ಭಾರತೀಯ ಸಂವಿಧಾನ ಗ್ರಂಥವು ಮಹತ್ವದ್ದಾಗಿದೆ: ಮಂಜುನಾಥ್‌

KannadaprabhaNewsNetwork |  
Published : Feb 08, 2024, 01:30 AM IST
 ಕೊರಟಗೆರೆ ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಸ್ವಾಗತಿಸಿದ ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು, ಜನಪ್ರತಿನಿಧಿಗಳು. | Kannada Prabha

ಸಾರಾಂಶ

ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ವ್ಯಕ್ತಿಯ, ಮಹಿಳೆಯ ಸ್ವತಂತ್ರ ಹಕ್ಕು, ಜೀವನದ ಮಹತ್ವ ಹಾಗೂ ಅವರವರ ಬದುಕು ಕಟ್ಟಿಗೊಳ್ಳಲು ನಿರ್ಣಯದ ಮಹತ್ವದ ಗ್ರಂಥವಾಗಿದೆ ಎಂದು ತಹಸೀಲ್ದಾರ್‌ ಮಂಜುನಾಥ್ ಕೆ. ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ವ್ಯಕ್ತಿಯ, ಮಹಿಳೆಯ ಸ್ವತಂತ್ರ ಹಕ್ಕು, ಜೀವನದ ಮಹತ್ವ ಹಾಗೂ ಅವರವರ ಬದುಕು ಕಟ್ಟಿಗೊಳ್ಳಲು ನಿರ್ಣಯದ ಮಹತ್ವದ ಗ್ರಂಥವಾಗಿದೆ ಎಂದು ತಹಸೀಲ್ದಾರ್‌ ಮಂಜುನಾಥ್ ಕೆ. ತಿಳಿಸಿದರು.

ಪಟ್ಟಣದ ಪಂಚಾಯಿತಿ ಮುಂಭಾಗದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಜಾಗೃತಿ ಜಾಥಾ ರಥವು ತಾಲೂಕಿಗೆ ಬಂದಿದ್ದು, ನಾಲ್ಕು ದಿನಗಳ ಕಾಲ ತಾಲೂಕಿನಾದ್ಯಂತ ಎಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಸಂವಿಧಾನದ ಜಾಗೃತಿಯನ್ನು ಮೂಡಿಸುತ್ತದೆ. ಸಂವಿಧಾನದಲ್ಲಿ ದೇಶದ ಆಡಳಿತ, ಕಾನೂನು ಸುವ್ಯವಸ್ಥೆ ವ್ಯಕ್ತಿ ಸ್ವಾತಂತ್ರ, ಆಚರಣೆ ಸೇರಿದಂತೆ ದೇಶದಲ್ಲಿ ಜನರ ಬದುಕಿನ ಬಗ್ಗೆ ರೂಪಿಸಿಲಾಗಿದೆ. ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ಸಾಕಷ್ಟು ಶ್ರಮದ ನಂತರ 2ವರ್ಷ 11 ತಿಂಗಳು 18 ದಿನಗಳ ಕಾಲ 11 ಸಭೆಗಳನ್ನು 2475 ಪುಟಗಳ ತಿದ್ದು ಪಡಿಗಳನ್ನ ಮಾಡಿ ದೇಶದ ಹಿತ ಕಾಪಾಡಲು 1950 ಜ.26 ರಂದು ಸಂವಿಧಾನವು ಜಾರಿಗೆ ಬಂದಿತ್ತು. ಇಂತಹ ಮಹತ್ವದ ಸಂವಿಧಾನವನ್ನು ಭಾರತದ ಎಲ್ಲಾ ನಾಗರಿಕರು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಪ್ಮೂಲ ವ್ಯಕ್ತಿ ಶಿವಕುಮಾರ್‌ ಮಾತನಾಡಿ, ಸಂವಿಧಾನದಲ್ಲಿ ಮಹಿಳೆಯರ ಪ್ರಗತಿಯೂ ಕೂಡ ಆದರ್ಶಗಳ ಮಾನದಂಡದಲ್ಲಿ ಸೇರಿಕೊಂಡಿದ್ದು, ಸಂವಿಧಾನದ ಮಹತ್ವವು ರಾಷ್ಟ್ರೀಯತೆಯ ಏಕತೆಯನ್ನು ಒಳಗೊಂಡಿದೆ, ದೇಶಕ್ಕೆ 1947 ರಲ್ಲಿ ಸ್ವತಂತ್ರ ಬಂದರು ಬ್ರಿಟಿಷ್‌ ಕಾನೂನುಗಳು ಜಾರಿಯಲ್ಲಿದ್ದವು. ಇದರ ಪರ್ಯಾಯವಾಗಿ 1946 ರ ಡಿ.9 ರಂದು ಬಾಬು ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ತಾತ್ಕಾಲಿಕ ಕರಡು ಸಮಿತಿಯನ್ನು ರಚಿಸಲಾಯಿತು, ನಂತರ ಸಂವಿಧಾನ ಶಿಲ್ಪಿ ಡಾ.ಬಿ. ಆರ್‌. ಅಂಬೇಡ್ಕರ್‌ ನೇತೃತ್ವದಲ್ಲಿ ಪೂರ್ಣ ಪ್ರಮಾಣಾದ ಸಂವಿಧಾನವು ರಚನೆಗೊಂಡಿತು ಎಂದು ತಿಳಿಸಿದರು.

ಸಂವಿಧಾನ ಜಾಗೃತಿ ಜಾಥಾದಲ್ಲಿ ಶಾಲಾ ಮಕ್ಕಳು, ವಿವಿಧ ಸಾಂಸ್ಕೃತಿ ಪ್ರದರ್ಶನದೊಂದಿಗೆ ಮೇರವಣಿಗೆಯಲ್ಲಿ ಭಾಗವಹಿಸಿದ್ದರು, ವಿವಿಧ ಸಂಘಟನೆಗಳ ಕಲಾತಂಡಗಳು ವಾದ್ಯದೊಂದಿಗೆ ಬಾಗವಹಿಸಿದ್ದವು, ಈ ಸಂದರ್ಭಧಲ್ಲಿ ವಿವಿಧ ಶಾಲೆಗಳಲ್ಲಿ ಸಂವಿಧಾನ ಜಾಗೃತಿ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ತಾ.ಪಂ. ಆಡಳಿತಾಧಿಕಾರಿ ದೀಪಿಕಾ, ಇಒ ಅಪೂರ್ವಾ, ಸಿಪಿಐ ಅನಿಲ್, ಪಪಂ ಸಿಇಒ ಭಾಗ್ಯಮ್ಮ, ಬಿಇಒ ನಟರಾಜು, ಸಿಡಿಪಿಒ ಅಂಬಿಕಾ, ಎಇಇ ಗಳಾದ ರವಿಕುಮಾರ್‌, ಕೀರ್ತಿನಾಯ್ಕ್, ಅರಣ್ಯ ಇಲಾಖೆಯ ಅಧಿಕಾರಿಗಳಾದ ರವಿ, ಶಿಲ್ಪಾ, ಪಶು ಇಲಾಖೆಯ ಡಾ. ನಾಗಭೂಷಣ್, ಪ.ಪಂ.ಸದಸ್ಯರಾದ ಕೆ.ಆರ್‌. ಓಬಳರಾಜು, ಎ.ಡಿ. ಬಲರಾಮಯ್ಯ, ಕೆ.ಎನ್. ಲಕ್ಷ್ಮೀನಾರಾಯಣ್, ಪುಟ್ಟನರಸಯ್ಯ, ನಟರಾಜು, ಮುಖಂಡರಾದ ವೆಂಕಟೇಶ್, ದೊಡ್ಡಯ್ಯ, ನಾಗರಾಜು, ವೀರಕ್ಯಾತಯ್ಯ, ಮಂಜುನಾಥ್, ನಾಗೇಶ್, ಶಿವರಾಮಯ್ಯ, ರಾಮಾಂಜನಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್