ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಕೊಲ್ಲಾಪುರದ ಜಿಲ್ಲಾ ವೈಸ್ ಚೇರಮನ್ (317) ಉತ್ಕರ್ಷ ಪಾಟೀಲ್ ಪದಗ್ರಹಣ ಸಮಾರಂಭದ ಸ್ಥಾಪನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಮಾತನಾಡಿ, ಮಹಿಳೆಯರು ಇನ್ನರ್ವ್ಹೀಲ್ ಮೂಲಕ ಸಮಾಜಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಡಿಯುತ್ತಿದ್ದಾರೆ ಎಂದರು. ಗೌರವ ಅತಿಥಿಗಳಾಗಿ ಇನ್ನರ್ವ್ಹೀಲ್ ಕ್ಲಬ್ ನಿಪ್ಪಾಣಿಯ ಮಾಜಿ ಅಧ್ಯಕ್ಷೆ ವರ್ಷಾ ನಂದರಗಿ ಉಪಸ್ಥಿತರಿದ್ದರು.
ನಿಕಟಪೂರ್ವ ಇನ್ನರ್ವ್ಹೀಲ್ ಅಧ್ಯಕ್ಷೆ ಸೀಮಾ ಟಿಕ್ಕೆ ಮತ್ತು ಕಾರ್ಯಾಧ್ಯಕ್ಷೆ ಪ್ರತಿಮಾ ಮಹಾಜನ ಕಾರ್ಯಾಧ್ಯಕ್ಷೆ ಸುವರ್ಣ ಬಬಲೇಶ್ವರ, ಖಜಾಂಚಿ ಸುಜಾತಾ ಪಾಟೀಲ್, ಸುವರ್ಣ ಹಂಪನ್ನವರ, ಉಪಾಧ್ಯಕ್ಷೆ ಗೀತಾ ಪಡಲಾಳೆ, ಕಾರ್ಯನಿರ್ವಹಣಾಧಿಕಾರಿ ರಾಜಶ್ರೀ ಕುಲಕರ್ಣಿ ಅವರನ್ನು ಪದಾಧಿಕಾರಿಗಳಾಗಿ ನೇಮಿಸಲಾಯಿತು. ರೋಹಿಣಿ ಕುಲಕರ್ಣಿ, ಡಾ.ಪ್ರಿಯಾಂಕಾ ಚೌಗುಲೆ, ಡಾ.ಸೀಮಾ ಟಿಕ್ಕೆ, ಡಾ.ಸಂಗೀತಾ ಜೋಶಿ, ಡಾ.ರಾಜಶ್ರೀ ಪಾಟೀಲ, ಡಾ.ಸ್ನೇಹಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.