ಮಣಿಪಾಲ್ ಟೌನ್ ರೋಟರಿ ಕ್ಲಬ್ನ ದಶಮಾನೋತ್ಸವ ಸಂಧರ್ಭದಲ್ಲಿ, ಸಂಸ್ಥೆಯ ಮಾಜಿ ಅಧ್ಯಕ್ಷ ಬೆಲ್ಪತ್ರೆ ಗಣೇಶ ನಾಯಕ್ ಮತ್ತು ಶೈಲಾ ಜಿ. ನಾಯಕ್ ಅವರ ವೈವಾಹಿಕ ಜೀವನದ 50 ವರ್ಷಾಚರಣೆಯ ಸಂದರ್ಭದಲ್ಲಿ ಇಂದ್ರಾಳಿ ರುದ್ರಭೂಮಿಗೆ 15 ಲಕ್ಷ ರು. ವೆಚ್ಚದಲ್ಲಿ ಅಂತ್ಯ ಸಂಸ್ಕಾರ ಧಾಮ ಕಟ್ಟಿಸಿಕೊಟ್ಟಿದ್ದು, ಲೋಕಾರ್ಪಣೆ ಇತ್ತೀಚೆಗೆ ನಡೆಯಿತು.
ಕನ್ನಡಪ್ರಭ ವಾರ್ತೆ, ಉಡುಪಿ
ಮಣಿಪಾಲ್ ಟೌನ್ ರೋಟರಿ ಕ್ಲಬ್ನ ದಶಮಾನೋತ್ಸವ ಸಂಧರ್ಭದಲ್ಲಿ, ಸಂಸ್ಥೆಯ ಮಾಜಿ ಅಧ್ಯಕ್ಷ ಬೆಲ್ಪತ್ರೆ ಗಣೇಶ ನಾಯಕ್ ಮತ್ತು ಶೈಲಾ ಜಿ. ನಾಯಕ್ ಅವರ ವೈವಾಹಿಕ ಜೀವನದ 50 ವರ್ಷಾಚರಣೆಯ ಸಂದರ್ಭದಲ್ಲಿ ಇಂದ್ರಾಳಿ ರುದ್ರಭೂಮಿಗೆ 15 ಲಕ್ಷ ರು. ವೆಚ್ಚದಲ್ಲಿ ಅಂತ್ಯ ಸಂಸ್ಕಾರ ಧಾಮ ಕಟ್ಟಿಸಿ ಕೊಟ್ಟಿರುವುದು ಅತ್ಯಂತ ಪ್ರಶಂಸನೀಯ ಸಮಾಜಸೇವೆ ಎಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಅವರು ನುಡಿದರು. ಸರ್ಕಾರವೇ ಎಲ್ಲವನ್ನು ನೀಡುತ್ತದೆ ಎಂದು ಕಾಯುವುದಕ್ಕಿಂತ, ಖಾಸಗಿ ಸಂಸ್ಥೆಗಳು, ಸಾರ್ವಜನಿಕರು ಸರ್ಕಾರದೊಂದಿಗೆ ಸೇರಿ ಈ ರೀತಿಯ ಅತೀ ತುರ್ತು ಕಾರ್ಯಗಳನ್ನು ನಡೆಸುವ ಅಗತ್ಯವಿದೆ ಎಂದು ಅವರು ಧಾಮವನ್ನು ಲೋಕಾರ್ಪಣೆ ಮಾಡಿ ಕರೆಕೊಟ್ಟರು.ರೋ. ಜಿಲ್ಲಾ ಗವರ್ನರ್ ದೇವಾನಂದರು ಶಿಲಾ ಫಲಕವನ್ನು ಅನಾವರಣಗೊಳಿಸಿ, ರೋಟರಿಯ ಚರಿತ್ರೆಯಲ್ಲಿ ಈ ಯೋಜನೆಯು ವಿಶಿಷ್ಟ, ಅಪೂರ್ವ ಮತ್ತು ಅರ್ಥಪೂರ್ಣವಾದದ್ದು. ಪಾರ್ಥೀವ ಶರೀರದ ಅಂತಿಮದರ್ಶನ, ಅಗ್ನಿ ಸಂಸ್ಕಾರ ಪೂರ್ವ ವಿಧಿನಿಯಮಗಳ ನಡೆಸುವ ವ್ಯವಸ್ಥೆ, ವಾಸ್ತವ್ಯ ನಿಬಿಡವಾಗುತ್ತಿರುವ ಮಣಿಪಾಲ ಉಡುಪಿಯ ಕುಟುಂಬಗಳಿಗೆ ಇದು ಮಹತ್ತರ ಸಹಾಯವನ್ನು ಮಾಡುತ್ತದೆ ಎಂದು ನುಡಿದರು. ನಗರ ಸಭಾ ಅಧ್ಯಕ್ಷರಾಗಿರುವ ಪ್ರಭಾಕರ ಪೂಜಾರಿ ಮತ್ತು ಮಾಜಿ ಅಧ್ಯಕ್ಷೆ ಸುಮಿತ್ರಾ ನಾಯಕ್ ಅವರು ನಗರದ ಜನತೆಗೆ ಇದೊಂದು ಅತ್ಯಮೂಲ್ಯ ಕೊಡುಗೆ ಎಂದು ನುಡಿದರು. ದಾನಿಗಳಾದ ಬೆಲ್ಪತ್ರೆ ಗಣೇಶ್ ನಾಯಕ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಶೈಲಾ ಜಿ ನಾಯಕ್, ಜಗನ್ನಾಥ ಕೋಟೆ, ನಾಗರಾಜ ಶೆಟ್ಟಿ, ನವೀನ್ ಕುಮಾರ್ ಕೂಡಮರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಜಿ. ಕಲ್ಮಾಡಿ, ನಗರಸಭಾ ಸದಸ್ಯರಾದ ಗಿರೀಶ್ ಕಾಂಚನ್, ಅಶೋಕ್ ನಾಯಕ್, ರಾಜು, ಭಾರತಿ, ರುದ್ರಭೂಮಿ ವ್ಯವಸ್ಥಾಪಕ ಪ್ರಶಾಂತ್ ಉಪಸ್ಥಿತರಿದ್ದರು. ಕಟ್ಟಡ ನಿರ್ಮಾಣ ಕಾರ್ಯವನ್ನು ಮಾಡಿದ ನಿತ್ಯಾನಂದ ನಾಯಕ್, ಗೋಪಾಲ ಗಾಣಿಗ, ಮತ್ತು ಅಶೊಕ್ ನಾಯಕ್ ಅವರನ್ನು ಗೌರವಿಸಲಾಯಿತು.ಅಧ್ಯಕ್ಷ ಡಾ. ಮನೋಜ್ ಕುಮಾರ್ ನಾಗಸಂಪಿಗೆಯವರು ಸ್ವಾಗತಿಸಿದರು. ಸಚ್ಚಿದಾನಂದ ನಾಯಕ್ ಅವರು ಕಾರ್ಯಕ್ರಮ ನಿರ್ವಹಿಸಿದರು ಮತ್ತು ನಿತ್ಯಾನಂದ ನಾಯಕ್ ಅವರು ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.