಾನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಲಿಖಿತ ಸಂವಿಧಾನವಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನದ ಪುಟಗಳನ್ನು ತಿರುಚುತ್ತಿರುವುದು ತುಳಿತಕ್ಕೊಳಗಾದವರ ಮೇಲೆ ತೋರುತ್ತಿರುವ ದಬ್ಬಾಳಿಕೆಯಾಗಿದೆ. ಯಾವುದೇ ರಾಷ್ಟ್ರದಲ್ಲಿ ಆಗದಷ್ಟು ತಿದ್ದುಪಡಿಗಳನ್ನು ನಮ್ಮ ದೇಶದಲ್ಲಿ ಮಾಡಲಾಗುತ್ತಿದೆ. ಇದನ್ನು ತಡೆಯಲು ಸಂವಿಧಾನ ಜಾಗೃತಿ ಅಗತ್ಯವಾಗಿದೆ ಎಂದರು.

ಮುಖಂಡ ರಾಹುಲ್ ಹುಲಿಮನಿ ಮಾತನಾಡಿ, ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಮಾ.10ರಂದು ಕೆಂಭಾವಿಯಲ್ಲಿ ಮಾತೆ ಸಾವಿತ್ರೀ ಭಾಯಿ ಫುಲೆಯವರ ಪುಣ್ಯಾನುರಾದ ದಿನ ನಿಮಿತ್ತ ಸಂವಿಧಾನ ಅರಿವಿನ ಯಾನ ಮಹಿಳಾ ಜಾಗೃತಿ ನಡೆಯಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮರೆಪ್ಪ ಬುಕ್ಕಲ್ ಮಾತನಾಡಿದರು. ಮಾಳಪ್ಪ ಕಿರದಳ್ಳಿ ಸ್ವಾಗತಿಸಿ ನಿರೂಪಿಸಿದರು. ಸುರೇಶ ಕಾನೆಕರ್, ರಣಧೀರ ಹೊಸಮನಿ, ಕೇಶವ್ ಕಟ್ಟಿಮನಿ, ಹಣಮಂತ ಹಸನಕಲ್, ಮಲ್ಲಿಕಾರ್ಜುನ್ ಕರಡಕಲ್, ಬಸವರಾಜ್ ಮಲ್ಲೆ, ಭೀಮರಾಯ ಸಿಂದಗೇರಿ, ಆದಪ್ಪ ಹೊಸಮನಿ, ವೆಂಕಟೇಶ್ವರ ಸುರಪುರ, ಹಣಮಂತ ಬಾಂಬೆ, ಸುರೇಶ ಬೊಮ್ಮನ್, ಚಂದ್ರಶೇಖರ್ ಯಾದಗಿರ, ಶಿವಶಂಕರ ಹೊಸಮನಿ, ಗುರುಲಿಂಗಯಾದಗಿರ, ಶರಣಪ್ಪ ತಳವಾರಗೇರಾ, ರಾಜು ಶಖಾಪೂರ, ಡಾ.ಸಂದ್ಯಾ, ನೀಲಮ್ಮ ಮಲ್ಲೆ, ಶರ್ಮಿಳಾ ಕರಡಕಲ್, ಅಶ್ವಿನಿ ರೆಡ್ಡಿ, ಶಿಲ್ಪಾ ಹುಲಿಮನಿ, ಭೀಮಭಾಯಿ ಕಲ್ಲದೇವನಹಳ್ಳಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!