ಬಿ.ರಾಮಪ್ರಸಾದ್ ಗಾಂಧಿ
ಪಟ್ಟಣದ ಅಯ್ಯನಕೆರೆಗೆ ಹೊಂದಿಕೊಂಡು ಸುಮಾರು 7 ಎಕರೆ ಪ್ರದೇಶದಲ್ಲಿರುವ ಈ ಕ್ರೀಡಾಂಗಣ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2002 ರಲ್ಲಿ ಆರಂಭವಾಗಿತ್ತು.
ದುರ್ವಾಸನೆಯಿಂದ ಮುಕ್ತಿಗೊಳಿಸಿ:ಕ್ರೀಡಾಂಗಣಕ್ಕೆ ಹೊಂದಿಕೊಂಡ ಅಯ್ಯನಕೆರೆ ತುಂಬೆಲ್ಲ ಕಸ, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ವಸ್ತುಗಳು ತುಂಬಿಕೊಂಡು ದುರ್ವಾಸನೆ ಬೀರುತ್ತಿರುವ ಪರಿಣಾಮ ನಿತ್ಯ ವಾಯುವಿಹಾರಕ್ಕಾಗಿ ಕ್ರೀಡಾಂಗಣಕ್ಕೆ ಬರುತ್ತಿದ್ದ ನೂರಾರು ಜನರು ಬೇಸತ್ತಿದ್ದು, ಬರುತ್ತಿಲ್ಲ. ಅಷ್ಟೇ ಅಲ್ಲ ಕ್ರೀಡಾಳುಗಳಿಗೂ ಇಲ್ಲಿ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಅಳಲು ಕೇಳಿ ಬರುತ್ತಿದೆ.
ಕ್ರೀಡಾಂಗಣದಲ್ಲಿ ವಲಯ, ತಾಲೂಕು, ವಿವಿ, ಜಿಲ್ಲಾ ಮಟ್ಟದಂತಹ ಕ್ರೀಡೆಗಳು ನಡೆಯುತ್ತವೆ. ಆದರೆ ಇಲ್ಲಿಗೆ ಆಗಮಿಸುವ ಕ್ರೀಡಾಪಟುಗಳಿಗಾಗಲಿ, ವಾಯುವಿಹಾರಿಗಳಿಗೆ ದಾಹ ತೀರಿಸಲು ಕುಡಿಯಲು ನೀರಿಲ್ಲ. ಇದರಿಂದ ಅನೇಕರು ತಾವು ಬರುವಾಗ ನೀರಿನ ಬಾಟಲ್ಗಳನ್ನು ಕೈಯಲ್ಲಿ ಹಿಡಿದು ಬರಬೇಕಿದೆ. ದೊಡ್ಡ ಮಟ್ಟದ ಕ್ರೀಡೆಗಳು ನಡೆದಲ್ಲಿ ಮಾತ್ರ ಪುರಸಭೆ ಹಾಗೂ ಖಾಸಗಿ ನೀರಿನ ಸೌಲಭ್ಯ ಮಾಡಿಕೊಳ್ಳುತ್ತಾರೆ.
ತಾಲೂಕಿನ ಕ್ರೀಡಾಂಗಣದ ಒಳಾಂಗಣದಲ್ಲಿ ಚದುರಂಗ, ಶಟಲ್, ಬಾಲ್ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ವಾಲಿಬಾಲ್, ಕಬಡ್ಡಿ, ವೇಟ್ಲಿಫ್ಟಿಂಗ್, ಕೇರಂ ಕ್ರೀಡೆಗಳು ನಡೆಯುತ್ತವೆ. ಆದರೆ ಸೌಲಭ್ಯಗಳಿಲ್ಲ.
ಕ್ರೀಡಾ ಸಾಮಗ್ರಿ ಕೊರತೆ:
ಸಿಬ್ಬಂದಿ ಕೊರತೆ:
ಕಾಂಪೌಂಡ್ ಶಿಥಿಲ:
ಶಾಸಕರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಒಳಾಂಗಣ ನಿರ್ಮಾಣ, ಕ್ರೀಡಾಪಟುಗಳ ತರಬೇತಿಗೆ ಸಮರ್ಪಕ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕು ಎನ್ನುವುದು ಕ್ರೀಡಾಪಟುಗಳ ಆಗ್ರಹ.
ತಾಲೂಕು ಕ್ರೀಡಾಂಗಣಕ್ಕೆ ಮೂಲಸೌಕರ್ಯ, ಕ್ರೀಡಾ ಸಾಮಗ್ರಿ, ತರಬೇತುದಾರರ ಅಗತ್ಯವಿದೆ. ಅಂಕಣಗಳ ದುರಸ್ತಿಯಾಗಬೇಕು. ಇದರಿಂದ ಉತ್ತಮ ಕ್ರೀಡಾಂಗಣವಾಗಲಿದೆ ಎನ್ನುತ್ತಾರೆ ಗುರುತುಗಾರ ಮಂಜುನಾಥ.