ಇಂಡೋ-ಪಾಕ್ ಯುದ್ಧ: ಜಲಾಶಯಗಳಿಗೆ ಭದ್ರತೆ ಒದಗಿಸಲು ಪೊಲೀಸ್‌ ಇಲಾಖೆಗೆ ಪತ್ರ

KannadaprabhaNewsNetwork |  
Published : May 10, 2025, 01:00 AM IST
ಮುಂಡಗೋಡ: ಇಂಡೋ ಪಾಕ್ ಕದನ ಹಿನ್ನಲೆಯಲ್ಲಿ ಜಲಾಶಯಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ತಾಲೂಕಿನ ಧರ್ಮಾ, ಬಾಚಣಕಿ, ಸನವಳ್ಳಿ, ಚಿಗಳ್ಳಿ, ನ್ಯಾಸರ್ಗಿ, ಅತ್ತಿವೇರಿ ಸೇರಿದಂತೆ ೮ ಜಲಾಶಯಗಳಿಗೆ ಪೊಲೀಸ ರಕ್ಷಣೆ ನೀಡುವಂತೆ ಇಲ್ಲಿಯ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಮುಂಡಗೋಡ ಪೊಲೀಸ ಠಾಣೆಗೆ ಪತ್ರ ಬರೆದಿದ್ದಾರೆ. | Kannada Prabha

ಸಾರಾಂಶ

ಪ್ರಮುಖ ಜಲಾಶಯಗಳಿಗೆ ಪೊಲೀಸ ಇಲಾಖೆಯಿಂದ ಭದ್ರತೆ ಒದಗಿಸುವಂತೆ ಪತ್ರ ಬರೆಯಲಾಗಿದೆ.

ಮುಂಡಗೋಡ: ಇಂಡೋ ಪಾಕ್ ಕದನ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ತಾಲೂಕಿನ ಧರ್ಮಾ, ಬಾಚಣಕಿ, ಸನವಳ್ಳಿ, ಚಿಗಳ್ಳಿ, ನ್ಯಾಸರ್ಗಿ, ಅತ್ತಿವೇರಿ ಸೇರಿದಂತೆ ೮ ಜಲಾಶಯಗಳಿಗೆ ಪೊಲೀಸ್‌ ರಕ್ಷಣೆ ನೀಡುವಂತೆ ಇಲ್ಲಿಯ ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಮುಂಡಗೋಡ ಪೊಲೀಸ್‌ ಠಾಣೆಗೆ ಪತ್ರ ಬರೆದಿದ್ದಾರೆ.ಜಿಲ್ಲೆಯಲ್ಲಿ ೯ ಜಲಾಶಯ ಮತ್ತು ೨೮ ಕೆರೆಗಳನ್ನು ಹೊಂದಿದ ತಾಲೂಕು ಇದಾಗಿದ್ದು, ಜನರಿಗೆ ಕುಡಿಯುವ ನೀರು ಸರಬರಾಜು ಮಾಡುವ ಹಾಗೂ ರೈತರ ಜಮೀನಿಗೆ ನೀರು ಒದಗಿಸುವುದು ಮಾತ್ರವಲ್ಲದೇ ಪಕ್ಷಿಧಾಮವಿರುವ ಪ್ರಸಿದ್ಧಿ ಹೊಂದಿರುವ ಅತ್ತಿವೇರಿ ಜಲಾಶಯ ಕೂಡ ಇದ್ದು, ಇಲ್ಲಿ ನಿತ್ಯ ಸಾಕಷ್ಟು ಜನ ಪ್ರವಾಸಿಗರು ಬರುತ್ತಾರೆ.

ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟು, ಜಲಾಶಯಗಳ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಪ್ರಮುಖ ಜಲಾಶಯಗಳಿಗೆ ಪೊಲೀಸ ಇಲಾಖೆಯಿಂದ ಭದ್ರತೆ ಒದಗಿಸುವಂತೆ ಪತ್ರ ಬರೆಯಲಾಗಿದೆ.

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಭದ್ರತಾ ಹಿತದೃಷ್ಟಿಯಿಂದ ತಾಲೂಕಿನ ಪ್ರಮುಖ ಜಲಾಶಯಗಳಿಗೆ ಭದ್ರತೆ ಒದಗಿಸುವಂತೆ ಮುಂಡಗೋಡ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಚಿಕ್ಕ ನೀರಾವರಿ ಇಲಾಖೆ ಎಇಇ ಆರ್.ಎಂ. ಧಪೇದಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ