ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ: ಈಜುತ್ತಲೇ ಪ್ರಧಾನಿಗೆ ಪತ್ರ ಬರೆದ ಈಜುಗಾರ!

KannadaprabhaNewsNetwork |  
Published : Jun 22, 2025, 01:18 AM IST
ಜಲ ಯೋಗದಲ್ಲಿ ಈಜುತ್ತಲೇ ಪ್ರಧಾನಿಗೆ ಪತ್ರ ಬರೆದ ಎಸ್‌.ಎಂ.ಶಿವಪ್ರಕಾಶ್‌ | Kannada Prabha

ಸಾರಾಂಶ

ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಎಸ್.ಎಂ. ಶಿವಪ್ರಕಾಶ್ ಅವರು ಈಜುತ್ತಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಪತ್ರ ಬರೆದು ಎಲ್ಲರ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಮಂಗಳೂರು

11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಂಗಳೂರಿನಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಣೆಯೊಂದಿಗೆ ಎಲ್ಲರ ಗಮನ ಸೆಳೆಯಿತು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶನಿವಾರ ಮಂಗಳೂರಿನಲ್ಲಿ ‘ಜಲಯೋಗ’ ಕಾರ್ಯಕ್ರಮ ಏರ್ಪಟ್ಟಿತು. ಮಂಗಳೂರಿನ ಮಹಾನಗರ ಪಾಲಿಕೆ ಈಜುಕೊಳದಲ್ಲಿ ನಡೆದ ಜಲಯೋಗ ಕಾರ್ಯಕ್ರಮದಲ್ಲಿ ಈಜುಗಾರರೊಬ್ಬರು ಈಜುತ್ತಲೇ ಪ್ರಧಾನಿಗೆ ಪತ್ರ ಬರೆಯುವ ಸಾಹಸ ಮಾಡಿ ಎಲ್ಲರ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ.

ಮಂಗಳೂರು ಮೀನುಗಾರಿಕಾ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಎಸ್.ಎಂ. ಶಿವಪ್ರಕಾಶ್ ಅವರು ಈಜುತ್ತಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಪತ್ರ ಬರೆದು ಎಲ್ಲರ ಗಮನ ಸೆಳೆದರು.

ಯೋಗ ದಿನಾಚರಣೆಯ ಮಹತ್ವವನ್ನು ಎತ್ತಿಹಿಡಿಯುವ ಸಲುವಾಗಿ ಈ ಪತ್ರ ಬರೆದಿರುವುದಾಗಿ ಶಿವಪ್ರಕಾಶ್‌ ತಿಳಿಸಿದ್ದಾರೆ. ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ, ‘ಡಿಯರ್ ಮೋದಿಜಿ, ಹ್ಯಾಪಿ ಇಂಟರ್​​ನ್ಯಾಷನಲ್ ಯೋಗ ಡೇ. ಐ ಯಾಮ್ ರೈಟಿಂಗ್ ದಿಸ್ ಪೋಸ್ಟ್ ಕಾರ್ಡ್ ವೈಲ್ ಸ್ವಿಮ್ಮಿಂಗ್ ಇನ್‌ದ ಪೂಲ್. ಫಿಟ್ ಇಂಡಿಯಾ - ಶಿವಪ್ರಕಾಶ್, ಮಂಗಳೂರು’ ಎಂದು ಈಜುತ್ತಲೇ ಪತ್ರ ಬರೆದಿರುವುದು ಗಮನಾರ್ಹ.

ಸುಮಾರು 40 ಮಂದಿ ಹವ್ಯಾಸಿ ಈಜುಗಾರರು ಭಾಗವಹಿಸಿ ನೀರಿನಲ್ಲಿ ಯೋಗಾಸನ ಪ್ರದರ್ಶನ ನೀಡಿದರು.ಏನಿದು ಜಲಯೋಗ?: ಜಲಯೋಗವು ಯೋಗಾಸನ, ಉಸಿರಾಟದ ತಂತ್ರಗಳು ಮತ್ತು ಧ್ಯಾನವನ್ನು ನೀರಿನೊಂದಿಗೆ ಸಂಯೋಜಿಸುವ ಒಂದು ವಿಶೇಷ ಅಭ್ಯಾಸವಾಗಿದೆ. ಈಜುಕೊಳದ 16 ಅಡಿ ಆಳದ ನೀರಿನಲ್ಲಿ ಈಜುಗಾರರು ಪದ್ಮಾಸನ, ಶವಾಸನ ಮುಂತಾದ ಯೋಗಾಸನಗಳ ಕಸರತ್ತು ಪ್ರದರ್ಶಿಸಿದರು. ನೀರಿನಲ್ಲಿ ತೇಲುವುದರಿಂದ ದೇಹದ ಸ್ನಾಯುಗಳ ಮೇಲಿನ ಒತ್ತಡ ಕಡಿಮೆಯಾಗಿ, ಈ ಆಸನಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಯಿತು. ಜೊತೆಗೆ, ಸ್ನಾಯುಗಳ ಬಲವರ್ಧನೆಯೂ ಆಗುತ್ತದೆ ಎಂಬುದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ತಮ್ಮ ಅನುಭವ ಹಂಚಿಕೊಂಡರು.

------------------‘ನಮ್ಮ ದೇಶದ ಪ್ರಧಾನಮಂತ್ರಿ ಮೋದಿ ಅವರು ಯೋಗದ ಬಗ್ಗೆ ಇಡೀ ವಿಶ್ವಕ್ಕೆ ಅರಿವು‌ ಮೂಡಿಸಿದ್ದಾರೆ. ಮನಸು, ಆತ್ಮ, ದೇಹದ ಸಂಯೋಗವೇ ಯೋಗ. ನಾನು ಇಲ್ಲಿ ಪ್ರತಿದಿನ ಈಜಲು ಬರುತ್ತೇನೆ. ಇಂದು ಯೋಗ ದಿನದ ಪ್ರಯುಕ್ತ ಈಜುತ್ತಲೇ ಪ್ರಧಾನಮಂತ್ರಿಗೆ ಪತ್ರ ಬರೆಯುವ ಪ್ರಯತ್ನ ಮಾಡಿದ್ದೇನೆ.’

-ಎಸ್‌.ಎಂ. ಶಿವಪ್ರಕಾಶ್‌, ನಿವೃತ್ತ ಡೀನ್‌, ಮೀನುಗಾರಿಕಾ ವಿಶ್ವವಿದ್ಯಾಲಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ