ಕನ್ನಡಪ್ರಭವಾರ್ತೆ ಮೂಲ್ಕಿ
ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಸಹಯೋಗದಲ್ಲಿ ಸ್ಪರ್ಧೆ ಹಾಗೂ ಬೀಚ್ ಫೆಸ್ಟಿವಲ್ ನಡೆಯಲಿದೆ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಆಯೋಜಕರಾದ ಎಪಿಪಿ ವರ್ಲ್ಡ್ ಸಿಇಒ ಟ್ರಿಸ್ಟನ್ ಬೋಕ್ಸ್ಫೋರ್ಡ್ ಅವರು ಮಾಹಿತಿ ನೀಡಿದರು.
ಭಾರತೀಯ ಪ್ರಥಮ ರ್ಯಾಂಕ್ ಕ್ರೀಡಾಪಟು ಶೇಖರ್ ಪಚೈ ಮಾಹಿತಿ ನೀಡಿ, ಅಂತಾರಾಷ್ಟ್ರೀಯ ಸ್ಪರ್ಧೆ ನಮ್ಮ ದೇಶದಲ್ಲಿ ನಡೆಯಲಿರುವುದು ಸಂತಸ ತಂದಿದೆ. ಇಲ್ಲಿನ ಸ್ಪರ್ಧಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಿಗಳೊಡನೆ ಸೆಣೆಸಲು ಅವಕಾಶ ದ ಜೊತೆಗೆ ಹೆಚ್ಚು ತಂತ್ರಗಾರಿಕೆ ಕಲಿಯಲು ಸಹಕಾರಿಯಾಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಕಠಿಣ ತರಬೇತಿ ಆರಂಭಿಸಿದ್ದೇನೆ. ವಿಶ್ವ ಪ್ರಶಸ್ತಿ ವಿಜೇತ ಜಪಾನಿನ 17 ವರ್ಷ ಶೂರಿ ಆರ್ಕಿ ಸ್ಪರ್ಧೆಗೆ ಆಗಮಿಸಲಿದ್ದು ಭಾರತೀಯ ಸಮುದ್ರ ಮತ್ತು ಇಲ್ಲಿನ ಸ್ಪರ್ಧಾಳುಗಳ ಬಗ್ಗೆ ತಿಳಿಯುವ ಆಸಕ್ತಿ ಇದೆ ಎಂದಿದ್ದಾರೆ. ಸಸಿಹಿತ್ಲು ಮುಂಡಾ ಬೀಚ್ ಸ್ಪರ್ಧೆ ಹಾಗೂ ಬೀಚ್ ಉತ್ಸವಕ್ಕಾಗಿ ತಯಾರಿ ನಡೆಯುತ್ತಿದೆ.