ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ನಡೆಯುವ ಕೊಪ್ಪಳ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಮಗೇರಾ ಗ್ರಾಮದ ಶೇಖರಗೌಡ ಮಾಲಿಪಾಟೀಲ ಅವರನ್ನು ಸ್ವಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳು, ಹಿರೇಮನ್ನಾಪುರ ಗ್ರಾಮಸ್ಥರು ಸನ್ಮಾನಿಸಿ, ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದರು.
ಸಾಹಿತ್ಯ ಸಮ್ಮೇಳನವು ಕೇವಲ ಸಾಹಿತ್ಯದ ಕಾರ್ಯಕ್ರಮವಾಗಿರದೆ, ಜಿಲ್ಲೆಯ ಸಂಸ್ಕೃತಿ, ಪರಂಪರೆ, ಜನಪದ ಕಲೆ ಹಾಗೂ ಕನ್ನಡ ಭಾಷೆಯ ಮಹತ್ವವನ್ನು ಜನರಿಗೆ ತಲುಪಿಸುವ ಮಹತ್ವದ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಾಹಿತ್ಯಾಸಕ್ತರು, ಕಲಾವಿದರು ಹಾಗೂ ಸಾರ್ವಜನಿಕರು ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿದ ಸಮ್ಮೇಳನದ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮಾತನಾಡಿ, ತಮಗೆ ನೀಡಿರುವ ಗೌರವವನ್ನು ಜಿಲ್ಲೆಯ ಸಮಸ್ತ ಸಾಹಿತ್ಯಾಭಿಮಾನಿಗಳಿಗೆ ಅರ್ಪಿಸುತ್ತೇನೆ. ಕನ್ನಡ ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗಾಗಿ ಸಮ್ಮೇಳನವನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ, ರವೀಂದ್ರ ಬಾಕಳೆ, ಎಸ್.ಜಿ. ಕಡೇಮನಿ, ವೀರಬಸಯ್ಯ ಕಾಡಗಿಮಠ, ದೊಡ್ಡಯ್ಯ ಗದ್ದಡಕಿ, ಶಿವಾನಂದ ಹಿರೇಮಠ, ಪರಸಪ್ಪ ಅಳ್ಳಳ್ಳಿ, ಶೇಖರಗೌಡ ಪೊಲೀಸ್ಪಾಟೀಲ, ರಮೇಶ ಕುಲಕರ್ಣಿ, ಮೆಹೆಬೂಬ ಹುಸೇನ ಕನಕಗಿರಿ, ರಾಮಣ್ಣ ತಳವಾರ, ತೋಟಪ್ಪ ಕಾಮನೂರು, ಅಮರೇಗೌಡ ಜಾಲಿಹಾಳ, ಹನುಮಂತಪ್ಪ ಈಟಿ, ಶರಣಪ್ಪ ಲೈನದ, ಆರ್.ಕೆ. ಸುಬೇದಾರ, ನಿಂಗಪ್ಪ ಸಜ್ಜನ, ಮಹೇಶ ಹಡಪದ, ಲಲಿತಮ್ಮ ಹಿರೇಮಠ, ನಬಿಸಾಬ ಕುಷ್ಟಗಿ, ಮೋಹನಲಾಲ್ ಜೈನ್, ಹನುಮೇಶ ಗುಮಗೇರಿ, ಮೈಲಾರಪ್ಪ ಗೋನಾಳ, ಗವಿಸಿದ್ದಯ್ಯ ಹುಡೇಜಾಲಿ, ಶ್ರೀನಿವಾಸ ಜಹಗೀರದಾರ, ಅಬ್ದುಲ್ ಕರೀಮ ವಂಟೇಳಿ, ಸೋಮಶೇಖರ ವೈಜಾಪೂರು ಇದ್ದರು.