ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹರ್ಷಿ ವಾಲ್ಮೀಕಿ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಬೆಂಗಳೂರಿನ ಟಿ.ಆರ್.ತುಳಸಿರಾಮ್, 1999ರಲ್ಲಿ ಆಗಿನ ಶಾಸಕರು, ಮುಖಂಡರು ಗ್ರಾಪಂನಲ್ಲಿ ಠರಾವು ಮಾಡಿ, ನಿರ್ಮಿಸಿದ್ದ ವೀರ ಮದಕರಿ ನಾಯಕ ಮಹಾದ್ವಾರ, ಶಿಲಾ ಫಲಕ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತದ ನಾಮಫಲಕವನ್ನು ಭಾನುವಳ್ಳಿ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ತೆರವುಗೊಳಿಸುವ ಜೊತೆಗೆ 30ಕ್ಕೂ ಹೆಚ್ಚು ವಾಲ್ಮೀಕಿ ಸಮಾಜದ ಮಹಿಳೆಯರು, ಪುರುಷರನ್ನು ಬಂಧಿಸಿದ್ದು ಅಕ್ಷಮ್ಯ ಎಂದರು.
ಜಿಪಂ, ಸರ್ಕಾರದಿಂದ ಮಹಾದ್ವಾರ, ವೃತ್ತಕ್ಕೆ ಅನುದಾನ ಬಿಡುಗಡೆಯಾಗಿದೆ. ಸರ್ಕಾರಿ ದಾಖಲೆಗಳಲ್ಲೂ ಮದಕರಿ ನಾಯಕ ಮಹಾದ್ವಾರ, ಮಹರ್ಷಿ ವೃತ್ತವೆಂಬ ಉಲ್ಲೇಖ ಇದೆ. ಜಿಲ್ಲಾಧಿಕಾರಿ, ಸತ್ಯ ಶೋಧನಾ ಸಮಿತಿಯ ಉಪ ವಿಭಾಗಾಧಿಕಾರಿ, ಹರಿಹರ ತಹಸೀಲ್ದಾರ್ಗೆ ಸರ್ಕಾರಿ ದಾಖಲೆ ಪರಿಶೀಲಿಸುವ ವ್ಯವದಾನ ಇಲ್ಲವೇ? ಗ್ರಾಮಸ್ಥರಿಗೆ ಮಾ.11ರವರೆಗೆ ದಾಖಲೆ ನೀಡಲು ಕಾಲಾವಕಾಶ ನೀಡಿ, ಅದೇ ದಿನ ಬೆಳಿಗ್ಗೆಯೇ ನಿಷೇಧಾಜ್ಞೆ ಮೂಲಕ ಮಹಾದ್ವಾರ, ಫಲಕಗಳ ತೆರವುಗೊಳಿಸಿದ್ದು ಏಕೆ? ಶೀಘ್ರವೇ ಬೆಂಗಳೂರಿನಲ್ಲಿ ಎಸ್ಟಿ ಸಮುದಾಯ ಸಿಎಂ ಮನೆಗೆ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಸಿದರು.ಶ್ರೀಗಳ ಸಭೆ ನಡೆಸಿಲ್ಲವೇಕೆ?:
ಸಮಾಜದ ಮುಖಂಡರಾದ ಮಲ್ಲಾಪುರ ದೇವರಾಜ, ಧನ್ಯಕುಮಾರ್, ಬೇವಿನಹಳ್ಳಿ ಮಹೇಶ, ಎ.ಸಿ.ನಾಗರಾಜ, ಕೆ.ಆರ್.ರಂಗಪ್ಪ, ಚನ್ನಬಸಪ್ಪ, ರಂಗನಾಥ, ಎಂ.ನಿಜಲಿಂಗಪ್ಪ ಜಗಳೂರು ಇತರರಿದ್ದರು.
ಭಾನುವಳ್ಳಿ ಘಟನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಗಮನಕ್ಕೆ ತರುತ್ತೇವೆ. ಆಗಿರುವ ಸಮಸ್ಯೆ ತಕ್ಷಣ ಪರಿಹರಿಸಬೇಕು. ಇಲ್ಲದಿದ್ದರೆ ಲೋಕಸಭೆ ಚುನಾವಣೆಯಲ್ಲಿ ನಾಯಕ ಸಮುದಾಯದ ಶಕ್ತಿ ಏನೆಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಆ ಚುನಾವಣೆಯಲ್ಲಿ ನಾವು ತೋರಿಸುತ್ತೇವೆ. ಈ ಪ್ರಕರಣ ನಾವು ಇಲ್ಲಿಗೆ ಕೈಬಿಡುವುದಿಲ್ಲ. ಡಿಸಿ ಕಚೇರಿ, ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವ ಜೊತೆಗೆ ನ್ಯಾಯಾಲಯದಲ್ಲೂ ಡಿಸಿ, ಎಸಿ, ತಹಸೀಲ್ಗಾರ್, ಗ್ರಾಪಂ ಪಿಡಿಒ, ಕಾರ್ಯದರ್ಶಿ ಕ್ರಮದ ಬಗ್ಗೆ ಪ್ರಶ್ನಿಸಿ, ತಕ್ಕ ಪಾಠ ಕಲಿಸುತ್ತೇವೆ.