ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಂಜಾರ ಸಮಾಜದ ಪಾತ್ರವೂ ದೊಡ್ಡದಿದೆ. ಆದರೆ, ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಬಂಜಾರ ಸಮುದಾಯಕ್ಕೆ ಯಾವುದೇ ನ್ಯಾಯ ಸಿಗಲಿಲ್ಲ ಎಂದು ಬಂಜಾರ ಜಾಗೃತ ದಳದ ಸಂಸ್ಥಾಪಕ ಅಧ್ಯಕ್ಷ ತಿಪ್ಪಾ ಸರನಾಯಕ ಹೇಳಿದರು.
ಸದಾಶಿವ ಆಯೋಗದ ವರದಿಯ ಬಗ್ಗೆ ನಮಗೆ ತಪ್ಪು ಕಲ್ಪನೆ ಇತ್ತು. ಈಗ ಈ ಕಲ್ಪನೆ ಇಲ್ಲ. ತಾಂಡಾಗಳಲ್ಲಿ ವಲಸೆ ಹೋಗುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು. ತಾಂಡಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಅಧ್ಯಕ್ಷರು ನೇಮಕವಾದ ನಂತರ ಈ ಸಮಸ್ಯೆ ಬಗೆಹರಿಸಬೇಕು ಎಂದರು.
ಬಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಸುರೇಶ ಪಿ. ಮಾತನಾಡಿ, ನಾವೇನು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಕಳೆದ ಬಾರಿ ನಾವು ಬಿಜೆಪಿ ವಿರೋಧಿಸಿದ್ದೇವು. ಈಗ ನಾವು ಬಿಜೆಪಿ ಬೆಂಬಲಿಸುತ್ತೇವೆ ಎಂದು ಹೇಳಿದರು.ನಮ್ಮ ಸಮಾಜದ ನ್ಯಾಯಕ್ಕಾಗಿ ಈ ಬಾರಿ ಈ ನಿರ್ಧಾರ ತೆಗೆದುಕೊಂಡಿದ್ದು, ಸಮಾಜದ ಮತ ಬಾಂಧವರು ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು.
ನಿಂಗರಾಜ್ ಕಟ್ಟಿಮನಿ, ಸುರೇಶ ಬಳೂಟಗಿ, ಗುರು ಗೋಸಾಯಿ ಬಾಬಾ, ಮುತ್ತು ರಾಠೋಡ, ಮಹೇಶ ನಾಯಕ ಇದ್ದರು.