ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಮಿಲ್ಡ್ರೇಡ್ ಗೋನ್ಸಾಲ್ವೇಸ್ ವಹಿಸಿ, ಮಾತನಾಡಿ ಮಾದಕದ್ರವ್ಯ ವ್ಯಸನ ಮತ್ತು ಕಳ್ಳ ಸಾಗಾಣಿಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಸಬ್ ಇನ್ಸ್ ಪೆಕ್ಟರ್ ಗೋಪಾಲ್ ಮಾದಕ ದ್ರವ್ಯ ಬಳಕೆಯಿಂದಾಗುವ ಪರಿಣಾಮ ಮತ್ತು ಸರಬರಾಜಿನ ಬಗ್ಗೆ ಇರುವ ಕಾನೂನಿನ ಬಗ್ಗೆ ತಿಳಿಸಿಕೊಟ್ಟರು.ವೇದಿಕೆಯಲ್ಲಿ ಎ.ಎಸ್.ಐ ಕಾಳಿಯಪ್ಪ, ಸಿಬ್ಬಂದಿಗಳಾದ ವೀಣಾ ಮತ್ತು ಲೋಕೇಶ್, ಕಾಲೇಜಿನ ಉಪನ್ಯಾಸಕರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಇದೇ ಸಂದರ್ಭ ಪೊಲೀಸ್ ಮುಖ್ಯ ಪೇದೆ ವೀಣಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.