ಕನ್ನಡಪ್ರಭ ವಾರ್ತೆ ಬೆಳಗಾವಿ
ದೇಶ ಮತ್ತು ವಿದೇಶಗಳ ವಿಮಾ ವ್ಯವಸ್ಥೆಯಲ್ಲಿ ಬಹಳ ವ್ಯತ್ಯಾಸಗಳಿವೆ. ವಿದೇಶಗಳಲ್ಲಿ ಬಹುತೇಕ ಪ್ರತಿಯೊಬ್ಬರೂ ವಿಮೆ ಹೊಂದಿರುತ್ತಾರೆ. ಆದರೆ ನಮ್ಮ ದೇಶದಲ್ಲಿ ಜೀವ ವಿಮೆಯ ಮಹತ್ವದ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡುವ ಅಗತ್ಯವಿದೆ. ಕುಟುಂಬದ ವಾರಸುದಾರರಿಗೆ ಭದ್ರತೆ ದೊರಕಲು ಮತ್ತು ಸ್ವತಃ ವ್ಯಕ್ತಿಗೂ ಆರ್ಥಿಕ ಭದ್ರತೆ ದೊರಕಲು ವಿಮೆಯ ಅಗತ್ಯವನ್ನು ಜನರು ಅರಿತುಕೊಳ್ಳಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ಚಂದ್ರಶೇಖರ್.ಆರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಧರೇಪ್ಪ ಆಲಗೂರ ಡಾ. ಸಂಜಯ್ ಹೊಸಮಠ, ತಮ್ಮಣ್ಣ ಕೆಂಚರಡ್ಡಿ, ಉಮೇಶ ಬಾಳಿ, ಬಸಗೌಡ ಪಾಟೀಲ್, ಶಾಹೀನ್ ಅಬ್ಬಾಸ್ ,ಜೀತೇಂದ್ರ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಹರದೀಪ ಸಾಲ್ವಾನ್ ಅವರು ಪತ್ತಿನ ಸಹಕಾರ ಸಂಘಗಳ ಭದ್ರ ಭವಿಷ್ಯಕ್ಕಾಗಿ ವಿಮಾ ಯೋಜನೆಗಳ ಲಾಭಗಳು ಮತ್ತು ಅವುಗಳ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಂತೋಷಕುಮಾರ್ ಸಿ.ಎಂ, ಮಾರೇಗೌಡ, ಡಾ.ಬಿ.ಡಿ.ಭೂಕಾಂತ, ಡಾ.ನಾಗೇಂದ್ರ ಡಿ.ಎಲ್, ರವಿ ಕಲಬುರ್ಗಿ ಮೊದಲಾದವರು ಉಪಸ್ಥಿತರಿದ್ದರು.