ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಹೊರವಲಯದ ಕೃಷಿ ಮಹಾವಿದ್ಯಾಲಯದಲ್ಲಿ ಜರುಗಿದ ಯುವ ನಾಯಕತ್ವ ತರಬೇತಿ ಉದ್ಘಾಟಿಸಿ ಮಾತನಾಡಿದರು. ನಾವಿಂದು ರಾಜಕೀಯ ನಾಯಕರು, ಸಾಮಾಜಿಕ ನಾಯಕರು ಮತ್ತು ಆಧ್ಯಾತ್ಮಿಕ ನಾಯಕರನ್ನು ಸಮಾಜದಲ್ಲಿ ನೋಡುತ್ತಿದ್ದೇವೆ. ಹೀಗಾಗಿ, ನಾವು ಯಾವ ರೀತಿಯ ನಾಯಕರಾಗಬೇಕೆಂದು ಈಗಿಂದಲೇ ಯೋಚಿಸಿ ಮುನ್ನೇಡೆಯಬೇಕು ಎಂದರು.
ಉತ್ತಮ ನಾಯಕರಾಗಲು ತಾಳ್ಮೆ, ಬುದ್ದಿಶಕ್ತಿ, ಯೋಚನಾಶಕ್ತಿ, ಮಾತನಾಡುವ ಕಲೆ, ವಿವೇಚನೆ ಶಕ್ತಿ, ಸಮಸ್ಯೆಯನ್ನು ಬಗೆಹರಿಸುವ ಕಲೆ ಗೊತ್ತಿರಬೇಕು. ಪ್ರತಿದಿನ ಈ ಕುರಿತು ನಿವೆಲ್ಲ ಅಭ್ಯಸಿಸಿ, ಮನನ ಮಾಡಿ, ಮುಂದು ಒಬ್ಬ ಉತ್ತಮ ನಾಯಕರಾಗಿ ಹೊರಹೊಮ್ಮುವಂತೆ ಸಲಹೆ ನೀಡಿದರು.ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಾಳಿನ ನಾಯಕರು, ಮುಂದಿನ ಭವಿಷ್ಯದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ. ಅದಕ್ಕಾಗಿ ನಾಯಕತ್ವ ಗುಣಗಳನ್ನು ಹೊಂದಿದಲ್ಲಿ, ಕೃಷಿ ಉದ್ಯಮಿಯಾಗಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಲು ಅನುಕೂಲ ಎಂದರು.
ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಬಿ.ಜಗ್ಗಿನವರ, ಡಾ.ಸಿದ್ರಾಮ ಪಾಟೀಲ, ನಿಂಗಣ್ಣ ಮಸೂತಿ, ಚಂದ್ರಶೇಖರ ಸಿಂದೂರ, ಶೋಭಾ, ವೈಷ್ಣವಿ ಪಾಟೀಲ, ಅಭಿಷೇಕ ಗರ್ಜೆ ಸೇರಿದಂತೆ ಮುಂತಾದವರು ಇದ್ದರು. ಚೈತ್ರಾ ದಾಸರ ಪ್ರಾರ್ಥಿಸಿದರು. ಅಭಿಷೇಕ ದನವಾಡೆ ನಿರೂಪಿಸಿದರು. ಮಂಜುನಾಥ ತೊಂಡಿಕಟ್ಟಿ ವಂದಿಸಿದರು.