ಸುರಂಗ ಪೈಪ್‌ಲೈನ್ ಕಾಮಗಾರಿ ಪರಿಶೀಲನೆ

KannadaprabhaNewsNetwork |  
Published : Jun 01, 2025, 03:13 AM IST
ಫೋಟೋ 29ಪಿವಿಡಿ4ಪಟ್ಟಣದ ವಾರ್ಡ್‌ಗಳಿಗೆ ತುಂಗಭದ್ರಾ ಶುದ್ಧ ಕುಡಿಯುವ ನೀರು ಪೂರೈಕೆ ಹಿನ್ನಲೆ ಇಲ್ಲಿನ ಕನಕ ವೃತ್ತದಲ್ಲಿ ಕೈಗೊಂಡಿದ್ದ 40ಮೀಟರ್‌ ಉದ್ದದ 15ಅಡಿ ಆಳದ ಸುರಂಗ ಮಾರ್ಗದ ಪೈಪ್‌ ಲೈನ್‌ ಕಾಮಗಾರಿಯನ್ನು ತಹಸೀಲ್ದಾರ್‌ ವರದರಾಜು ಹಾಗೂ ಮುಖ್ಯಾಧಿಕಾರಿ ಜಾಫರ್‌ ಷರೀಫ್  ಪರಿಶೀಲನೆ ನಡೆಸಿದರು.ಫೋಟೋ 29ಪಿವಿಡಿ5ಪಾವಗಡ,ಪಟ್ಟಣದ ವೆಂಕಟಾಪುರ ರಸ್ತೆ ಮಾರ್ಗದ ಕನಕ ವೃತ್ತದ ಬಳಿ ಬೃಹತ್‌ ಟ್ಯಾಂಕ್‌ ಸಂಪರ್ಕದ ಪೈಪ್‌ ಲೈನ್ ಕಾಮಗಾರಿಯನ್ನು  ಪುರಸಭೆಯ ಮುಖ್ಯಾಧಿಕಾರಿ ಜಾಫರ್‌ ಷರೀಫ್‌ ಪರಿಶೀಲನೆ ನಡೆಸಿದರು.      | Kannada Prabha

ಸಾರಾಂಶ

ತುಮಕೂರು ರಸ್ತೆಯ ಕನಕವೃತ್ತದಲ್ಲಿ ಪುರಸಭೆಯಿಂದ ಕೈಗೊಂಡಿದ್ದ ಸುರಂಗ ಮಾರ್ಗದ ಪೈಪ್‌ಲೈನ್‌ ಕಾಮಗಾರಿಯನ್ನು ತಹಸೀಲ್ದಾರ್‌ ಡಿ.ಎನ್‌.ವರದರಾಜು ಹಾಗೂ ಪುರಸಭೆಯ ಮುಖ್ಯಾಧಿಕಾರಿ ಜಾಫರ್‌ ಷರೀಪ್‌ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ನಗರದ ವಾರ್ಡ್‌ಗಳ ಟ್ಯಾಂಕ್‌ಗಳಿಗೆ ತುಂಗಭದ್ರಾ ಯೋಜನೆಯ ಕುಡಿಯುವ ನೀರು ಸರಬರಾಜ್‌ ಮಾಡುವ ಹಿನ್ನಲೆಯಲ್ಲಿ ಪಟ್ಟಣದ ತುಮಕೂರು ರಸ್ತೆಯ ಕನಕವೃತ್ತದಲ್ಲಿ ಪುರಸಭೆಯಿಂದ ಕೈಗೊಂಡಿದ್ದ ಸುರಂಗ ಮಾರ್ಗದ ಪೈಪ್‌ಲೈನ್‌ ಕಾಮಗಾರಿಯನ್ನು ತಹಸೀಲ್ದಾರ್‌ ಡಿ.ಎನ್‌.ವರದರಾಜು ಹಾಗೂ ಪುರಸಭೆಯ ಮುಖ್ಯಾಧಿಕಾರಿ ಜಾಫರ್‌ ಷರೀಪ್‌ ಪರಿಶೀಲನೆ ನಡೆಸಿದರು.

ಈ ಕುರಿತು ಮುಖ್ಯಾಧಿಕಾರಿ ಷರೀಪ್‌ ಅವರು ಮಾತನಾಡಿ, ಶಾಸಕರ ನೇತೃತ್ವದಲ್ಲಿ ಈಗಾಗಲೇ ಪಟ್ಟಣದ 15ಲಕ್ಷ ಲೀಟರ್‌ ಸಂಗ್ರಹ ಸಾಮಾರ್ಥ್ಯ ಬೃಹತ್‌ ಟ್ಯಾಂಕ್‌ಗಳಿಗೆ ತುಂಗಭದ್ರಾ ಕುಡಿಯುವ ನೀರು ಸರಬರಾಜ್‌ ಆಗಿದೆ. ಈ ನೀರನ್ನು ಮನೆಮನೆಗೆ ಪೂರೈಕೆಗೊಳಿಸಲು ಈಗಾಗಲೇ ಪಟ್ಟಣದಲ್ಲಿ ಅಮೃತ್‌ ಯೋಜನೆ ಅಡಿ ಮನೆಮನೆ ನೀರು ಸರಬರಾಜ್‌ ಮಾಡುವ ಕೊಳಾಯಿ ಸಂಪರ್ಕ ಅಳವಡಿಕೆಯ ಕಾಮಗಾರಿ ಭರದಿಂದ ಸಾಗುತ್ತಿದೆ. ತುಮಕೂರು ಮಾರ್ಗದ ರಸ್ತೆಗೆ ಡ್ಯಾಮೇಜ್‌ ಆಗದ ರೀತಿಯಲ್ಲಿ 40ಮೀಟರ್‌ ನಷ್ಟು 15ಅಡಿ ಆಳದಲ್ಲಿ ಸುರಂಗ ಬಗೆದು ಪೈಪ್‌ ಲೈನ್‌ ಕಾಮಗಾರಿ ಕೈಗೊಳ್ಳಲಾಗಿದೆ. 8ಮಂದಿ ತಂಡದೊಂದಿಗೆ ಅಧುನಿಕ ಮಿಶನರಿ ಯಂತ್ರಗಳಿಂದ ಸುರಂಗ ಮಾರ್ಗದ ಪೈಪ್‌ ಲೈನ್‌ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಜೂನ್‌ ಅಂತ್ಯದ ವೇಳೆಗೆ ಪಟ್ಟಣದ ಜನತೆಗೆ ತುಂಗಭದ್ರಾ ಕುಡಿಯುವ ನೀರು ಕಲ್ಪಿಸಲು ಸಿದ್ದತೆ ಕೈಗೊಳ್ಳಲಾಗಿದೆ. 40ಮೀಟರ್‌ ಉದ್ದದ ಸುರಂಗ ಮಾರ್ಗದ ಕಾಮಗಾರಿ ಸಾಹಸದ ಕೆಲಸವಾಗಿದ್ದು 15ಅಡಿ ಆಳದಲ್ಲಿ ರಸ್ತೆ ಒಳಗಡೆ ಅಕ್ಸಿಜನ್‌ ಹಾಕಿಕೊಂಡು ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ